ಪಠ್ಯಕ್ರಮ ಕಡಿಮೆ ಮಾಡುವ ನೆಪ: ನೆಹರೂ, 2002ರ ಗುಜರಾತ್ ಗಲಭೆ ವಿಷಯಗಳನ್ನೇ ಕೈ ಬಿಟ್ಟ ಅಸ್ಸಾಂ ಮಂಡಳಿ
ಗುವಾಹಟಿ, ಸೆಪ್ಟೆಂಬರ್ 24: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಈಗಾಗಲೇ ಸಮಯ ವ್ಯರ್ಥಗೊಂಡು ತರಗತಿಗಳ ನಷ್ಟವಾಗಿದ್ದರಿಂದ ಸಿಬಿಎಸ್ಇ 2020-21ರ ಶೈಕ್ಷಣಿಕ ವರ್ಷಕ್ಕೆ 9 ರಿಂದ 12 ನೇ ತರಗತಿಯ ಪಠ್ಯಕ್ರಮವನ್ನು ಕಡಿಮೆ ಮಾಡಿದೆ.
ಸಿಬಿಎಸ್ಇ ಈ ಕ್ರಮವನ್ನು ಹಲವಾರು ರಾಜ್ಯಗಳು ಅನುಸರಿಸಿವೆ ಮತ್ತು ರಾಜ್ಯ ಮಂಡಳಿಗಳು ಪಠ್ಯಕ್ರಮವನ್ನೂ ಕಡಿಮೆಗೊಳಿಸಿದವು. ಹೀಗೆ ಪಠ್ಯಕ್ರಮ ಕಡಿತಗೊಳಿಸುವ ಕಾರಣವೊಡ್ಡಿ ಅಸ್ಸಾಂ ಆಡಳಿತ ಮಂಡಳಿ, ಜವಾಹರಲಾಲ್ ನೆಹರೂ, 2002 ರ ಗುಜರಾತ್ ಗಲಭೆ ಮತ್ತು ಜಾತಿಗೆ ಸಂಬಂಧಿಸಿದಂತೆ ಪ್ರಮುಖ ವಿಷಯಗಳ ಬಗೆಗಿನ ಪಾಠಗಳನ್ನು ಕೈಬಿಟ್ಟಿದೆ.
ಅಸ್ಸಾಂನಲ್ಲಿ ಶಾಲಾ-ಕಾಲೇಜುಗಳಲ್ಲಿ ಆನ್ ಲೈನ್ ತರಗತಿಗೆ ಅವಕಾಶ
ಹೀಗೆ ಕೈಬಿಡಲಾದ ಪಠ್ಯಕ್ರಮದ ಪಟ್ಟಿಯನ್ನು ಅಸ್ಸಾಂ ಹೈಯರ್ ಸೆಕೆಂಡರಿ ಎಜುಕೇಶನ್ ಕೌನ್ಸಿಲ್ (ಎಎಚ್ಎಸ್ಇಸಿ) ನಲ್ಲಿ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಪಠ್ಯಕ್ರಮದಿಂದ ಕೈಬಿಡಲಾದ ವಿಷಯಗಳ ಪಟ್ಟಿಯನ್ನು ಅಧಿಕೃತ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಲಾಗಿದೆ.
"ಈ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ 2020-21ರ ಅವಧಿಯ ವಿದ್ಯಾರ್ಥಿಗಳ ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಕಲಿಕೆಯ ಅಂತರವನ್ನು ತಡೆಗಟ್ಟುವುದು ಮುಖ್ಯ ಉದ್ದೇಶವಾಗಿದೆ" ಎಂದು ಅಧಿಸೂಚನೆಯೊಂದಿಗೆ ಎಎಚ್ಎಸ್ಇಸಿ ಕಾರ್ಯದರ್ಶಿ ಮನೋರಂಜನ್ ಕಾಕತಿ ಹೇಳಿದರು.
ಅಸ್ಸಾಂ ಮಂಡಳಿಯ ಪಠ್ಯಕ್ರಮದಿಂದ ತೆಗೆದು ಹಾಕಲಾಗಿರುವ ಪ್ರಮುಖ ವಿಷಯಗಳು ಈ ಕೆಳಗಿವೆ:
*
ಮಾವೋ-ನಂತರದ
ಯುಗದಲ್ಲಿ
ಆರ್ಥಿಕ
ಶಕ್ತಿಯಾಗಿ
ಚೀನಾದ
ಉದಯ
*
ಮೊದಲ
ಮೂರು
ಸಾರ್ವತ್ರಿಕ
ಚುನಾವಣೆಗಳು:
ರಾಷ್ಟ್ರ
ನಿರ್ಮಾಣಕ್ಕೆ
ನೆಹರೂ
ಅವರ
ವಿಧಾನ
*
ನೆಹರೂ
ಅವರ
ವಿದೇಶಾಂಗ
ನೀತಿ
*
ನೆಹರೂ
ನಂತರ
ರಾಜಕೀಯ
ಉತ್ತರಾಧಿಕಾರ
*
ಗರಿಬಿ
ಹಟಾವೊ
ಅವರ
ರಾಜಕೀಯ
ಜೀವನ
*
ಗುಜರಾತ್ನಲ್ಲಿ
ನವನಿರ್ಮಾಣ
ಚಳುವಳಿ
*
ಪಂಜಾಬ್
ಬಿಕ್ಕಟ್ಟು
ಮತ್ತು
1984
ರ
ಸಿಖ್
ವಿರೋಧಿ
ಗಲಭೆಗಳು
*
ಮಂಡಲ್
ಆಯೋಗದ
ವರದಿಯ
ಅನುಷ್ಠಾನ
*
ಯುಎಫ್
ಮತ್ತು
ಎನ್ಡಿಎ
ಸರ್ಕಾರಗಳು
*
ಚುನಾವಣೆ
2004
ಮತ್ತು
ಯುಪಿಎ
ಸರ್ಕಾರ
*
ಅಯೋಧ್ಯೆ
ವಿವಾದ
*
ಗುಜರಾತ್
ಗಲಭೆಗಳು
*
ಕಾಂಗ್ರೆಸ್
ಪಕ್ಷ
ಮತ್ತು
ಅದರ
ಇತಿಹಾಸ
*
ಕಾಶ್ಮೀರದ
ಸಮಸ್ಯೆಗಳು
*
1962,
1965
ಮತ್ತು
1971
ರಲ್ಲಿ
ಚೀನಾ
ಮತ್ತು
ಪಾಕಿಸ್ತಾನದೊಂದಿಗೆ
ಯುದ್ಧಗಳು