ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಲ್ಯದ ಬಡ ಗೆಳೆಯನನ್ನು ಅಕ್ಕರೆಯಿಂದ ಮಾತನಾಡಿಸಿದ ದೇವೇಗೌಡ

|
Google Oneindia Kannada News

ಹಾಸನ, ಆಗಸ್ಟ್ 28: ಮುಖ್ಯಮಂತ್ರಿ, ಪ್ರಧಾನಿ ಮಂತ್ರಿಗಳಾಗಿ ಸೇವೆ ಸಲ್ಲಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಭಾವಿ ರಾಜಕಾರಣಿಯಾಗಿ ಗುರುತು ಮೂಡಿಸಿದ್ದರೂ ದೇವೇಗೌಡ ಅವರು ಇಂದಿಗೂ ತಮ್ಮ ಬಾಲ್ಯದ ಗೆಳೆಯರನ್ನು ಮರೆತಿಲ್ಲ.

ದೇವೇಗೌಡರಿಗೆ ಇಂದು ಅಕಸ್ಮಾತ್ ಆಗಿ ತಮ್ಮ ಬಾಲ್ಯದ ಗೆಳೆಯನೊಬ್ಬ ಎದುರಿಗೆ ಸಿಕ್ಕಿದ್ದಾರೆ. ಅವರನ್ನು ಕಂಡೊಡನೆ ಅಲ್ಲಿಯೇ ನಿಂತ ದೇವೇಗೌಡರು ಆತನ ಹೆಗಲ ಮೇಲೆ ಸಲುಗೆಯಿಂದ ಕೈ ಹಾಕಿ ಕೆಲ ಕಾಲ ಆತನ ಮಾತು ಕೇಳಿಸಿಕೊಂಡು, ಆರೋಗ್ಯ ಜಾಗೃತೆಯಾಗಿ ನೋಡಿಕೊಳ್ಳುವಂತೆ ಹೇಳಿ ತೆರಳಿದ್ದಾರೆ. ಇಷ್ಟೆಲ್ಲಾ ಘಟನೆ ನಡೆದಿದ್ದು ಹಾಸನದಲ್ಲಿ.

ಪ್ರವಾಹ ಪೀಡಿತರ ನೆರವಿಗೆ ಜೆಡಿಎಸ್‌ ನಿಂದ ಕುಮಾರ ರಕ್ಷಾ ಆಂಬ್ಯುಲೆನ್ಸ್ಪ್ರವಾಹ ಪೀಡಿತರ ನೆರವಿಗೆ ಜೆಡಿಎಸ್‌ ನಿಂದ ಕುಮಾರ ರಕ್ಷಾ ಆಂಬ್ಯುಲೆನ್ಸ್

ಇತ್ತೀಚೆಗಷ್ಟೆ ದೇವೇಗೌಡರು ತಮ್ಮ ಕುಲದೇವರಾದ ಹಾಸನ, ಹೊಳೆಸರಸೀಪುರ ತಾಲ್ಲೂಕಿನ ರಂಗನಾಥ ಸ್ವಾಮಿ ದೇವೇಲಾಯಕ್ಕೆ ಭೇಟಿ ನೀಡಿದ್ದರು. ಈ ಸಮಯ ದೇವೇಗೌಡರ ಬಾಲ್ಯದ ಗೆಳೆಯನೊಬ್ಬ ಅವರಿಗಾಗಿ ದೇವಸ್ಥಾನದಲ್ಲಿ ಕಾದು ನಿಂತಿದ್ದ.

ಹಳೆಯ ಅಂಗಿ, ಚಡ್ಡಿ ತೊಟ್ಟಿದ್ದ ದೇವೇಗೌಡ ಗೆಳೆಯ

ಹಳೆಯ ಅಂಗಿ, ಚಡ್ಡಿ ತೊಟ್ಟಿದ್ದ ದೇವೇಗೌಡ ಗೆಳೆಯ

ಹಳೆಯ ಅಂಗಿ, ಚಡ್ಡಿಯೊಂದನ್ನು ಧರಿಸಿ ದೇವೇಗೌಡರ ಬರುವಿಕೆಗಾಗಿ ಕಾದು ನಿಂತಿದ್ದ ಆತ ದೇವೇಗೌಡರು ಬಂದೊಡನೆ 'ಪಾಪಣ್ಣ, ಪಾಪಣ್ಣ ಎನ್ನುತ್ತಾ ದೇವೇಗೌಡರನ್ನು ಮಾತನಾಡಿದ, ದೇವೇಗೌಡರೂ ಸಹ ಗೆಳೆಯನನ್ನು ನೋಡಿದೊಡನೆ ಗುರುತು ಹಿಡಿದು ಆತನ ಹೆಗಲ ಮೇಲೆ ಕೈ ಹಾಕಿ ಅಲ್ಲಿಯೇ ನಿಂತರು.

