'ನನ್ನ ಡೆತ್ ಸರ್ಟಿಫಿಕೇಟ್ ಕಳೆದು ಹೋಯ್ತು, ಸಿಕ್ಕರೆ ಕೊಡಿ': ಜಾಹೀರಾತು ನೋಡಿ ತಬ್ಬಿಬ್ಬಾದ ಜನ
'ನನ್ನ ಡೆತ್ ಸರ್ಟಿಫಿಕೇಟ್ ಕಳೆದು ಹೋಯ್ತು, ಸಿಕ್ಕರೆ ಕೊಡಿ...' ಎಂದು ವ್ಯಕ್ತಿಯೊಬ್ಬ ಜಾಹೀರಾತು ನೀಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಜಾಹೀರಾತು ನೋಡಿ ಜನ ತಬ್ಬಿಬ್ಬಾಗಿದ್ದಾರೆ. ಒಂದು ಕ್ಷಣ ಚಿಂತನಾಶೀಲರಾಗಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಯಾವ ಪೋಸ್ಟ್ ಯಾವಾಗ ವೈರಲ್ ಆಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಅನೇಕ ಬಾರಿ ಇಂತಹ ಹಾಸ್ಯಾಸ್ಪದ ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಇದು ಜನರನ್ನು ನಗಿಸುತ್ತದೆ. ಇಂತಹ ಒಂದು ಹಾಸ್ಯಾಸ್ಪದ ಜಾಹೀರಾತು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅದು ಸುದ್ದಿ ಪತ್ರಿಕೆಯ ಕಟಿಂಗ್ ಆಗಿದೆ. ವಾಸ್ತವವಾಗಿ ಪತ್ರಿಕೆಯಲ್ಲಿ ಪ್ರಕಟವಾಗಿರುವಂತೆ 'ನನ್ನ ಮರಣ ಪ್ರಮಾಣ ಪತ್ರ ಕಳೆದುಹೋಗಿದೆ' ಎಂದು ಘೋಷಿಸಿಕೊಂಡಿರುವ ಜಾಹೀರಾತು ವೈರಲ್ ಆಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಈ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಭಾನುವಾರ, ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಅವರು ಟ್ವಿಟರ್ನಲ್ಲಿ ಪೇಪರ್ ಕಟಿಂಗ್ ಅನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿ ತನ್ನ ಮರಣ ಪ್ರಮಾಣಪತ್ರವನ್ನು ಕಳೆದುಕೊಂಡಿದ್ದೇನೆ ಮತ್ತು ಅದನ್ನು ಕಂಡುಕೊಂಡವರು ಅದನ್ನು ನನ್ನ ವಿಳಾಸಕ್ಕೆ ಹಿಂತಿರುಗಿಸಬೇಕು ಎಂದು ಹೇಳಿಕೊಂಡಿದ್ದಾನೆ. ಇಲ್ಲಿ ಆಶ್ಚರ್ಯಕರ ಸಂಗತಿಯೆಂದರೆ, ಒಬ್ಬ ವ್ಯಕ್ತಿಯ ಮರಣ ಪ್ರಮಾಣಪತ್ರವನ್ನು ಅವನ ಮರಣದ ನಂತರವೇ ಮಾಡಲಾಗುತ್ತದೆ. ಅದನ್ನು ಕುಟುಂಬ ಸದಸ್ಯರಿಗೆ ನೀಡಲಾಗುತ್ತದೆ. ಹೀಗಿರುವಾಗ ಈ ಜಾಹೀರಾತು ಜನರನ್ನು ಹೊಟ್ಟೆಹುಣ್ಣಾಗಿಸುವಷ್ಟು ನಗಿಸಿದೆ.
ಜಾಹೀರಾತಿನಲ್ಲಿ ಏನು ಹೇಳಲಾಗಿದೆ?
07/09/22 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನನ್ನ ಮರಣ ಪ್ರಮಾಣಪತ್ರವನ್ನು ಲುಮ್ಡಿಂಗ್ ಮಾರುಕಟ್ಟೆಗೆ (ಅಸ್ಸಾಂನಲ್ಲಿ) ಕಳುಹಿಸಲಾಗಿದೆ ಎಂದು ಪತ್ರಿಕೆಯಲ್ಲಿ ಮುದ್ರಿಸಲಾದ ಜಾಹೀರಾತಿನಲ್ಲಿ ಬರೆಯಲಾಗಿದೆ. ನನ್ನ ಮರಣ ಪ್ರಮಾಣ ಪತ್ರದ ನೋಂದಣಿ ಸಂಖ್ಯೆ 93/18 ಮತ್ತು ಕ್ರಮಸಂಖ್ಯೆ 0068132. ಈ ಜಾಹೀರಾತಿನಲ್ಲಿ ವ್ಯಕ್ತಿ ತನ್ನ ತಂದೆಯ ಹೆಸರು ಮತ್ತು ಇತರ ಮಾಹಿತಿಯನ್ನೂ ನೀಡಿದ್ದಾನೆ. ಜಾಹೀರಾತು ನೀಡಿದ ವ್ಯಕ್ತಿಯ ಹೆಸರು ರಂಜಿತ್ ಕುಮಾರ್ ಮತ್ತು ಆತ ಅಸ್ಸಾಂ ನಿವಾಸಿ.
It happens only in #India😂😂😂 pic.twitter.com/eJnAtV64aX
— Rupin Sharma (@rupin1992) September 18, 2022
ವೈರಲ್ ಆದ ಫೋಟೋಗೆ ಜನರ ಪ್ರತಿಕ್ರಿಯೆ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಪೇಪರ್ ಕಟಿಂಗ್ ನೋಡಿ ಎಲ್ಲರೂ ನಗುತ್ತಿದ್ದಾರೆ. ಸತ್ತಿರುವ ವ್ಯಕ್ತಿ ತನ್ನ ಮರಣ ಪ್ರಮಾಣಪತ್ರವನ್ನು ಕಳೆದುಕೊಂಡಿದ್ದೇನೆ ಎಂದು ಜಾಹೀರಾತು ನೀಡುವುದು ಹೇಗೆ ಎಂದು ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ. ಅನೇಕ ಬಳಕೆದಾರರು ಈ ಬಗ್ಗೆ ತಮಾಷೆಯ ಪ್ರತಿಕ್ರಿಯೆಗಳನ್ನು ಸಹ ನೀಡಿದ್ದಾರೆ. ಈ ಫೋಟೋವನ್ನು ಪೋಸ್ಟ್ ಮಾಡಿರುವ ರೂಪಿನ್ ಶರ್ಮಾ ಅವರು ತಮ್ಮ ಪೋಸ್ಟ್ನೊಂದಿಗೆ ಶೀರ್ಷಿಕೆಯಲ್ಲಿ ಇದು ಭಾರತದಲ್ಲಿ ಮಾತ್ರ ಸಂಭವಿಸಬಹುದು ಎಂದು ಬರೆದಿದ್ದಾರೆ. ಅದೇ ಸಮಯದಲ್ಲಿ, ಡೆತ್ ನೋಟ್ ಸಿಕ್ಕರೆ ಎಲ್ಲಿ ತಲುಪಿಸಬೇಕು, ಸ್ವರ್ಗಕ್ಕಾ ಅಥವಾ ನರಕ್ಕಾ ಎಂದು ನೆಟ್ಟಿಗರು ಕೇಳಿದ್ದಾರೆ.