ಶಿರಾಡಿ ಘಾಟ್: ಜೂನ್ಗೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ
ಸಕಲೇಶಪುರ, ಮಾರ್ಚ್ 31: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರಾಡಿ ಘಾಟ್ ರಸ್ತೆಯ 2 ನೇ ಹಂತದ ಕಾಂಕ್ರೀಟ್ ರಸ್ತೆ ಕಾಮಗಾರಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಮೇ ಅಂತ್ಯದೊಳಗೆ ಪೂರ್ಣಗೊಂಡು ಜೂನ್ ಆರಂಭದಲ್ಲಿ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ರಾಷ್ಟ್ರೀಯ ಹೆದ್ದಾರಿ ಕೆಂಪುಹೊಳೆಯಿಂದ ಅಡ್ಡಹೊಳೆ ವರೆಗೆ 13 ಕಿ.ಮೀ ಕಾಂಕ್ರೀಟ್ ರಸ್ತೆ 2 ನೇ ಹಂತದ ಕಾಮಗಾರಿಗೆ 74 ಕೋಟಿ ರೂ. ಮಂಜೂರಾಗಿದ್ದು, ಜರ್ಮನಿಯಿಂದ ತರಿಸಲಾದ ಹೊಸ ಯಂತ್ರ ಬಳಸಿ, ಆಧುನಿಕ ತಂತ್ರಜ್ಞಾನದಲ್ಲಿ ಕಾಮಗಾರಿ ಅತಿ ವೇಗದಲ್ಲಿ ಸಾಗುತ್ತಿದೆ. 77 ಮೋರಿಗಳ ಪೈಕಿ 74 ಮೋರಿಗಳ ಸೇತುವೆ ವಿಸ್ತರಣೆ ಕಾಮಗಾರಿಯೂ ನಡೆಯುತ್ತಿದೆ.
ಶಿರಾಡಿ ಘಾಟ್ ಬಂದ್: ವಾಹನ ಸಂಚಾರ ನಿರ್ಬಂಧ
ವಿಶೇಷ ತಂತ್ರಜ್ಞಾನ: ಶಿರಾಡಿ ಘಾಟ್ ಪ್ರದೇಶದಲ್ಲಿ ವರ್ಷದ 6 ತಿಂಗಳು ನಿರಂತರ ಮಳೆ ಸುರಿಯುತ್ತಿರುತ್ತದೆ. ಆದರೂ ಬಂಡೆ ಕಲ್ಲುಗಳ ಮಧ್ಯದಿಂದ ಸದಾ ನೀರು ಜಿನುಗುತ್ತಿರುವುದು ಮತ್ತು ನೀರಿನ ಒರತೆಯಿಂದಾಗಿ ಮಣ್ಣು ಮೃದುವಾಗಿರುತ್ತದೆ. ಆದ್ದರಿಂದ ವಿಶೇಷ ತಂತ್ರಜ್ಞಾನದಿಂದ ರಸ್ತೆ ನಿರ್ಮಿಸಲಾಗುತ್ತಿದೆ. ಕಾಮಗಾರಿ ಅತಿ ವೇಗದಿಂದ ನಡೆಯುತ್ತಿದೆ.
ಆದುನಿಕ ಜರ್ಮನಿ ಯಂತ್ರ: ಜರ್ಮನಿಯಿಂದ 10 ಕೋಟಿ ರೂ. ಮೌಲ್ಯದ ವಿರ್ಟ್ ಜನ್ ಕಂಪನಿಯ ಟಿಸಿಎಂ-180 ಸೆನ್ಸರ್ ಪೇವರ್ ಯಂತ್ರ ತರಿಸಲಾಗಿದ್ದು, ಈ ಮೂಲಕ ಜಿಎಸ್ ಬಿ ಮತ್ತು ಡಿಎಲ್ ಸಿಹಾಗೂ ಪಿಕ್ಯೂಸಿ 3 ಹಂತದಲ್ಲಿ 600 ಎಂಎಂ ದಪ್ಪದಲ್ಲಿ ಪ್ರತಿದಿನ 2ರಿಂದ 3 ಕಿ.ಮೀ ಉದ್ದಕ್ಕೆ ಕಾಂಕ್ರೀಟೀಕರಣ ನಡೆಯುತ್ತಿದೆ.