ದುರ್ಗಾದೇವಿ ಕೆರೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಬಾಗಿನ
ಬೆಂಗಳೂರು, ಅ. 27: ಈ ಬಾರಿ ಸುರಿದ ಉತ್ತಮ ಮಳೆಯಿಂದಾಗಿ ಹಿರೆಕೆರೂರಿನ ಐತಿಹಾಸಿಕ ದುರ್ಗಾದೇವಿ ಕೆರೆ ತುಂಬಿ ಹರಿಯುತ್ತಿದ್ದು, ಕೆರೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ್ ಅವರ ಜೊತೆಗೂಡಿ ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಸಿ. ಪಾಟೀಲ್ ಅವರು, ದುರ್ಗಾದೇವಿ ಕೆರೆ ತಾಲೂಕಿಗೆ ಕಳಶಪ್ರಾಯವಾಗಿದ್ದು, ಈ ಬಾರಿ ಮಳೆಯಿಂದಾಗಿ ತುಂಬಿ ಹರಿಯುತ್ತಿರುವುದು ಸಂತಸ ತಂದಿದೆ. ತಾಲೂಕಿನಲ್ಲಿ ಇದೇ ರೀತಿ ಜನತೆ ಸಂಪದ್ಭರಿತವಾಗಿ ಆರೋಗ್ಯದಿಂದ ಇರಲಿ. ಕೊರೊನಾ ವೈರಸ್ ಸೋಂಕು ಸಂಕಷ್ಟ ಆದಷ್ಟು ಬೇಗ ತೊಲಗಿ ಜನರು ನೆಮ್ಮದಿಯಿಂದ ಬಾಳುವಂತಾಗಲೆಂದು ಪ್ರಾರ್ಥಿಸಿದರು.
Recommended Video
Surya
Kumar
Yadav
ರನ್ನು
Australia
ತಂಡಕ್ಕೆ
ಈಗಲೂ
ಆಯ್ಕೆ
ಮಾಡಿಲ್ಲ
|
Oneindia
Kannada
ರೈತರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ರಾಜ್ಯ ಬಿಜೆಪಿ ಸರ್ಕಾರ ಮಾಡುತ್ತಿದೆ. ಎಲ್ಲ ರೀತಿಯ ರಸ ಗೊಬ್ಬರಗಳ ದಾಸ್ತಾನು ಇದ್ದು, ಯಾವುದೇ ತೊಂದರೆ ಆಗದಂತೆ ಮುಂಜಾಗ್ರತೆ ವಹಿಸಲಾಗಿದೆ.
Comments
English summary
Agriculture Minister B.C. Patil offered Bagina to Durgadevi Lake in Hirekerur in Haveri district. Know more,