ದೇವೇಗೌಡರನ್ನು ಪಾಪಣ್ಣ ಎಂದು ಕರೆದ ಹಳೆಯ ಗೆಳೆಯ

ದೇವೇಗೌಡರನ್ನು ಪಾಪಣ್ಣ ಎಂದು ಕರೆದ ಹಳೆಯ ಗೆಳೆಯ

ದೇವೇಗೌಡರನ್ನು ಪಾಪಣ್ಣ ಎಂದು ಸಂಭೋದಿಸುತ್ತಲೇ ಮಾತನಾಡಿದ ಆ ಬಾಲ್ಯದ ಗೆಳೆಯ, 'ಚೆನ್ನಾಗಿದ್ದೀಯಾ ಪಾಪಣ್ಣ, ನನಗೆ ಆರೋಗ್ಯ ಸರಿಯಿಲ್ಲ, ಕಣ್ಣು ಮಂಜಾಗಿದೆ ಎಂದು ಇನ್ನೂ ಕೆಲ ಮಾತುಗಳನ್ನು ಆಡಿದರು. ಗೆಳೆಯನ ಹೆಗಲ ಮೇಲೆ ಕೈ ಹಾಕಿ ನಿಂತಿದ್ದ ದೇವೇಗೌಡರು ಗೆಳೆಯನ ಮಾತು ಕೇಳಿಸಿಕೊಂಡು, ಆರೋಗ್ಯ ಜಾಗೃತೆಯಿಂದ ನೋಡಿಕೊಳ್ಳುವಂತೆ ಹೇಳಿ ಅಲ್ಲಿಂದ ಮುಂದೆ ನಡೆದರು.

ಮಂಡ್ಯದಲ್ಲಿ ಗೌಡ್ರ ಗದ್ದಲ ಜೋರು: ಅವನೊಬ್ಬ ರಾಜಕೀಯ ವ್ಯಭಿಚಾರಿ!ಮಂಡ್ಯದಲ್ಲಿ ಗೌಡ್ರ ಗದ್ದಲ ಜೋರು: ಅವನೊಬ್ಬ ರಾಜಕೀಯ ವ್ಯಭಿಚಾರಿ!

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಷ್ಟೆಲ್ಲಾ ಸಕ್ರಿಯ ರಾಜಕಾರಣದ ನಡುವೆಯೂ , ವಯಸ್ಸು 86 ಆದರೂ ಸಹ ತಮ್ಮ ಬಾಲ್ಯದ ಗೆಳೆಯನನ್ನು ಮರೆತಿರದ ದೇವೇಗೌಡರ ನೆನಪಿನ ಶಕ್ತಿಯ ಬಗ್ಗೆ, ಗೆಳೆಯನೊಂದಿಗೆ ಸಲುಗೆಯಿಂದ ಮಾತನಾಡಿದ ಸರಳತೆಗೆ ನೆಟ್ಟಿಗರು ನಮಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ದೇವೇಗೌಡ ವಾಗ್ದಾಳಿ

ಸಿದ್ದರಾಮಯ್ಯ ವಿರುದ್ಧ ದೇವೇಗೌಡ ವಾಗ್ದಾಳಿ

ದೇವೇಗೌಡ ಅವರು ಮೊನ್ನೆಯಷ್ಟೆ ಸಿದ್ದರಾಮಯ್ಯ ವಿರುದ್ಧ ಭಾರಿ ವಾಗ್ದಾಳಿ ನಡೆಸಿದ್ದರು. ಮೈತ್ರಿ ಸರ್ಕಾರ ಉರುಳಲು ಸಿದ್ದರಾಮಯ್ಯ ಕಾರಣ ಎಂದು ನೇರ ಆರೋಪ ಮಾಡಿದ್ದರು. ಇದಕ್ಕೆ ಸಿದ್ದರಾಮಯ್ಯ ಸಹ ಪ್ರತ್ಯುತ್ತರ ನೀಡಿದ್ದರು.

ಮೈತ್ರಿ ಗಾಯಕ್ಕೆ ಮುಲಾಮು ಹಚ್ಚಲು ಗುಲಾಂ ನಬಿ ಆಜಾದ್ ರಾಜ್ಯಕ್ಕೆಮೈತ್ರಿ ಗಾಯಕ್ಕೆ ಮುಲಾಮು ಹಚ್ಚಲು ಗುಲಾಂ ನಬಿ ಆಜಾದ್ ರಾಜ್ಯಕ್ಕೆ

English summary
Former Prime minister Deve Gowda met his childhood friend in Hassan and talk to him for awhile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X