ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈತ್ರಿ ಸರ್ಕಾರ ಪತನಕ್ಕೆ ಕಾಂಗ್ರೆಸ್ ಕಾರಣ : ಪ್ರಜ್ವಲ್ ರೇವಣ್ಣ

|
Google Oneindia Kannada News

Recommended Video

ಮೈತ್ರಿ ಸರ್ಕಾರ ಪತನಕ್ಕೆ ಕಾರಣ ಏನು ತಿಳಿಸಿದ ಪ್ರಜ್ವಲ್ ರೇವಣ್ಣ

ಹಾಸನ, ಜುಲೈ 29 : ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸಮತಮತ ಸಾಬೀತು ಮಾಡಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಲು ಯಾರು ಕಾರಣ?. ಎಂಬ ಚರ್ಚೆಗಳು ನಡೆಯುತ್ತಿವೆ. ಹಾಸನ ಸಂಸದ, ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ, "ಮೈತ್ರಿ ಸರ್ಕಾರ ಬೀಳಲು ಕಾಂಗ್ರೆಸಿಗರೇ ಕಾರಣ" ಎಂದು ಆರೋಪ ಮಾಡಿದ್ದಾರೆ.

ಅತೃಪ್ತ ಶಾಸಕರ ಕೃಪೆ! ನಿಖಿಲ್ ಕುಮಾರಸ್ವಾಮಿಗೆ ಮತ್ತೊಂದು ಅವಕಾಶ!ಅತೃಪ್ತ ಶಾಸಕರ ಕೃಪೆ! ನಿಖಿಲ್ ಕುಮಾರಸ್ವಾಮಿಗೆ ಮತ್ತೊಂದು ಅವಕಾಶ!

ಮೈತ್ರಿ ಸರ್ಕಾರದ ಹಲವು ಸಚಿವರು ಲೋಕೋಪಯೋಗಿ ಸಚಿವರಾಗಿದ್ದ ಎಚ್. ಡಿ. ರೇವಣ್ಣ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಸರ್ಕಾರ ಪತನಗೊಳ್ಳಲು ಎಚ್. ಡಿ. ರೇವಣ್ಣ ಕಾರಣ ಎಂಬ ಆರೋಪವನ್ನು ಪ್ರಜ್ವಲ್ ರೇವಣ್ಣ ತಳ್ಳಿ ಹಾಕಿದ್ದಾರೆ.

ಬಿಜೆಪಿಗೆ ಬಾಹ್ಯ ಬೆಂಬಲ: ಕುಮಾರಸ್ವಾಮಿ ಮಹತ್ವದ ಸ್ಪಷ್ಟನೆಬಿಜೆಪಿಗೆ ಬಾಹ್ಯ ಬೆಂಬಲ: ಕುಮಾರಸ್ವಾಮಿ ಮಹತ್ವದ ಸ್ಪಷ್ಟನೆ

"ಮೈತ್ರಿ ಸರ್ಕಾರ ಪತನಗೊಂಡಿರುವುದಕ್ಕೆ ನಾನು ಡಿಸ್ಟರ್ಬ ಆಗಿಲ್ಲ. ಪಕ್ಷಕ್ಕೂ ನಷ್ಟವಿಲ್ಲ, ದ್ವೇಷ ರಾಜಕಾರಣ ಮಾಡಬಾರದು" ಎಂದು ಪ್ರಜ್ವಲ್ ರೇವಣ್ಣ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ...

ವಿಶ್ವಾಸಮತ ಗೆದ್ದ ಯಡಿಯೂರಪ್ಪ, 6 ತಿಂಗಳು ಸರ್ಕಾರ ಸೇಫ್ವಿಶ್ವಾಸಮತ ಗೆದ್ದ ಯಡಿಯೂರಪ್ಪ, 6 ತಿಂಗಳು ಸರ್ಕಾರ ಸೇಫ್

ಕಾಂಗ್ರೆಸ್ಸಿಗರೇ ಕಾರಣ

ಕಾಂಗ್ರೆಸ್ಸಿಗರೇ ಕಾರಣ

"ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಬೀಳಲು ಕಾಂಗ್ರೆಸ್ಸಿಗರೇ ಕಾರಣ. ಕೆಲವರು ಸಚಿವರಾಗಬೇಕೆಂದು ಹಣ ಪಡೆದು ಸರ್ಕಾರ ಬೀಳಿಸಿದ್ದಾರೆ" ಎಂದು ಹಾಸನ ಸಂಸದ, ಎಚ್. ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಆರೋಪಿಸಿದರು.

ಗೂಬೆ ಕೂರಿಸುತ್ತಿದ್ದಾರೆ

ಗೂಬೆ ಕೂರಿಸುತ್ತಿದ್ದಾರೆ

"ಕೋತಿ ಮೊಸರು ತಿಂದು ಮೇಕೆ ಮೂತಿಗೆ ಒರೆಸಿತು ಎಂಬಂತೆ ನಮ್ಮ ತಂದೆಯ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕಾಂಗ್ರೆಸ್ಸಿಗರ ವೈಯಕ್ತಿಕ ಕಾರಣಕ್ಕೆ ಸರ್ಕಾರ ಬೀಳಿಸಿದ್ದಾರೆ" ಎಂದು ಪ್ರಜ್ವಲ್ ರೇವಣ್ಣ ಹೇಳಿದರು.

ನಾನು ಜ್ಯೋತಿಷಿಯಲ್ಲ

ನಾನು ಜ್ಯೋತಿಷಿಯಲ್ಲ

ಕರ್ನಾಟಕದಲ್ಲಿ ಈಗ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. "ಸರ್ಕಾರ ಎಷ್ಟು ದಿನ ಇರತ್ತೋ ಕಾದು ನೋಡೋಣ. ಭವಿಷ್ಯ ನುಡಿಯಲು ನಾನು ಜ್ಯೋತಿಷಿಯಲ್ಲ. ಸರ್ಕಾರ ಬಿದ್ದಿದ್ದರಿಂದ ಜೆಡಿಎಸ್ ಪಕ್ಷಕ್ಕೆ ನಷ್ಟವಿಲ್ಲ" ಎಂದು ಪ್ರಜ್ವಲ್ ರೇವಣ್ಣ ಸ್ಪಷ್ಟಪಡಿಸಿದರು.

ಶಾಸಕರ ಅಭಿಪ್ರಾಯವಾಗಿದೆ

ಶಾಸಕರ ಅಭಿಪ್ರಾಯವಾಗಿದೆ

ಬಿಜೆಪಿಗೆ ಜೆಡಿಎಸ್ ಬಾಹ್ಯ ಬೆಂಬಲ ನೀಡುವ ಕುರಿತು ಪ್ರತಿಕ್ರಿಯೆ ನೀಡಿದ ಪ್ರಜ್ವಲ್ ರೇವಣ್ಣ, "ಯಾವುದೇ ಬೆಂಬಲ ನೀಡಲ್ಲ. ಅದು ನಮ್ಮ ಶಾಸಕರ ಅಭಿಪ್ರಾಯವಾಗಿದೆ. ಸರ್ಕಾರ ಬಿದ್ದಿದ್ದಕ್ಕೆ ನಾನು ಡಿಸ್ಟರ್ಬ್ ಆಗಿಲ್ಲ" ಎಂದು ಪ್ರಜ್ವಲ್ ರೇವಣ್ಣ ಸ್ಪಷ್ಟಪಡಿಸಿದರು.

English summary
Hassan MP and JD(S) leader Prajwal Revanna alleged that Coalition Government in Karnataka lost majority due to Congress leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X