ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆದುಳಿನ ರಕ್ತಸ್ರಾವದಿಂದ ಹಾಸನದ ವೈದ್ಯ ಸಾವು; ಪರಿಹಾರಕ್ಕೆ ಒತ್ತಾಯ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಜೂನ್ 10: ಮೆದುಳಿನ ರಕ್ತಸ್ರಾವದಿಂದಾಗಿ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ವೈದ್ಯ ಶಿವಕಿರಣ್ ಅವರು ಇಂದು ಮೃತಪಟ್ಟಿದ್ದಾರೆ.

Recommended Video

Sriramulu taking a break at a small shop video goes viral | Oneindia Kannada

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಇವರು ಸೇವೆ ಸಲ್ಲಿಸುತ್ತಿದ್ದರು. ಕಳೆದ ಎರಡು ದಶಕಗಳಿಂದ ರಾಜ್ಯದ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದ ಇವರು ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಕೊರೊನಾಗೆ ಬಲಿಯಾದ ಸರ್ಕಾರಿ ಅಧಿಕಾರಿ: 50 ಲಕ್ಷ ಪರಿಹಾರಕೊರೊನಾಗೆ ಬಲಿಯಾದ ಸರ್ಕಾರಿ ಅಧಿಕಾರಿ: 50 ಲಕ್ಷ ಪರಿಹಾರ

ಶಿವಕಿರಣ್ ಅವರ ಸಾವಿಗೆ ಸರ್ಕಾರ ಪರಿಹಾರ ಧನವನ್ನು ಘೋಷಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಾಂ ಒತ್ತಾಯಿಸಿದ್ದಾರೆ. ಸತತ ಮೂರು ತಿಂಗಳುಗಳಿಂದ ನಿರಂತರ ಒತ್ತಡದಿಂದಾಗಿ ಮಾನಸಿಕವಾಗಿ ಜರ್ಝರಿತಗೊಂಡಿದ್ದ ಹಾಸನ ಜಿಲ್ಲೆಯ ವೈದ್ಯ ಶಿವಕಿರಣ್ ಅವರು ಇಂದು ಸಾವನ್ನಪ್ಪಿರುವುದು ದುರ್ದೈವದ ಸಂಗತಿ. ಕೊರೊನಾ ವಾರಿಯರ್ಸ್ ಗಳ ಸಾವಿಗೆ ದೆಹಲಿ ಸರ್ಕಾರದ ಮಾದರಿಯಲ್ಲಿ ಒಂದು ಕೋಟಿ ರೂಪಾಯಿಗಳ ಪರಿಹಾರ ಧನವನ್ನು ಘೋಷಿಸಬೇಕೆಂದು ಸರ್ಕಾರವನ್ನು ಪಕ್ಷ ಒತ್ತಾಯಿಸಿದೆ.

Aam Admi Party Demands Compensation For Hassan Doctor Death

ಸರ್ಕಾರ ಘೋಷಿಸಿರುವ ಪರಿಹಾರ ಅತ್ಯಂತ ಕನಿಷ್ಠವಾಗಿದೆ. ಅವರ ಕುಟುಂಬ ವರ್ಗಗಳಿಗೆ ಮುಂದಿನ ಭವಿಷ್ಯದಲ್ಲಿ ಯಾವುದಕ್ಕೂ ಈ ಹಣ ಸಾಲುವುದಿಲ್ಲ. ತಮ್ಮ ಜೀವನವನ್ನೇ, ಜೀವದ ಹಂಗನ್ನೇ ತೊರೆದು ಕೊರೊನಾ ಮಹಾಮಾರಿ ವಿರುದ್ಧ ಹೋರಾಟ ಮಾಡುವ ವೈದ್ಯ ವರ್ಗ ಬೀದಿಗೆ ಇಳಿಯುವ ಮೊದಲೇ ಸರ್ಕಾರವು ಸಮಂಜಸವಾದ ಪರಿಹಾರವನ್ನು ಘೋಷಿಸಬೇಕೆಂದು ತಿಳಿಸಿದ್ದಾರೆ.

English summary
Hassan doctor shiva kiran died by brain haemorrhage today. Aam admi party demands one crore rupees compensation for his death
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X