ಚಿಂತಾಜನಕ ಸ್ಥಿತಿಯಲ್ಲಿದ್ದ ಹರ್ಯಾಣ ಜಡ್ಜ್ ಮಗನ ದುರಂತ ಸಾವು
ಗುರುಗ್ರಾಮ(ಗುರ್ಗಾಂವ್), ಅಕ್ಟೋಬರ್ 23: ಇತ್ತೀಚೆಗಷ್ಟೇ ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದ ಹರ್ಯಾಣದ ಜಿಲ್ಲಾ ನ್ಯಾಯಾಧೀಶರೊಬ್ಬರ ಪತ್ನಿ ಮತ್ತು ಮಗನ ಮೇಲಿನ ಗುಂಡೇಟು ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪುತ್ರ ಧ್ರುವ(17) ಮಂಗಳವಾರ ಬೆಳಗ್ಗಿನ ಜಾವ ಕೊನೆಯುಸಿರೆಳೆದರು.
'ನಿಮ್ಮ ಹೆಂಡತಿ, ಮಗನಿಗೆ ಗುಂಡಿಕ್ಕಿದ್ದೇನೆ, ಹೋಗಿ ನೋಡಿ' ಎಂದ ಸೆಕ್ಯುರಿಟಿ ಗಾರ್ಡ್!
ಅ.13 ರಂದು ಸಂಜೆ ಹರ್ಯಾಣದ ಹೆಚ್ಚುವರಿ ಸೆಶನ್ ನ್ಯಾಯಾಧೀಶ ಕೃಷನ್ ಕಾಂತ್ ಅವರ ಪತ್ನಿ ಮತ್ತು ಪುತ್ರನ ಮೇಲೆ ಅವರ ಭದ್ರತಾ ಸಿಬ್ಬಂದಿಯೇ ಗುಂಡಿನ ಧಾಳಿ ನಡೆಸಿದ್ದ.
ಗುರುಗ್ರಾಮದ(ಗುರ್ಗಾಂವ್) ಅರ್ಕೇಡಿಯಾ ಮಾರುಕಟ್ಟೆಯ ಜನ ನಿಬಿಡ ಪ್ರದೇಶದಲ್ಲಿ ಇಬ್ಬರ ಮೇಲೆ ಗುಂಡಿನ ಧಾಳಿ ನಡೆಸಿದ್ದ ಭದ್ರತಾ ಸಿಬ್ಬಂದಿ, ನಂತರ ನ್ಯಾಯಾಧೀಶ ಕೃಷನ್ ಕಾಂತ್ ಗೆ ಫೋನಾಯಿಸಿ, 'ನಿಮ್ಮ ಹೆಂಡತಿ ಮತ್ತು ಮಗನಿಗೆ ಗುಂಡು ಹೊಡೆದಿದ್ದೇನೆ, ಹೋಗಿ ನೋಡಿ' ಎಂದಿದ್ದಾನೆ.
20 ದಿನಗಳ ಹೆಣ್ಣು ಮಗುವನ್ನೇ ಕೊಂದ ದೂರ್ತ ತಂದೆ
ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ನ್ಯಾಯಾಧೀಶರ ಪತ್ನಿ ಅಂದೇ ಕೊನೆಯುಸಿರೆಳೆದರೆ, ಚಿಂತಾಜನಕ ಸ್ಥಿತಿಯಲ್ಲಿದ್ದ ಪುತ್ರ ಧ್ರುವ ಇಂದು ಬೆಳಿಗ್ಗೆ ಮೃತನಾಗಿದ್ದಾನೆ.
ಸಾವಿನಲ್ಲೂ ಮಾನವೀಯತೆ ಮೆರೆದ ಧ್ರುವ
ಗುಂಡೇಟಿನಿಂದ ಮೃತರಾದ ಧ್ರುವ ಅವರ ಹೃದಯ, ಪಿತ್ತಜನಕಾಂಗ ಮತ್ತು ಕಿಡ್ನಿಗಳನ್ನು ದಾನ ಮಾಡುವ ಮೂಲಕ ನ್ಯಾಯಾಧೀಶರ ಕುಟುಂಬ ಮಗನ ಸಾವಿನಲ್ಲೂ ಮಾನವೀಯತೆ ಮೆರೆದಿದೆ.
ಈಗಾಗಲೇ ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಸ್ವಭಾವತಃ ತೀರಾ ಮೃದುಮನಸ್ಸಿನವನಾಗಿದ್ದ ಭದ್ರತಾ ಸಿಬ್ಬಂದಿ ಏಕಾ ಏಕಿ ಇಂಥ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದೇಕೆ? ಅಂಥ ಜನನಿಬಿಡದ ಪ್ರದೇಶದಲ್ಲಿ ಗುಂಡು ಹಾರಿಸಿದ್ದೇಕೆ ಎಂಬುದು ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ.