ಶಿರಾಡಿಘಾಟ್: ಮೇ ಅಂತ್ಯದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ
ಸಕಲೇಶಪುರ, ಏಪ್ರಿಲ್ 19: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರಾಡಿ ಘಾಟ್ ರಸ್ತೆಯ 2 ನೇ ಹಂತದ ಕಾಂಕ್ರೀಟ್ ರಸ್ತೆ ಕಾಮಗಾರಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಮೇ ಅಂತ್ಯದೊಳಗೆ ಪೂರ್ಣಗೊಂಡು ಹೆದ್ದಾರಿ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.
ಶಿರಾಡಿ ಘಾಟ್ ಬಂದ್: ವಾಹನ ಸಂಚಾರ ನಿರ್ಬಂಧ
ಸಮರೋಪಾದಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ 9.5ಕಿ.ಮೀ ರಸ್ತೆ ಕಾಮಗಾರಿ ಮುಗಿದಿದೆ. ಇನ್ನುಳಿದ ಕಾಮಗಾರಿ ಪ್ರಗತಿಯಲ್ಲಿದೆ. ಮಳೆಗಾಲ ಪ್ರಾರಂಭವಾಗುವುದರೊಳಗಾಗಿ ಕಾಮಗಾರಿ ಮುಗಿಸುವ ಉದ್ದೇಶವಿಟ್ಟುಕೊಂಡು ಕೆಲಸ ಪ್ರಾರಂಭಿಸಿದ ಮಂಗಳೂರಿನ ಓಷಿಯನ್ ಕನ್ಸ್ಟ್ರಕ್ಷನ್ ಕಂಪನಿ, ನಿಗದಿತ ಗುರಿಗಿಂತ 2 ತಿಂಗಳು ಮೊದಲೇ ಕಾಮಗಾರಿ ಮುಗಿಸುವ ಉತ್ಸಾಹದಲ್ಲಿದೆ, ಕಳೆದ ವರ್ಷ ಕಾಮಗಾರಿ ಮಾಡಿರುವ ಅನುಭವ ಮತ್ತು ಆಗಿಂದಾಗ್ಗೆ ಮಳೆ ಸಮಸ್ಯೆ ಇಲ್ಲದ ಕಾರಣ ಅವಧಿಗಿಂತ ಬೇಗನೆ ಕಾಮಗಾರಿ ಮುಗಿಯಲಿದೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
13ಕಿಮೀ 78 ಕೋಟಿ ರೂ.ವೆಚ್ಚ: ಕೆಂಪು ಹೊಳೆಯಿಂದ ಗುಂಡ್ಯ ತನಕ 13ಕಿ.ಮೀ ರಸ್ತೆ ನಿರ್ಮಾಣಕ್ಕೆ 78 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ 3 ಸೇತುವೆಗಳ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಒಂದು ಹೊಸ ಸೇತುವೆ ನಿರ್ಮಾಣವಾಗಲಿದೆ. 74 ಕಡೆಗಳಲ್ಲಿ ಚರಂಡಿ ಕೆಲಸವನ್ನು ಈಗಾಗಲೇ ಮುಗಿಸಲಾಗಿದೆ. ಹೊಳೆ ಬದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿ ಮಾತ್ರ ನಡೆಯುತ್ತಿದೆ.
ಸುರಂಗ ಯೋಜನೆ ಕನಸು: ಜಪಾನ್ ತಾಂತ್ರಿಕತೆ ಮತ್ತು ನೆರವು ಬಳಸಿಕೊಂಡು ಸುರಂಗ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಸಕಲೇಶಪುರ ಭಾಗದಿಂದ ಗುಂಡ್ಯ ತನಕ ಹಲವು ಗುಡ್ಡಗಳನ್ನು ಆಯ್ದು ಹೋಗುವ ಈ ಸುರಂಗ ಮಾರ್ಗದ ಉದ್ದ 18 ಕಿ.ಮೀ ಇರಲಿದೆ.
ಎರಡು ವಾಹನಗಳು ಚಲಿಸಲು ಅನುಕೂಲವಾಗುವಂತೆ ದ್ವಿಪಥ ಹೊಂದಿರುವ ಸುರಂಗ ನಿರ್ಮಾಣ 100.ಕಿ.ಮೀ ವೇಗದಲ್ಲಿ ವಾಹನಗಳು ಚಲಿಸಲು ಅನುಕೂಲವಾಗುವಂತೆ ಮಾಡಲು ಉದ್ದೇಶಿಸಲಾಗಿದೆ.