ಪ್ರಶಾಂತ್ ಕೊಲೆ ನಂತರ ಪೊಲೀಸ್ ಠಾಣೆಯಲ್ಲಿ ಸಂಭ್ರಮಾಚರಣೆ: ಎಚ್.ಡಿ. ರೇವಣ್ಣ ಆರೋಪ
ಹಾಸನ, ಜೂನ್ 5 : ಜೆಡಿಎಸ್ನ ನಗರಸಭೆ ಸದಸ್ಯ ಪ್ರಶಾಂತ್ ಕೊಲೆ ನಂತರ ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು ಕೇಕ್ ಕತ್ತರಿಸಿ ಸಂಭ್ರಮ ಪಟ್ಟಿದ್ದಾರೆ ಎಂದು ಶಾಸಕ ಎಚ್ಡಿ ರೇವಣ್ಣ ಗಂಭೀರವಾಗಿ ಆರೋಪಿಸಿದ್ದಾರೆ. ಇಂದು ಸಂಸದರ ನಿವಾಸದಲ್ಲಿ ಮಾತನಾಡಿದ ಅವರು, ಗುಪ್ತಚರ ಇಲಾಖೆ ನಿರ್ಲಕ್ಷ್ಯದಿಂದ ಈ ಕೊಲೆ ನಡೆದಿದೆ ಎಂದರು.
ಪ್ರಶಾಂತ್ ಹತ್ಯೆಯಾದ ಬಳಿಕ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ವಿಜಯನಗರದಲ್ಲಿ ಮತ್ತು ತಮ್ಮ ಪೊಲೀಸ್ ಇಲಾಖೆಯಲ್ಲಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮ ಪಟ್ಟಿದ್ದಾರೆ. ಇನ್ನು ಕೊಲೆಯಾದ ಬಳಿಕ ಹಾಸನ ನಗರ ಪೊಲೀಸ್ ಠಾಣೆ ಹಾಗೂ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಗೆ ಯಾವ ಯಾವ ವ್ಯಕ್ತಿಗಳು ಬಂದಿದ್ದರು ಎಂಬುದು ಸಿಸಿಟಿವಿ ಚಿತ್ರೀಕರಿಸಿದೆ. ಆದರೆ ಅದನ್ನು ನೀಡಬೇಕೆಂದು ಆರ್ಟಿಐ ಅರ್ಜಿ ಸಲ್ಲಿಸಿ ಕೇಳಿದರೆ ನಮ್ಮಲ್ಲಿ ಸಿಸಿಟಿವಿ ಫೋಟೋಸ್ ಕೊಡಲು ಸಾಧ್ಯವಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಸಾವಿನೊಂದಿಗೆ ರಾಜಕೀಯ ಮಾಡಲ್ಲ, ಪ್ರಶಾಂತ್ ಸಾವು ನೋವು ತಂದಿದೆ : ಪ್ರೀತಂ ಗೌಡ
ರಾಜ್ಯ ಸರಕಾರವೇ ಸಿಸಿಟಿವಿ ದೃಶ್ಯಾವಳಿಗಳನ್ನು ಕನಿಷ್ಠ ಒಂದು ವರ್ಷ ಸಂಗ್ರಹ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದರೂ ಇವರು ಯಾಕೆ ಅದನ್ನು ಪಾಲಿಸಿಲ್ಲ ಎಂದು ಹಾಸನ ನಗರ ಹಾಗೂ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯ ವಿರುದ್ಧ ರೇವಣ್ನ ಆರೋಪ ಮಾಡಿದ್ದು, ಇದರ ಸಮಗ್ರ ತನಿಖೆಯಾಗಬೇಕು ಎಂದು ಸರಕಾರ ಮತ್ತು ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.
ನಗರಸಭಾ ಸದಸ್ಯನ ಕೊಲೆ ಪ್ರಕರಣದಲ್ಲಿ ಸಮಗ್ರ ತನಿಖೆ ಮಾಡುವುದಿಲ್ಲ ಎಂಬ ಕಾರಣಕ್ಕಾಗಿ ಅರಸೀಕೆರೆಯ ಸಿಪಿಐ ವಸಂತ್ ರನ್ನು ನೇಮಿಸಿದ್ದರು. ಅವರು ವರದಿ ಕೊಟ್ಟ ಬಳಿಕ ನಡುರಾತ್ರಿಯಲ್ಲಿ ವಿಜಯ್ ಭಾಸ್ಕರ್ ಏಕೆ ಹೋಗಬೇಕಿತ್ತು. ವಿಜಯಭಾಸ್ಕರ್ ಮತ್ತು ನಗರ ಠಾಣೆಯ ಪಿಐ ಅಕ್ರಮಗಳಲ್ಲಿ ಭಾಗಿಯಾಗಿ ಪೊಲೀಸ್ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಬಗ್ಗೆ ಸಮಗ್ರ ತನಿಖೆಯಾಗಬೇಕು ರೇವಣ್ಣ ಆಗ್ರಹ ಮಾಡಿದ್ದಾರೆ.
ಜೆಡಿಎಸ್ ಮುಖಂಡನ ಹತ್ಯೆ: ಪೊಲೀಸ್ ಅಧಿಕಾರಿಗಳ ವಿರುದ್ಧ ಹೆಚ್.ಡಿ.ರೇವಣ್ಣ ಗರಂ
24
ಗಂಟೆಗಳಲ್ಲಿ
ಆರೋಪಿಗಳ
ಬಂಧನ
ಜೆಡಿಎಸ್
ಪ್ರಾಬಲ್ಯವಿರುವ
ಜಿಲ್ಲೆಯಲ್ಲಿ
ತಮ್ಮ
ಕಾರ್ಯಕರ್ತನ
ಹತ್ಯೆಯನ್ನು
ಖಂಡಿಸಿ
ರೇವಣ್ಣ,
ಸಂಸದ
ಪ್ರಜ್ವಲ್
ರೇವಣ್ಣ
ಆರೋಪಿಗಳನ್ನು
ಬಂಧಿಸುವವರೆಗೆ
ಮೃತದೇಹವನ್ನು
ಮರಣೋತ್ತರ
ಪರೀಕ್ಷೆಗೆ
ಬಿಡಲ್ಲ
ಎಂದು
ಪಟ್ಟು
ಹಿಡಿದಿದ್ದರು.
ನಂತರ
ಪೊಲೀಸ್
ಇಲಾಖೆ
ವಿಶೇಷ
ತಂಡಗಳನ್ನು
ರಚಿಸಿ
24
ಗಂಟೆಯೊಳಗೆ
ಇಬ್ಬರು
ಆರೋಪಿಗಳನ್ನು
ಬಂಧಿಸಿತ್ತು.
ಕೊಲೆಗೆ
ಕಾರಣ
ಆರೋಪಿ
ಪೂರ್ಣಚಂದ್ರ
ಕೆರೆಯಲ್ಲಿ
ಮೀನು
ಹಿಡಿಯುವ
ಕೆಲಸ
ಮಾಡುತ್ತಿದ್ದ.
ಕೊಲೆ
ಪ್ರಕರಣದ
ಮತ್ತೊಬ್ಬ
ಆರೋಪಿಯ
ಪತ್ನಿಗೂ
ಕೊಲೆಯಾದ
ನಗರಸಭಾ
ಸದಸ್ಯ
ಪ್ರಶಾಂತ್
ನಾಗರಾಜಗೂ
ಸಂಬಂಧ
ಇತ್ತು
ಎನ್ನುವ
ಆರೋಪವಿದೆ.
ಇತ್ತೀಚಿಗೆ
ಆರೋಪಿಯ
ಪತ್ನಿ
ಹೆಸರಲ್ಲಿದ್ದ
ಸೈಟ್
ಮಾರಾಟ
ಮಾಡಿಸಿದ್ದು,
ಈ
ವಿಚಾರವಾಗಿ
ಪೂರ್ಣಚಂದ್ರ
ಮತ್ತು
ಪ್ರಶಾಂತ್
ನಡುವೆ
ವೈಮನಸ್ಸು
ಏರ್ಪಟ್ಟಿತ್ತು.
ಇದಾದ ಬಳಿಕ ಕೆಲವರುಗಳ ಸಮ್ಮುಖದಲ್ಲಿ, ರಾಜಿ ಪಂಚಾಯಿತಿ ನಡೆದು ತೀರ್ಮಾನ ಮಾಡಿದ ಮಾಡಿದ್ದರು ಎನ್ನುವ ಸುದ್ದಿ ಇದೆ. ಪಂಚಾಯಿತಿಯ ತೀರ್ಮಾನಕ್ಕೆ ಬದ್ಧವಾಗದ ಪ್ರಮುಖ ಆರೋಪಿ ಪೂರ್ಣಚಂದ್ರ ಸೇಡುತೀರಿಸಿಕೊಳ್ಳಲು ಆತನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ವಾರಗಟ್ಟಲೇ ಆತನ ಚಲನವಲನಗಳನ್ನು ವೀಕ್ಷಣೆ ಮಾಡಿ ಬುಧವಾರ ಪ್ರಶಾಂತ್ ಒಂಟಿಯಾಗಿ ಮನೆಕಡೆಗೆ ಹೋಗುವಾಗ ಜವನಹಳ್ಳಿ ಮಠದ ರಸ್ತೆಯಲ್ಲಿ ಯಾರು ಇಲ್ಲದ ವೇಳೆ ಬೈಕ್ ಅಡ್ಡಗಟ್ಟಿ ತನ್ನ ಸಹಚರರೊಂದಿಗೆ ಹಲ್ಲೆ ಮಾಡಿ ಸ್ಥಳದಲ್ಲಿಯೇ ಬರ್ಬರವಾಗಿ ಕೊಚ್ಚಿ ಪರಾರಿಯಾಗಿದ್ದರು.
(ಒನ್ಇಂಡಿಯಾ ಸುದ್ದಿ)