ಹಾಸನ, ಸಕಲೇಶಪುರ, ಹೊಳೆನರಸೀಪುರ, ಬೇಲೂರು ಮಳೆ ವರದಿ
ಹಾಸನ ಸೆಪ್ಟೆಂಬರ್ 14: ಹಾಸನ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯಾಗಿರುವ ಮಳೆ ವರದಿ ಅನ್ವಯ ಹಾಸನ ತಾಲ್ಲೂಕಿನ ಕಸಬಾ 3.2ಮಿ.ಮೀ, ಕಟ್ಟಾಯ 5 ಮಿ.ಮೀ, ಸಾಲಗಾಮೆ 2. ಮಿ.ಮೀ, ಗೊರೂರು 2.1 ಮಿ.ಮೀ, ಶಾಂತಿಗ್ರಾಮ 6 ಮಿ.ಮೀ ಮಳೆಯಾಗಿದೆ.
ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ14.2 ಮಿ.ಮೀ, ಬೆಳಗೋಡು 14.6 ಮಿ.ಮೀ, ಹಾನುಬಾಳು 33.4 ಮಿ.ಮೀ, ಯಸಳೂರು 37.2 ಮಿ.ಮೀ, ಮಾರನಹಳ್ಳಿ 61.2 ಮಿ.ಮೀ, ಶುಕ್ರವಾರಸಂತೆ 29 ಮಿ.ಮೀ, ಹೊಸೂರು 16 ಮಿ.ಮೀ, ಹೆತ್ತೂರು 70.6 ಮಿ.ಮೀ, ಸಕಲೇಶಪುರ 26.6 ಮಿ.ಮೀ ಮಳೆಯಾಗಿದೆ.
ಕೊಡಗು ಜಿಲ್ಲೆಯ ಹೋಬಳಿವಾರು ಮಳೆ ವಿವರ, ಹಾರಂಗಿ ಮಟ್ಟ ಎಷ್ಟು?
ಬೇಲೂರು ತಾಲ್ಲೂಕಿನ ಬಿಕ್ಕೋಡು 12.4 ಮಿ.ಮೀ, ಹಗರೆ 3.4 ಮಿ.ಮೀ, ಅರೇಹಳ್ಳಿ 19 ಮಿ.ಮೀ, ಗೆಂಡೆಹಳ್ಳಿ 26 ಮಿ.ಮೀ, ಬೇಲೂರು 7.4 ಮಿ.ಮೀ, ಹಳೇಬಿಡು 3 ಮೀ,ಮೀ ಮಳೆಯಾಗಿದೆ.
ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ 2.1 ಮಿ.ಮೀ, ಹಳ್ಳಿಮೈಸೂರು 1.2 ಮಿ.ಮೀ, ಹೊಳೆನರಸೀಪುರ 1 ಮಿ.ಮೀ ಮಳೆಯಾಗಿದೆ ಹಾಗೂ ಆಲೂರು ತಾಲ್ಲೂಕಿನ ಪಾಳ್ಯ 11.7 ಮಿ.ಮೀ, ಕುಂದೂರು 10.6 ಮಿ.ಮೀ, ಕೆ. ಹೊಸಕೋಟೆ 17 ಮಿ.ಮೀ ಹಾಗೂ ಆಲೂರು 10.4 ಮಿ.ಮೀ, ಮಳೆಯಾಗಿದೆ.
ಅರಕಲಗೂಡು ತಾಲ್ಲೂಕಿನ ಕಸಬಾ 6.1 ಮಿ.ಮೀ, ಮಲ್ಲಿಪಟ್ಟಣ 12 ಮಿ.ಮೀ, ದೊಡ್ಡಬೆಮ್ಮತ್ತಿ 3.2 ಮಿ.ಮೀ, ದೊಡ್ಡಮಗ್ಗೆ 2.8 ಮಿ.ಮೀ, ಕೊಣನೂರು 1.8 ಮಿ.ಮೀ, ರಾಮನಾಥಪುರ 1 ಮಿ.ಮೀ, ಮಳೆಯಾಗಿದೆ. (ಮಾಹಿತಿ ಕೃಪೆ: ಕರ್ನಾಟಕ ವಾರ್ತೆ)
ಹಾಸನ ನಗರದಲ್ಲಿ ಕನಿಷ್ಠ 18 ರಿಂದ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ತನಕ ಮುಂದಿನ ಐದು ದಿನಗಳ ಕಾಲ ತಾಪಮನ ಇರಲಿದ್ದು, ಮೋಡ ಕವಿದ ವಾತಾವರಣ ಸಾಧಾರಣ ಮಳೆ ನಿರೀಕ್ಷೆಯಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸೆ.14ರಿಂದ ಭಾರಿ ಮಳೆ, ಆರೆಂಜ್ ಅಲರ್ಟ್ ಘೋಷಣೆ
ರಾಜ್ಯದ ಹವಾಮಾನ ವರದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪ್ರಭಾವದಿಂದಾಗಿ ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳವರೆಗೂ ಮಳೆಯಾಗುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಹಾಸನ, ಶಿವಮೊಗ್ಗ ಕೊಡಗು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 15ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮೂರ್ನಾಲ್ಕು ದಿನಗಳವರೆಗೂ ಅಧಿಕ ಮಳೆಯಾಗುವುದಾಗಿ ತಿಳಿಸಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ. ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಇನ್ನೆರಡು ದಿನ ಚದುರಿದಂತೆ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಕರಾವಳಿ ಮತ್ತು ಮಲೆನಾಡು ಮಾತ್ರವಲ್ಲ, ಉತ್ತರ ಕರ್ನಾಟಕದ ಕೊಪ್ಪಳ, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬೆಳಗಾವಿ, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಹ ಮಳೆಯಾಗಲಿದೆ.
Recommended Video