ಕುಮಾರಸ್ವಾಮಿ ಮಾಡಿದ ತಪ್ಪನ್ನು ಇದೇ ಮೊದಲ ಬಾರಿಗೆ ಬಹಿರಂಗ ಪಡಿಸಿದ ರೇವಣ್ಣ
Recommended Video
ಹಾಸನ, ಸೆ 18: ಇದೇ ಮೊದಲ ಬಾರಿಗೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿದ ತಪ್ಪನ್ನು ಅವರ ಸಹೋದರರೂ ಆಗಿರುವ, ಮಾಜಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಬಹಿರಂಗ ಪಡಿಸಿದ್ದಾರೆ.
" ನಾನು ಅವರ ಅಣ್ಣನಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಕುಮಾರಸ್ವಾಮಿ ಕೆಲವು ತಪ್ಪುಗಳನ್ನು ಮಾಡಿದ್ದಾರೆ. ಈಗ ಅನುಭವಿಸುತ್ತಿದ್ದಾರೆ" ಎಂದು ರೇವಣ್ಣ ಹೇಳಿದ್ದಾರೆ.
ಎಚ್.ಡಿ.ರೇವಣ್ಣಗೆ ಮತ್ತೆ ಶಾಕ್ ನೀಡಿದ ಯಡಿಯೂರಪ್ಪ ಆದೇಶ
" ಯಾವುದಕ್ಕೂ ಪ್ರಯೋಜನವಿಲ್ಲದವರನ್ನು ಶಾಸಕರನ್ನಾಗಿ, ಮಂತ್ರಿಯನ್ನಾಗಿ ಮತ್ತು ಸಂಸದರನ್ನಾಗಿ ಕುಮಾರಸ್ವಾಮಿ ಮಾಡಿದ್ದಾರೆ" ಎಂದು ಹೇಳುವ ಮೂಲಕ, ರೇವಣ್ಣ, ತಮ್ಮ ಪಕ್ಷದ ಕೆಲವು ಮುಖಂಡರನ್ನು ಅಪ್ರಯೋಜಕರು ಎಂದು ಪರೋಕ್ಷವಾಗಿ ಹೇಳಿದ್ದಾರೆ.
" ಇಲ್ಲಿ ಯಾವುದೂ ಶಾಶ್ವತವಲ್ಲ, ಇನ್ನು ರಾಜಕೀಯ ಶಾಶ್ವತವೇ" ಎಂದು ಪ್ರಶ್ನಿಸಿರುವ ರೇವಣ್ಣ, " ಇದ್ದಷ್ಟು ದಿನ ಗೌರವದಿಂದ ಇರಬೇಕು" ಎಂದು, ಸಹೋದರ ಕುಮಾರಸ್ವಾಮಿಗೆ ಸಲಹೆಯನ್ನು ನೀಡಿದ್ದಾರೆ.
" ಡಿ.ಕೆ.ಶಿವಕುಮಾರ್ ಅವರ ದೆಹಲಿಗೆ ಇಡಿ ವಿಚಾರಣೆಗೆ ಹೋಗುವ ಮುನ್ನ ದೇವೇಗೌಡರ ಆಶೀರ್ವಾದವನ್ನು ಪಡೆದುಕೊಂಡು ಹೋಗಿದ್ದಾರೆ" ಎಂದು ರೇವಣ್ಣ ಹೇಳಿದ್ದಾರೆ.
ಕೆಎಂಎಫ್: ಆರಂಭದಲ್ಲೇ ರೇವಣ್ಣಗೆ ಮುಖಭಂಗ ಮಾಡಿದ ಜಾರಕಿಹೊಳಿ
" ಜೆಡಿಎಸ್ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ" ಎಂದಿರುವ ರೇವಣ್ಣ, ಜನರ ಆಶೀರ್ವಾದ ಮತ್ತು ದೇವರ ಕೃಪೆ ಇರುವ ತನಕ, ನಮ್ಮ ಪಕ್ಷವನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ" ಎಂದು ತಮ್ಮ ಹಿಂದಿನ ಹೇಳಿಕೆಯನ್ನು ರಿವೈಂಡ್ ಮಾಡಿದ್ದಾರೆ.