ಬಿಜೆಪಿಯ ಕೆಲ ಶಾಸಕರು ಪಕ್ಷ ಬಿಟ್ಟು ಬರಲು ತಯಾರಿದ್ದಾರೆ: ಕುಮಾರಸ್ವಾಮಿ
ಹಾಸನ, ಜನವರಿ 06: ಆಪರೇಷನ್ ಕಮಲ ಸೂತ್ರಧಾರಿ ಬಿಜೆಪಿಗೆ ಆಪರೇಷನ್ ಭೀತಿ ಕಾಡುವಂತಹ ಹೇಳಿಕೆಯನ್ನು ಜೆಡಿಎಸ್ ನಾಯಕ ಕುಮಾರಸ್ವಾಮಿ ನೀಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ಕುಮಾರಸ್ವಾಮಿ, '10-15 ಬಿಜೆಪಿ ಶಾಸಕರು ಪಕ್ಷ ಬಿಟ್ಟು ಹೊರಬರಲು ತುದಿಗಾಲಿನಲ್ಲಿ ನಿಂತಿದ್ದಾರೆ' ಎಂದಿದ್ದಾರೆ.
ನನ್ನ ಆರೋಗ್ಯ ಚೆನ್ನಾಗಿದೆ, ನಿವೃತ್ತಿಯ ವಯಸ್ಸಾಗಿಲ್ಲ: ಕುಮಾರಸ್ವಾಮಿ
ಕೆಲವು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದ ಕುಮಾರಸ್ವಾಮಿ, 'ನಾನು ಕೊಳಕಿಗೆ ಕೈ ಹಾಕುವ ಕೆಲಸ ಮಾಡುವುದಿಲ್ಲ, ಸರ್ಕಾರವನ್ನು ಉರುಳಿಸುವ ಯತ್ನ ಮಾಡುವುದಿಲ್ಲ' ಎಂದು ಸ್ಪಷ್ಟಪಡಿಸಿದರು.
ಸಿದ್ದಗಂಗಾ ಶ್ರೀಗಳೇ ಪ್ರಧಾನಿ ಮೋದಿ ಭಾಷಣ ಹೊಗಳಿದ್ದಾರೆ, ನಿಮ್ಮದೇನ್ರೀ..
ಸಂಪುಟ ವಿಸ್ತರಣೆ ಅಸಮಾಧಾನ ಹಾಗೂ ಮಾಜಿ ಅನರ್ಹ ಶಾಸಕರಿಗೆ ಮಣೆ ಹಾಕುವ ವಿಚಾರ ಮೂಲ ಬಿಜೆಪಿ ಶಾಸಕರಲ್ಲಿ ಅತೃಪ್ತಿ ಮೂಡಿಸಿರುವ ಹೊತ್ತಿನಲ್ಲಿಯೇ ಕುಮಾರಸ್ವಾಮಿ ನೀಡಿರುವ ಈ ಹೇಳಿಕೆ ಕುತೂಹಲ ಕೆರಳಿಸಿದೆ.
ರಾಮನಗರದ ಹೆಸರು ಬದಲಾವಣೆ; ಕುಮಾರಣ್ಣನ ಸರಣಿ ಟ್ವೀಟ್
ಶ್ರೀರಾಮುಲು, ಉಮೇಶ್ ಕತ್ತಿ, ರೇಣುಕಾಚಾರ್ಯ, ಅರವಿಂದ ಲಿಂಬಾವಳಿ ಸೇರಿದಂತೆ ಇನ್ನೂ ಹಲವು ಶಾಸಕರುಗಳು ಸಂಪುಟ ವಿಸ್ತರಣೆ ವೇಳೆ ಕಡೆಗಣೆನೆಗೆ ತುತ್ತಾಗಿ ಪಕ್ಷದ ವಿರುದ್ಧ ಸಿಟ್ಟಾಗಿದ್ದಾರೆ.