ಹಾಸನ ಜಿಲ್ಲೆಯ ಚೌಡನಹಳ್ಳಿಯಲ್ಲಿ 38 ಕೋತಿಗಳನ್ನು ಕೊಂದ ಕ್ರೂರಿಗಳು!?
ಹಾಸನ,
ಜುಲೈ
29:
ಹಾಸನ
ಜಿಲ್ಲೆಯ
ಗ್ರಾಮವೊಂದರ
ರಸ್ತೆ
ಮಧ್ಯದಲ್ಲೇ
ದೊಡ್ಡ
ಗೋಣಿ
ಚೀಲವೊಂದನ್ನು
ಎಸೆಯಲಾಗಿತ್ತು.
ನಡುರಸ್ತೆಯಲ್ಲಿ
ಬಿದ್ದಿರುವ
ಈ
ಚೀಲದಲ್ಲಿ
ಏನಿರಬಹುದು
ಎಂದು
ಸ್ಥಳೀಯರು
ಅದನ್ನು
ತೆರೆದು
ನೋಡಿದಾಗ
ಮನಕಲುಕುವಂತಾ
ದೃಶ್ಯ
ಕಣ್ಣಿಗೆ
ರಾಚಿತು.
ಕರ್ನಾಟಕದ
ಹಾಸನ
ಜಿಲ್ಲೆಯ
ಚೌಡನಹಳ್ಳಿ
ಗ್ರಾಮವು
ಗುರುವಾರ
ಅಮಾನುಷ
ಸನ್ನಿವೇಶವೊಂದಕ್ಕೆ
ಸಾಕ್ಷಿ
ಆಯಿತು.
38ಕ್ಕೂ
ಹೆಚ್ಚು
ಕೋತಿಗಳಿಗೆ
ವಿಷಾಹಾರ
ಉಣಿಸಿ
ಹಾಗೂ
ಹೊಡೆದು
ಕೊಂದು
ಹಾಕಿರುವ
ಬಗ್ಗೆ
ವರದಿಯಾಗಿದೆ.
35ಕ್ಕೂ
ಹೆಚ್ಚು
ಕೋತಿಗಳ
ಶವ
ಪತ್ತೆಯಾಗಿದ್ದು,
20ಕ್ಕೂ
ಹೆಚ್ಚು
ಕೋತಿಗಳು
ಗಾಯಗೊಂಡಿರುವುದು
ಗೊತ್ತಾಗಿದೆ.
ರಾಯಚೂರು: ಕೋತಿಗಳ ಕಾಟದಿಂದ ಬೇಸತ್ತ ಗ್ರಾಮಸ್ಥರಿಂದ ಊರು ತೊರೆಯುವ ನಿರ್ಧಾರ
"ಹಾಸನ ಜಿಲ್ಲೆಯ ಚೌಡನಹಳ್ಳಿಯಲ್ಲಿ ಕೆಲವು ದುಷ್ಕರ್ಮಿಗಳಉ ಕೋತಿಗಳಿಗೆ ವಿಷಾಹಾರ ನೀಡಿ ನಂತರ ಅವುಗಳನ್ನು ಗೋಣಿ ಚೀಲದಲ್ಲಿ ತುಂಬಿ ಥಳಿಸಿ ಕೊಂದಿರುವ ಬಗ್ಗೆ ಎಂದು ಪ್ರಾಥಮಿಕ ವರದಿಯಿಂದ ಗೊತ್ತಾಗಿದೆ," ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡು ನರಳುತ್ತಿದ್ದ 20 ಕೋತಿಗಳಿಗೆ ಗ್ರಾಮಸ್ಥರು ನೀರು ಆಹಾರ ನೀಡಿ ಆರೈಕೆ ಮಾಡಿದ್ದಾರೆ.
Recommended Video
ದುಷ್ಕರ್ಮಿಗಳ ಕೃತ್ಯಕ್ಕೆ ಗ್ರಾಮಸ್ಥರ ತೀವ್ರ ಆಕ್ರೋಶ:
ಹಾಸನ ಜಿಲ್ಲೆಯ ಚೌಡನಹಳ್ಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಕೋತಿಗಳೇ ಇರಲಿಲ್ಲ. ಬೇರೆ ಯಾವುದೋ ಊರಿನಿಂದ ಕೋತಿಗಳನ್ನು ಹೊಡೆದು ಹಾಕಿ ಅದನ್ನು ಈ ಗ್ರಾಮದ ರಸ್ತೆಯ ನಡುವೆ ಎಸೆದು ಹೋಗಲಾಗಿದೆ," ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೋತಿಗಳಿಗೆ ವಿಷ ಮಿಶ್ರಿತ ಆಹಾರವನ್ನು ನೀಡಲಾಗಿದೆ. ಅದರಿಂದ ನಿತ್ರಾಣಗೊಂಡ ಕೋತಿಗಳನ್ನು ಗೋಣಿ ಚೀಲದಲ್ಲಿ ತುಂಬಿ ಅವುಗಳು ಸಾವನ್ನಪ್ಪುವಂತೆ ಥಳಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದಾರೆ.