ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿ ಮಾಡಿದ ತಪ್ಪನ್ನು ಇದೇ ಮೊದಲ ಬಾರಿಗೆ ಬಹಿರಂಗ ಪಡಿಸಿದ ರೇವಣ್ಣ

|
Google Oneindia Kannada News

Recommended Video

ರಾಷ್ಟ್ರೀಯ ಪಕ್ಷಗಳಿಂದ ಜೆಡಿಎಸ್ ಮುಗಿಸುವ ಯತ್ನ: ರೇವಣ್ಣ | H. D. Revanna | Oneindia Kannada

ಹಾಸನ, ಸೆ 18: ಇದೇ ಮೊದಲ ಬಾರಿಗೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿದ ತಪ್ಪನ್ನು ಅವರ ಸಹೋದರರೂ ಆಗಿರುವ, ಮಾಜಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಬಹಿರಂಗ ಪಡಿಸಿದ್ದಾರೆ.

" ನಾನು ಅವರ ಅಣ್ಣನಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಕುಮಾರಸ್ವಾಮಿ ಕೆಲವು ತಪ್ಪುಗಳನ್ನು ಮಾಡಿದ್ದಾರೆ. ಈಗ ಅನುಭವಿಸುತ್ತಿದ್ದಾರೆ" ಎಂದು ರೇವಣ್ಣ ಹೇಳಿದ್ದಾರೆ.

ಎಚ್‌.ಡಿ.ರೇವಣ್ಣಗೆ ಮತ್ತೆ ಶಾಕ್ ನೀಡಿದ ಯಡಿಯೂರಪ್ಪ ಆದೇಶಎಚ್‌.ಡಿ.ರೇವಣ್ಣಗೆ ಮತ್ತೆ ಶಾಕ್ ನೀಡಿದ ಯಡಿಯೂರಪ್ಪ ಆದೇಶ

" ಯಾವುದಕ್ಕೂ ಪ್ರಯೋಜನವಿಲ್ಲದವರನ್ನು ಶಾಸಕರನ್ನಾಗಿ, ಮಂತ್ರಿಯನ್ನಾಗಿ ಮತ್ತು ಸಂಸದರನ್ನಾಗಿ ಕುಮಾರಸ್ವಾಮಿ ಮಾಡಿದ್ದಾರೆ" ಎಂದು ಹೇಳುವ ಮೂಲಕ, ರೇವಣ್ಣ, ತಮ್ಮ ಪಕ್ಷದ ಕೆಲವು ಮುಖಂಡರನ್ನು ಅಪ್ರಯೋಜಕರು ಎಂದು ಪರೋಕ್ಷವಾಗಿ ಹೇಳಿದ್ದಾರೆ.

Former CM HD Kumaraswamy Did A Mistake, His Brother HD Revanna Statement

" ಇಲ್ಲಿ ಯಾವುದೂ ಶಾಶ್ವತವಲ್ಲ, ಇನ್ನು ರಾಜಕೀಯ ಶಾಶ್ವತವೇ" ಎಂದು ಪ್ರಶ್ನಿಸಿರುವ ರೇವಣ್ಣ, " ಇದ್ದಷ್ಟು ದಿನ ಗೌರವದಿಂದ ಇರಬೇಕು" ಎಂದು, ಸಹೋದರ ಕುಮಾರಸ್ವಾಮಿಗೆ ಸಲಹೆಯನ್ನು ನೀಡಿದ್ದಾರೆ.

" ಡಿ.ಕೆ.ಶಿವಕುಮಾರ್ ಅವರ ದೆಹಲಿಗೆ ಇಡಿ ವಿಚಾರಣೆಗೆ ಹೋಗುವ ಮುನ್ನ ದೇವೇಗೌಡರ ಆಶೀರ್ವಾದವನ್ನು ಪಡೆದುಕೊಂಡು ಹೋಗಿದ್ದಾರೆ" ಎಂದು ರೇವಣ್ಣ ಹೇಳಿದ್ದಾರೆ.

ಕೆಎಂಎಫ್: ಆರಂಭದಲ್ಲೇ ರೇವಣ್ಣಗೆ ಮುಖಭಂಗ ಮಾಡಿದ ಜಾರಕಿಹೊಳಿಕೆಎಂಎಫ್: ಆರಂಭದಲ್ಲೇ ರೇವಣ್ಣಗೆ ಮುಖಭಂಗ ಮಾಡಿದ ಜಾರಕಿಹೊಳಿ

" ಜೆಡಿಎಸ್ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ" ಎಂದಿರುವ ರೇವಣ್ಣ, ಜನರ ಆಶೀರ್ವಾದ ಮತ್ತು ದೇವರ ಕೃಪೆ ಇರುವ ತನಕ, ನಮ್ಮ ಪಕ್ಷವನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ" ಎಂದು ತಮ್ಮ ಹಿಂದಿನ ಹೇಳಿಕೆಯನ್ನು ರಿವೈಂಡ್ ಮಾಡಿದ್ದಾರೆ.

English summary
Former Chief Minister HD Kumaraswamy Did A Mistake by allowing useless leaders to grow, His Brother HD Revanna Statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X