ಬೇಲೂರು ಹಳೇಬೀಡಿಗೆ ಸಿಕ್ತು ಕೇಂದ್ರ ಸರ್ಕಾರದ ಕಿರೀಟ!
ಬೇಲೂರು, ಅಕ್ಟೋಬರ್ 1: ಕೇಂದ್ರ ಸರ್ಕಾರವು ಬೇಲೂರು ಚನ್ನಕೇಶವ ದೇವಾಲಯ ಹಾಗೂ ಹಳೇಬೀಡಿನ ಹೊಯ್ಸಳೇಶ್ವರ ದೇಗುಲವನ್ನು ಆದರ್ಶ ಸ್ಮಾರಕಗಳೆಂದು ಘೋಷಿಸಿದೆ.
ರಾಜ್ಯದ ಮೂರನೇ ಹುಲಿ ಸಫಾರಿ ಕೇಂದ್ರ ಹಂಪಿಯಲ್ಲಿ!
ಇದರಿಂದ ಬೇಲೂರು ಹಳೆ ಬೀಡಿಗೆ ಕೇಂದ್ರದಿಂದ ಕಿರೀಟ ಸಿಕ್ಕಂತಾಗಿದೆ. ಬೇಲೂರು ದೇಗುಲದೊಳಗಿರುವ ಗೋಪುರಕ್ಕೆ ಬಣ್ಣ, ಒಳ ಆವರಣದಲ್ಲಿ ನೆಲ ಹಾಸಿನ ನಡುವೆ ಇದ್ದ ಹುಲ್ಲುಗಳನ್ನು ತೆಗೆದು ಸಿಮೆಂಟ್ ಮಾಡಲಾಗುತ್ತಿದೆ. ಕಪ್ಪೆ ಚನ್ನಿಗರಾಯ ದೇಗುಲದ ಹಿಂದಿದ್ದ ಕೈತೋಟಕ್ಕೆ ನೆಲ ಹಾಸು ಹಾಕಲಾಗಿದೆ.
ಹಂಪಿ ಉತ್ಸವಕ್ಕೆ ಕೊನೆಗೂ ಮುಹೂರ್ತ ಫಿಕ್ಸ್
ದೇಗುಲದ ಒಳಗಿರುವ ಮುಜರಾಯಿ ಇಲಾಖೆಗೆ ಸೇರುವ ಕಚೇರಿಯನ್ನು ಸ್ಥಳಾಂತರಿಸಲು ಸೂಚಿಸಲಾಗಿದೆ, ಎರಡು ದೇಗುಲಗಳನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸುವ ಬಗ್ಗೆಯೂ ವರದಿಯೂ ಸಲ್ಲಿಸಲಾಗಿದೆ ಎಂದು ಕೇಂದ್ರ ಪುರಾತತ್ವ ಇಲಾಖೆ ಸಂರಕ್ಷಣಾ ಸಹಾಯಕ ಅಧಿಕಾರಿ ಗಿರೀಶ್ ತಿಳಿಸಿದ್ದಾರೆ.
ಬೇಲೂರು ದೇಗುಲದಲ್ಲಿ ಅಲ್ಲು ಅರ್ಜುನ್ ಚಿತ್ರದ ಶೂಟಿಂಗ್ ಕಿರಿಕ್
ದೇವಸ್ಥಾನದ ಒಳ ಭಾಗದಲ್ಲಿರುವ ಮುಜರಾಯಿ ಕಚೇರಿಯನ್ನು ತೆರವಿಗೊಳಿಸಿಕೊಡುವಂತೆ ಹಲವು ಬಾರಿ ಪತ್ರ ಬರೆದರೂ ತೆರವಿಗೆ ಕ್ರಮ ಕೈಗೊಂಡಿಲ್ಲ, ಕಚೇರಿ ಅಲ್ಲದೆ ಇದೀಗ ದೇವಾಲಯದ ಒಳಗಡೆ ಪ್ರಸಾದ ಮಾರಾಟ ಮಾಡುವುದು ನಿಯಮಕ್ಕೆ ವಿರುದ್ಧವಾಗಿದೆ.