ಅಸ್ಸಾಂನಲ್ಲಿ ಫೆ.14ರಂದು ರಾಹುಲ್ ಗಾಂಧಿ ಚುನಾವಣಾ ಪ್ರಚಾರ
ಗುವಾಹಟಿ,
ಫೆಬ್ರವರಿ.13:
ಅಸ್ಸಾಂ
ವಿಧಾನಸಭಾ
ಚುನಾವಣೆಗೆ
ಕಾಂಗ್ರೆಸ್
ಸಂಸದ
ರಾಹುಲ್
ಗಾಂಧಿ
ಅವರು
ಭಾನುವಾರ
ಚಾಲನೆ
ನೀಡಲಿದ್ದಾರೆ.
ಫೆಬ್ರವರಿ.14ರಂದು
ಸಿವಸಾಗರ್
ನಲ್ಲಿ
ಬೃಹತ್
ಸಮಾವೇಶವನ್ನು
ಉದ್ದೇಶಿಸಿ
ಮಾತನಾಡಲಿದ್ದು,
ಭಾರಿ
ಸಂಖ್ಯೆಯಲ್ಲಿ
ಕಾರ್ಯಕರ್ತರು
ಸೇರುವ
ನಿರೀಕ್ಷೆಯಿದೆ.
ಅಸ್ಸಾಂ
ವಿಧಾನಸಭಾ
ಚುನಾವಣೆ
ಹಿನ್ನೆಲೆ
ಪ್ರಿಯಾಂಕಾ
ಗಾಂಧಿ
ವಾದ್ರಾ
ಅವರು
ಸಹ
ಹಲವು
ಬೃಹತ್
ಸಮಾವೇಶಗಳನ್ನು
ನಡೆಸುವುದಕ್ಕೆ
ಯೋಜನೆ
ರೂಪಿಸಲಾಗಿದೆ
ಎಂದು
ಪ್ರದೇಶ
ಕಾಂಗ್ರೆಸ್
ಅಧ್ಯಕ್ಷ
ರಿಪುನ್
ಬೋರಾ
ತಿಳಿಸಿದ್ದಾರೆ.
ಚುನಾವಣೆ ನಡೆಯುವ ರಾಜ್ಯಗಳಲ್ಲಿ ಕೇಂದ್ರ ಪೊಲೀಸ್ ಪಡೆಯದ್ದು ಪ್ರಮುಖ ಪಾತ್ರ
ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ನಾಗರಿಕ ನೋಂದಣಿ ಕಾಯ್ದೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಸೇರಿದಂತೆ ಹಲವು ವಿಷಯಗಳನ್ನು ಚುನಾವಣಾ ಅಸ್ತ್ರಗಳಾಗಿ ಬಳಸಿಕೊಳ್ಳುವುದಕ್ಕೆ ಕಾಂಗ್ರೆಸ್ ಚಿಂತನೆ ನಡೆಸಿದೆ. ಈ ಹಿಂದೆ ರಾಜ್ಯದ ಅಖಿಲ್ ಗೋಗೆಯ್, ಲುರಿಂಜ್ಯೋತಿ ಗೋಗೆಯ್ ಸೇರಿದಂತೆ ಹಲವು ಸ್ಥಳೀಯ ನಾಯಕರು ಸಿಎಎ ವಿರುದ್ಧ ಸಂಸತ್ ನಲ್ಲಿ ಧ್ವನಿ ಎತ್ತಿದ್ದರು.
ಸಂಸತ್
ನಲ್ಲಿ
ಸಿಎಬಿ
ವಿರೋಧಿಸಿದ್ದ
ರಾಹುಲ್
ಗಾಂಧಿ:
ಅಸ್ಸಾಂ
ಜನರ
ಬಗ್ಗೆ
ಗೌರವ
ಹೊಂದಿರುವ
ರಾಹುಲ್
ಗಾಂಧಿಯವರು
ನಮ್ಮ
ಜನರಿಗಾಗಿ
ಸಂಸತ್
ನಲ್ಲಿ
ಸಿಎಬಿಯನ್ನು
ವಿರೋಧಿಸಿದ್ದರು.
2019ರಂದು
ಕೇಂದ್ರದಲ್ಲಿ
ಕಾಂಗ್ರೆಸ್
ಸರ್ಕಾರವಿದ್ದಲ್ಲಿ
ಸಿಎಬಿಯನ್ನೇ
ಸಿಎಎ
ಮಾಡುವುದಕ್ಕೆ
ಬಿಡುತ್ತಿರಲಿಲ್ಲ
ಎಂದು
ಕಾಂಗ್ರೆಸ್
ಮುಖಂಡ
ಬೋಬಿತಾ
ಶರ್ಮಾ
ತಿಳಿಸಿದ್ದಾರೆ.
ಕಾಂಗ್ರೆಸ್
ಪ್ರಾದೇಶಿಕ
ದೃಷ್ಟಿಕೋನವನ್ನು
ಹೊಂದಿರುವ
ರಾಷ್ಟ್ರೀಯ
ಪಕ್ಷವಾಗಿದೆ.
ರಾಜ್ಯದಲ್ಲಿ
ಶಾಂತಿ
ನೆಲೆಸುವ
ಉದ್ದೇಶದಿಂದ
ಮಾಜಿ
ಪ್ರಧಾನಮಂತ್ರಿ
ದಿವಂಗತ
ರಾಜೀವ್
ಗಾಂಧಿಯವರು
ಅಸ್ಸಾಂ
ಒಪ್ಪಂದಕ್ಕೆ
ಸಹಿ
ಹಾಕಿಸಿದ್ದರು.
ಇದೀಗ
ರಾಜ್ಯದ
ಜನರ
ಭಾವನೆಗಳನ್ನು
ರಾಹುಲ್
ಗಾಂಧಿಗಿಂತ
ಬೇರೆ
ಯಾರು
ತಾನೇ
ಚೆನ್ನಾಗಿ
ಅರ್ಥ
ಮಾಡಿಕೊಳ್ಳುವುದಕ್ಕೆ
ಸಾಧ್ಯ
ಎಂದು
ಬೋಬಿತಾ
ಶರ್ಮಾ
ಪ್ರಶ್ನಿಸಿದ್ದಾರೆ.