ಅಸ್ಸಾಂ ಪ್ರವಾಹದಲ್ಲಿ ನವಜಾತ ಮಗುವನ್ನು ತಂದ ತಂದೆ- ದೃಶ್ಯವನ್ನು ಕೃಷ್ಣನಿಗೆ ಹೋಲಿಸಿದ ಜನ
ಸಿಲ್ಚಾರ್ ಜೂನ್ 23: ಅಸ್ಸಾಂ ರಾಜ್ಯ ಭೀಕರ ಪ್ರವಾಹದ ಕ್ರೋಧದಲ್ಲಿ ತತ್ತರಿಸಿದೆ. ಅಸ್ಸಾಂನ ಹಲವು ಜಿಲ್ಲೆಗಳು ಮತ್ತು ಪ್ರದೇಶಗಳು ಪ್ರವಾಹದಲ್ಲಿ ಮುಳುಗಿವೆ. ಇಲ್ಲಿಯವರೆಗೆ, ಈ ಪ್ರವಾಹದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸಿಕ್ಕಿಬಿದ್ದಿರುವ ವರದಿಗಳಿವೆ. ಜೊತೆಗೆ ಪ್ರವಾಹದಿಂದಾಗಿ ಕೆಲವರು ಸಾವನ್ನಪ್ಪಿರುವ ವರದಿಗಳು ಇವೆ. ಈ ಸಮಯದಲ್ಲಿ ಅಸ್ಸಾಂನ ಸಿಲ್ಚಾರ್ನಲ್ಲಿ ತಂದೆಯೊಬ್ಬರು ತನ್ನ ನವಜಾತ ಮಗುವನ್ನು ಎತ್ತುಕೊಂಡು ಪ್ರವಾಹದ ನೀರಿನ ಮೂಲಕ ಹಾದುಹೋಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಜನರು ಶ್ರೀಕೃಷ್ಣನನ್ನು ನೆನಪಿಸಿಕೊಳ್ಳುತ್ತಿದ್ದಾರೆ.
Recommended Video
A father wades through flood water with his newborn baby in Silchar, Assam.
— AbhishekkK (@Abhishekkkk10) June 21, 2022
Feels like Basudev ji crossing Jamuna river with Bhagwan Krishna Ji in his head❤️ pic.twitter.com/yJekcUXbXI
ವಾಸ್ತವವಾಗಿ, ಅಸ್ಸಾಂನ ಸಿಲ್ಚಾರ್ನಲ್ಲಿ ತೀವ್ರ ಪ್ರವಾಹ ಉಂಟಾಗಿದ್ದು, ರಸ್ತೆಗಳು ಹಲವಾರು ಅಡಿಗಳವರೆಗೆ ನೀರಿನಿಂದ ತುಂಬಿವೆ. ಅಲ್ಲಿ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ಇದರಲ್ಲಿ ತಂದೆ ಬುಟ್ಟಿಯಲ್ಲಿ ತನ್ನ ಪುಟ್ಟ ಮಗುವನ್ನು ಇಟ್ಟುಕೊಂಡು ಪ್ರವಾಹದ ನೀರನ್ನು ದಾಟುತ್ತಿರುವುದನ್ನು ಕಾಣಬಹುದು.
ಸೊಂಟದ ಆಳದ ನೀರಿನಲ್ಲಿ ಮುಳುಗಿರುವ ದಾರಿಯನ್ನು ದಾಟುವಾಗ ತಂದೆ ತನ್ನ ನವಜಾತ ಮಗಳನ್ನು ಮನೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯವಿದು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ತಂದೆ ಪ್ರವಾಹದ ನೀರಿನ ಮೂಲಕ ಹಾದು ಹೋಗುತ್ತಿರುವುದನ್ನು ಕಾಣಬಹುದು. ತೀವ್ರ ಪ್ರವಾಹದ ನಡುವೆಯೂ ತಂದೆ ತನ್ನ ಮಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು ನಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನೆರೆಹೊರೆಯವರು ತಂದೆಗೆ ನೀರಿನಲ್ಲಿ ಸಾಗಲು ಸಹಾಯ ಮಾಡುತ್ತಾರೆ.
ವಿಡಿಯೋ ನೋಡಿದ ಜನರು ಶ್ರೀಕೃಷ್ಣನನ್ನು ನೆನಪಿಸಿಕೊಂಡರು. ಈ ವಿಡಿಯೋ ನೋಡಿದವರಿಗೆ ಶ್ರೀಕೃಷ್ಣನು ವಾಸುದೇವನೊಂದಿಗೆ ಯಮುನಾ ನದಿಯನ್ನು ದಾಟಿದ ಕಥೆ ನೆನಪಾಯಿತು. ಈ ವೀಡಿಯೋವನ್ನು ಶೇರ್ ಮಾಡಿರುವ ವ್ಯಕ್ತಿ ಅಸ್ಸಾಂನ ಸಿಲ್ಚಾರ್ನಲ್ಲಿ ತನ್ನ ನವಜಾತ ಮಗುವಿನೊಂದಿಗೆ ಪ್ರವಾಹದ ಮೂಲಕ ಹಾದುಹೋಗುತ್ತಿರುವ ತಂದೆ ಎಂಬ ಶೀರ್ಷಿಕೆಯನ್ನು ಸಹ ಬರೆದಿದ್ದಾರೆ. ವಾಸುದೇವ್ ಜಿ ಶ್ರೀಕೃಷ್ಣನನ್ನು ತಲೆಯಲ್ಲಿಟ್ಟುಕೊಂಡು ಜಮುನಾ ನದಿಯನ್ನು ದಾಟುತ್ತಿದ್ದಾರೆ ಎಂದು ಇದನ್ನು ನೋಡಿದ ಜನ ಕಾಮೆಮಟ್ ಮಾಡಿದ್ದಾರೆ.