ಕಸ್ತೂರಿ ರಂಗನ್ ವರದಿ: ಹಾಸನದ ಯಾವ ಹಳ್ಳಿಗಳಿಗೆ ಅಪಾಯ!
ಬೆಂಗಳೂರು, ಜುಲೈ19: ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸುವ ಕೇಂದ್ರ ಪರಿಸರ ಇಲಾಖೆಯ ಐದನೇ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಗೆ ರಾಜ್ಯ ಸರ್ಕಾರ ಮತ್ತು ಶಾಸಕರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನವನ್ನು ಮಾಡಿದರೇ ಸಾವಿರಾರು ಹಳ್ಳಿಗಳ ಜನರ ಜೀವನ ಹಾಳಾಗುತ್ತದೆ. ಹಾಸನ ಜಿಲ್ಲೆಯ ಯಾವ ಹಳ್ಳಿ ಈ ವ್ಯಾಪ್ತಿಗೆ ಬರಲಿದೆ ಎಂಬುದರ ವಿವರಣೆ ಇಲ್ಲಿದೆ.
ಪಶ್ಚಿಮಘಟ್ಟದ ಕಸ್ತೂರಿ ರಂಗನ್ ವರದಿಯಿಂದ ಚಿಕ್ಕಮಗಳೂರಿನ ಯಾವ ಹಳ್ಳಿಗಳಿಗೆ ಅಪಾಯ!
ಕೇಂದ್ರ ಪರಿಸರ ಇಲಾಖೆ ಜುಲೈ 4ರಂದು ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆಯನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶವನ್ನು ನೀಡಿದೆ. ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊರಡಿಸಿರುವ ಆದೇಶವನ್ನು ಅಧಿಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ ಜೀವನವೇ ಅಸ್ತವ್ಯಸ್ತವಾಗಿಬಿಡುತ್ತದೆ.
ಕೇಂದ್ರ ಸರ್ಕಾರಕ್ಕೆ ಗಾಡ್ಗಿಳ್ ವರದಿಯು 2010ರಲ್ಲಿ ಸಲ್ಲಿಕೆಯಾಗಿತ್ತು. ಗಾಡ್ಗಿಳ್ ವರದಿಯಲ್ಲಿ ಅವೈಜ್ಞಾನಿಕವಾಗಿದೆ ಎಂದು ಇಸ್ರೋ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ರಚನೆಯನ್ನು ಮಾಡಲಾಗಿತ್ತು. ಕಸ್ತೂರಿ ರಂಗನ್ ಸಮಿತಿಯ ಅಧ್ಯಯನವನ್ನು ಮಾಡಿ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲು ವರದಿಯನ್ನು ನೀಡಿತ್ತು. ಅದರಂತೆ ಗುಜರಾತ್ ತಮಿಳುನಾಡಿ, ಮಹಾರಾಷ್ಟ್ರ, ಗೋವಾ, ಕರ್ನಾಟಕದ ವ್ಯಾಪ್ತಿಯನ್ನು ಹೇಳಿತ್ತು. ಅದರಂತೆ ರಾಜ್ಯದ 20668 ಚದರ ಕಿ.ಮೀ ಒಳಗೊಂಡಿದೆ. ಅಂದರೆ ಕರುನಾಡಿನ ಸಾವಿರಾರು ಹಳ್ಳಿಯ ಜನರ ಬದುಕು ಬೀದಿಗೆ ಬೀಳುವಂತಾಗುತ್ತದೆ.
ಹಾಸನದ
ಯಾವ
ಹಳ್ಳಿಗಳು
ಈ
ವ್ಯಾಪ್ತಿಗೆ
ಬರುತ್ತದೆ
ಹಾಸನಜಿಲ್ಲೆಯ
ಆಲೂರು
ತಾಲೂಕಿನ
ಆದಿಬೈಲು
ಎಂಬ
ಹಳ್ಳಿ
ಈ
ವ್ಯಾಪ್ತಿಯಲ್ಲಿ
ಬರುತ್ತದೆ.
ಇನ್ನು
ಸಕಲೇಶಪುರ
ತಾಲೂಕಿನಲ್ಲಿ
ಅಚನಹಳ್ಳಿ,
ಮರಗುಂದ,
ಅಗನಿ,
ಕುಮಾರಹಳ್ಳಿ,
ಹೊಡಚಹಳ್ಳಿ,
ಕಾಡುಮನೆ
ಎಸ್ಕೇಟ್,
ಕಾಡುಮನೆ,
ಹೆಗ್ಗಡ್ಡೆ,
ಅಲುವಳ್ಳಿ,
ಕಾಗೆನರಿ
ಸ್ಟೇಟ್
ಎಸ್ಟೇಟ್,
ಕಡಗರವಳ್ಳಿ,
ಕಡಗರವಳ್ಳಿ,
ಎಡೆಕುಮಾರಿ,
ಹೊಂಗದಹಳ್ಳ,
ಬಲೆಹಳ್ಳ,
ಹೊಸಹಳ್ಳಿ,
ಮಾರ್ಕಳ್ಳಿ,
ಜೆಡಿಗಡ್ಡೆ,
ಬಟ್ಟೆಕುಮಾರಿ,
ಏತಹಳ್ಳ,
ಅತಿಹಳ್ಳಿ,
ಮರಗತ್ತೂರು,
ಅರಿಣಿ,
ವನಗೂರು,
ಮಂಕನಹಳ್ಳಿ,
ಮಂಕನಹಳ್ಳಿ,
ಅರಿಣಿ
ಎಸ್ಟೇಟ್,
ಬಣಗೆರೆ
ಎಂಬ
ಹಳ್ಳಿಗಳು
ಕಸ್ತೂರಿ
ರಂಗನ್
ವರದಿಯವಲ್ಲಿ
ಪರಿಸರ
ಸೂಕ್ಷ್ಮವಲಯದ
ವ್ಯಾಪ್ತಿಗೆ
ಬರಲಿದ್ದು.
ಈ
ವರದಿಯನ್ನು
ಸರಕಾರ
ಅನುಮೋದಿಸಿದರೆ
ಹಾಸನದ
ಈ
ಹಳ್ಳಿಗಳಿಗೂ
ಅನಾಹುತ
ಉಂಟಾಗಲಿದೆ.