ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಾವಲು ವಾಹನದಲ್ಲಿ ಹಣ, ಬಿಜೆಪಿಯ ಕುತಂತ್ರ ಎಂದ ರೇವಣ್ಣ

|
Google Oneindia Kannada News

Recommended Video

ಆಘಾತಕಾರಿ ಭವಿಷ್ಯ ನುಡಿದ ಎಚ್.ಡಿ.ರೇವಣ್ಣ: Lok Sabha Elections 2019

ಹಾಸನ, ಏ.20: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಒಂದು ದಿನ ಬಾಕಿ ಇರುವಾಗ ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಅವರ ಬೆಂಗಾವಲು ವಾಹನದಲ್ಲಿ ಹಣ ದೊರೆತಿದ್ದು ದೊಡ್ಡ ಸುದ್ದಿಯಾಗಿತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇದೀಗ ಈ ವಿಚಾರ ಕುರಿತು ಪ್ರತಿಕ್ರಯಿಸಿರುವ ಎಚ್‌ಡಿ ರೇವಣ್ಣ ಬಿಜೆಪಿಯವರು ಇಷ್ಟು ಕೆಳ ಮಟ್ಟಕ್ಕೆ ಇಳಿಯುತ್ತಾರೆ ಅಂದುಕೊಂಡಿರಲಿಲ್ಲ. ಇದೆಲ್ಲವು ಐಟಿ ಇಲಾಖೆಯ ಸೃಷ್ಟಿಯಷ್ಟೆ ಎಂದಿದ್ದಾರೆ.

ರೇವಣ್ಣ, ಪುಟ್ಟರಾಜುಗೆ ಐಟಿ ಶಾಕ್: ಆಪ್ತರ ಮನೆ ಮೇಲೆ ದಾಳಿರೇವಣ್ಣ, ಪುಟ್ಟರಾಜುಗೆ ಐಟಿ ಶಾಕ್: ಆಪ್ತರ ಮನೆ ಮೇಲೆ ದಾಳಿ

ಐಟಿ ಎಂದು ಹೆಸರನ್ನು ಹೇಳಿಕೊಂಡು ತರಕಾರಿ ಮಾರುವವನ ಬಳಿ 80 ಸಾವಿರ ಹಣ ಲಪಟಾಯಿಸಿದ್ದಾರೆ. ನಾಮಕರಣಕ್ಕೆಂದು ಇಟ್ಟಿದ್ದ 2 ಚೀಲ ರಾಜಮುಡಿ ಅಕ್ಕಿ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.

BJP misusing IT department for election

ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ನಿರಂತರ ಐಟಿ ದಾಳಿ ಮೂಲಕ ಬಿಜೆಪಿ ಮುಖಂಡರು ಸರಕಾರಿ ಯಂತ್ರ ದುರುಪಯೋಗ ಮಾಡಿಕೊಂಡಿದ್ದಾರೆ. ನಮ್ಮ ಮೇಲೆ ಐಟಿ ಮೂಲಕ ರೇಡ್‌ ಮಾಡಿಸಿ ನಮ್ಮನ್ನು ಚುನಾವಣೆ ಪ್ರಚಾರಕ್ಕೆ ಇಳಿಯದಂತೆ ತಂತ್ರ ಹೆಣೆಯಲಾಗಿತ್ತು.

ಬಿಜೆಪಿಯವರದ್ದು ಕೀಳುಮಟ್ಟದ ರಾಜಕಾರಣ. ಮಧ್ಯಾಹ್ನ ಜಿಲ್ಲಾಧಿಕಾರಿಯವರೇ ನನ್ನ ಕಾರನ್ನು ಚೆಕ್‌ ಮಾಡಿದ್ದಾರೆ. ಆದರೆ, ರಾತ್ರಿ ಐಟಿಯವರು ನನ್ನ ಪಿಎ ಬಳಿ ಇದ್ದ ಹಣವನ್ನು ಬೆಂಗಾವಲು ಕಾರಿನಲ್ಲಿರುವ ಬಟ್ಟೆ ಬ್ಯಾಗ್‌ ಮೇಲೆ ಇರಿಸಿ ಪೋಟೋ ತೆಗೆದುಕೊಳ್ಳುವ ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದರು.

English summary
PWD minister HD Revanna alleged that BJP Misusing IT department for political purpose. .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X