ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದ ಜೆಡಿಎಸ್ ಶಾಸಕ
Recommended Video
ಹಾಸನ, ಸೆಪ್ಟೆಂಬರ್ 21: ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಜೆಡಿಎಸ್ ಶಾಸಕ ಕೆಎಂ ಶಿವಲಿಂಗೇಗೌಡ ಪರೋಕ್ಷವಾಗಿ ಕಾಂಗ್ರೆಸ್ ಪರ ಮಾತನಾಡಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದ ಯೋಜನೆಗಳು ಉತ್ತಮವಾಗಿದ್ದು, ಅವುಗಳು ಇನ್ನೂ ಪೂರ್ಣಗೊಂಡಿಲ್ಲ ಹಾಗಾಗಿ ಯೋಜನೆ ಪೂರ್ಣಗೊಳಿಸುವುದಕ್ಕಾದರೂ ಅವರು ಮುಖ್ಯಮಂತ್ರಿಯಾಗಲೇಬೇಕು ಎಂದು ಹೇಳಿದ್ದಾರೆ.
ಇನ್ನೊಂದೆಡೆ ಕೋಡಿ ಮಠದ ಶ್ರೀಗಳು ಮಧ್ಯಂತರ ಚುನಾವಣೆ ಬರಲಿದ್ದು, ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆ ಎಂದು ನುಡಿದಿದ್ದರು. ಈಗ ಕಾಂಗ್ರೆಸ್ ಪರ ಜೆಡಿಎಸ್ ಶಾಸಕರೂ ಕೂಡ ಮಾತನಾಡಲು ಆರಂಭಿಸಿದ್ದಾರೆ.
ಹಿಂದೆ ಒಂದೇ ಪಕ್ಷದಲ್ಲಿದ್ದವರು. ಪಕ್ಷ ತೊರೆದ ನಂತರವೂ ಅವರ ನಾಯಕತ್ವವನ್ನು ನಾನು ನಂಬಿದ್ದೇನೆ. ನನ್ನ ಕ್ಷೇತ್ರಾದ್ಯಂತ ಹಲವು ಕಾಮಗಾರಿಗಳಿಗೆ ಅವರು ಅನುಮೋದನೆ ಕೊಟ್ಟು ಹಣವನ್ನು ಬಿಡುಗಡೆ ಮಾಡಿದ್ದಾರೆ. ಆ ಯೋಜನೆಗಳು ಮತ್ತೆ ಪೂರ್ಣಗೊಳ್ಳೊದಿಕ್ಕೆ ಸಿದ್ದರಾಮಯ್ಯನವರೇ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ತಮ್ಮ ಮನದಾಸೆಯನ್ನು ಹೊರಹಾಕಿದರು.
ಮೈತ್ರಿ ಸರ್ಕಾರ ಪತನದ ಬಳಿಕ ಜೆಡಿಎಸ್ ನಲ್ಲಿ ಆಂತರಿಕ ಯುದ್ಧವೇ ಆರಂಭಗೊಂಡಿದೆ. ಅಧಿಕಾರ ಕಳೆದುಕೊಂಡ ಬಳಿಕ ಜೆಡಿಎಸ್ ಶಾಸಕರು ಬಿಜೆಪಿ ನಾಯಕರನ್ನು ಹೊಗಳಿ, ಸ್ವಪಕ್ಷದ ಮುಖಂಡರ ವಿರುದ್ಧ ಕಿಡಿಕಾರಿದ್ದರು.
ಮಾಜಿ
ಸಚಿವರಾದ
ಜಿ.ಟಿ.ದೇವೇಗೌಡ
ಮತ್ತು
ಎಸ್.ಆರ್.ಶ್ರೀನಿವಾಸ್
ಬಿಜೆಪಿಯನ್ನು
ಹೊಗಳಿ
ಜೆಡಿಎಸ್
ವರಿಷ್ಠರಿಗೆ
ಟಾಂಗ್
ಕೊಟ್ಟಿದ್ದರು.
ಈ
ಎಲ್ಲ
ಬೆಳವಣಿಗೆಗಳ
ನಡುವೆ
ಜೆಡಿಎಸ್
ನ
ಕೆಲ
ಶಾಸಕರು
ಪಕ್ಷ
ತೊರೆಯಲಿದ್ದಾರೆ
ಎಂಬ
ಮಾತುಗಳು
ಕೇಳಿ
ಬಂದಿವೆ.
ಅರಸೀಕೆರೆಯ
ಗಂಗೇಮಡು
ಗ್ರಾಮದಲ್ಲಿ
ಕಾಗಿನೆಲೆ
ಪೀಠದ
ಶಾಖಾ
ಮಠದ
ಕಟ್ಟಡಕ್ಕೆ
ಶಿಲಾನ್ಯಾಸ
ಕಾರ್ಯಕ್ರಮದಲ್ಲಿ
ಪಾಲ್ಗೊಂಡಿದ್ದರು.