ಹಾಸನ; ಕಾಳಿ ವಿಗ್ರಹಕ್ಕೆ ಹಾನಿ, ವರದಿ ಕೇಳಿದ ಪ್ರಧಾನಿ ಕಚೇರಿ
ಹಾಸನ, ನವೆಂಬರ್ 22 : ಇತಿಹಾಸ ಪ್ರಸಿದ್ಧ ದೊಡ್ಡಗದ್ದವಳ್ಳಿ ಗ್ರಾಮದ ಲಕ್ಷ್ಮೀ ದೇವಿ ದೇವಾಲಯದ ಕಾಳಿ ವಿಗ್ರಹಕ್ಕೆ ಹಾನಿ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ವರದಿ ನೀಡುವಂತೆ ಪ್ರಧಾನಮಂತ್ರಿಗಳ ಕಾರ್ಯಾಲಯ ಸೂಚನೆ ನೀಡಿದೆ.
ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿ ಗ್ರಾಮದಲ್ಲಿರುವ ಲಕ್ಷ್ಮೀ ದೇವಿ ದೇವಾಲಯದಲ್ಲಿನ ಕಾಳಿ ವಿಗ್ರಹಕ್ಕೆ ಗುರುವಾರ ದುಷ್ಕರ್ಮಿಗಳು ಹಾನಿ ಮಾಡಿದ್ದರು. ಪ್ರಧಾನಿ ಕಚೇರಿ ಪುರಾತತ್ವ ಇಲಾಖೆಯಿಂದ ಈ ಬಗ್ಗೆ ವರದಿ ಕೇಳಿದೆ.
ಹಾಸನ: 906 ವರ್ಷಗಳ ಐತಿಹ್ಯದ ದೇವಿ ವಿಗ್ರಹ ಕೆಡವಿದ ದುಷ್ಕರ್ಮಿಗಳು
ಭಾರತ ಪುನರುತ್ಥಾನ ಟ್ರಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಗಳ ಕಚೇರಿಗೆ ದೂರು ನೀಡಿತ್ತು. ಹೀಗಾಗಿ ಕಚೇರಿಯಿಂದ ಈ ಬಗ್ಗೆ ವರದಿ ನೀಡುವಂತೆ ಸೂಚನೆ ಕೊಡಲಾಗಿದೆ.
ದೇವಾಲಯ ಓಪನ್: ಶಬರಿಮಲೆ ಯಾತ್ರೆಗೆ ಹೋಗುವವರಿಗೆ ಈ ಮಾಹಿತಿ ತಿಳಿದಿರಲಿ
ಸುಮಾರು 906 ವರ್ಷಗಳ ಇತಿಹಾಸ ಇರುವ ಪುರಾತನ ದೇವಾಲಯ ಇದಾಗಿತ್ತು. ಚಥುಷ್ಕೂಟ ಶೈಲಿಯಲ್ಲಿ ನಿರ್ಮಾಣಗೊಂಡ ದಕ್ಷಿಣ ಭಾರತದ ಮೊದಲ ದೇವಾಲಯ ಎಂಬ ಹೆಗ್ಗಳಿಕೆ ಲಕ್ಷ್ಮೀ ದೇವಿ ದೇವಾಲಯದ್ದಾಗಿದೆ.
ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸ: ಓರ್ವ ಬಂಧನ
ಶುಕ್ರವಾರ ಅರ್ಚಕರು ಪೂಜೆಗಾಗಿ ಆಗಮಿಸಿದಾಗ ಕಾಳಿ ದೇವಿಯ ವಿಗ್ರಹ ನೆಲಕ್ಕೆ ಉರುಳಿತ್ತು. ಮೂರು ಭಾಗವಾಗಿತ್ತು. ನಿಧಿ ಆಸೆಗಾಗಿ ಕಳ್ಳರು ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸ್ ತನಿಖೆ ಮುಂದುವರೆದಿದೆ.
Recommended Video
ಈ ದೇವಾಲಯದಲ್ಲಿ ನಾಲ್ಕು ಗರ್ಭಗುಡಿಗಳಿವೆ. ಕಾಳಿ ವಿಗ್ರಹದ ಮುಂದೆ ಕಾಲಬೈರವನ ವಿಗ್ರಹ ಇದೆ. ಲಕ್ಷ್ಮೀ ದೇವಾಲಯದ ಮುಂದೆ ಶಿವನ ಲಿಂಗವಿದೆ. ಇಂತಹ ಇತಿಹಾಸ ಪ್ರಸಿದ್ಧ ದೇವಾಲಯದಲ್ಲಿ ನಡೆದಿರುವ ಘಟನೆ ಈಗ ಪ್ರಧಾನಿ ಕಚೇರಿ ತಲುಪಿದೆ.