ಪ್ರಸಿದ್ದ ಮಠದ ಜಾತ್ರೆ ರದ್ದು; ಕಣ್ಣೀರಿಟ್ಟ ಸ್ವಾಮೀಜಿ
ಗದಗ, ಏಪ್ರಿಲ್ 23: ಕೊರೊನಾ ಮಹಾಮಾರಿಯಿಂದ ಲಾಕ್ಡೌನ್ ಆಚರಣೆಯಲ್ಲಿದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಅನೇಕ ಕಡೆ ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ನಡೆಯುತ್ತದೆ.
ಆದರೆ, ಲಾಕ್ಡೌನ್ ಇರುವುದರಿಂದ ಜಾತ್ರೆಗಳಿಗೂ ತಡೆ ಹೇರಲಾಗಿದೆ. ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದ್ದ ಜಾತ್ರೆಗಳು ವಿಧಿಯಿಲ್ಲದೆ ನಿಂತಿವೆ.
ಗದಗ; ಕೊರೊನಾಕ್ಕೆ ವೃದ್ಧೆ ಬಲಿ; ಸೋಂಕು ಹರಡಿದ್ದು ಹೇಗೆ?
ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾಗಿರುವ ಗದಗ ಜಿಲ್ಲೆಯ ಶಿರಹಟ್ಟಿ ಫಕೀರ್ ಸ್ವಾಮಿ ಮಠದ ಜಾತ್ರೆಯನ್ನೂ ರದ್ದು ಮಾಡಲಾಗಿದೆ. ಪ್ರತಿ ವರ್ಷ ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದ್ದ ಈ ಜಾತ್ರೆಯನ್ನು ಕೊರೊನಾ ಕಾರಣದಿಂದ ರದ್ದು ಮಾಡಿದ್ದೇವೆ ಎಂದು ಹೇಳಿ, ಮಠದ ಪ್ರಸ್ತುತ ಮಠಾಧಿಪತಿ ಫಕೀರ್ ಸಿದ್ದರಾಮ ಶ್ರೀ ಕಣ್ಣೀರಿಟ್ಟಿದ್ದಾರೆ.
ಶ್ರೀಗಳು ಕಣ್ಣೀರು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿರಹಟ್ಟಿಯ ಈ ಮಠ ಕರ್ನಾಟಕದಲ್ಲಿ 16 ನೇ ಶತಮಾನದಿಂದಲೂ ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿದೆ.
Comments
English summary
Shirahatti Swamiji Emotion For Shirahtti Mutt Fair Canceled due to coronavirus lockdown. video viral.