ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ಇಲ್ಲ: ಡಿಕೆಶಿ
ಹಾಸನ, ಜನವರಿ 22: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆಯಿಲ್ಲ, ಸದ್ಯದಲ್ಲಿ ಕಲ್ಲಿದ್ದಲು ಸಮಸ್ಯೆ ಇದೆ, ಏನೇ ಸಮಸ್ಯೆಯಾದರೂ ಕರೆಂಟ್ ನೀಡುತ್ತೇವೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸೋಲು-ಗೆಲುವಿನ ಬಗ್ಗೆ ಸಿಎಂಗೆ ಗುಪ್ತಚರ ಇಲಾಖೆ ಶಾಕಿಂಗ್ ವರದಿ ಸಲ್ಲಿಕೆ ಹಿನ್ನೆಲೆ, ಇದು ಸತ್ಯಕ್ಕೆ ದೂರವಾದ ವಿಚಾರ, ಆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ 20 ದಿನ ಕರೆಂಟ್ ಇರಲ್ಲ!
ಜೆಡಿಎಸ್ ಬಗ್ಗೆ ಸಾಫ್ಟ್ ಕಾರ್ನರ್ ವಿಚಾರ ಕುರಿತು ಮಾತನಾಡಿ, ನಾನು ಈಗ ಎಲ್ಲರೊಂದಿಗೂ ಸಾಫ್ಟ್ ಆಗಿದ್ದೇನೆ, ರಾಮನಗರ ಸೇರಿದಂತೆ ಎಲ್ಲೂ ಯಾರೊಂದಿಗೂ ಮೈತ್ರಿ ಇಲ್ಲ, ಮನುಷ್ಯತ್ವ ಹಿನ್ನೆಲೆಯಲ್ಲಿ ಕೆಲವರಿಗೆ ಗೌರವ ಕೊಡುತ್ತೇವೆ, ಕಾಂಗ್ರೆಸ್ ಗೆಲುವಿನ ಸಂಬಂಧ ನಾನು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ,
ಮಹದಾಯಿ ಹೋರಾಟ ಹಿನ್ನೆಲೆ, ಜ.25 ರ ಕರ್ನಾಟಕ ಬಂದ್ ಗೆ ಕಾಂಗ್ರೆಸ್ ಕೈವಾಡ ಇಲ್ಲ, ಹೋರಾಟ ಮಾಡುವುದು ಅವರ ಹಕ್ಕು, ಮಹದಾಯಿ ವಿಚಾರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮಾತಿಗೆ ತಪ್ಪಿದ್ದಾರೆ, ಮಾಜಿ ಸಿಎಂ ಶೆಟ್ಟರ್ ಆರೋಪ ಅಲ್ಲ ಗಳೆದರು. ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಬೋರ್ಡ್ ಮೀಟಿಂಗ್ ಕರೆಯಲಾಗಿದೆ ಎಂದರು.