ಗದಗದಲ್ಲಿ ಭಾರಿ ಅಪಘಾತ ಮದುವೆಗೆ ತೆರಳುತ್ತಿದ್ದ 6 ಮಂದಿ ದುರ್ಮರಣ
ಗದಗ, ಡಿಸೆಂಬರ್ 30: ಗದಗದಲ್ಲಿ ಇಂದೆ ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಮದುವೆಗೆಂದು ತೆರಳುತ್ತಿದ್ದ 6 ಮಂದಿ ಮಸಣಕ್ಕೆ ತೆರಳುವಂತಾಗಿದೆ.
ಕುಟುಂಬವೊಂದು ಐ-10 ಕಾರಿನಲ್ಲಿ ಧಾರವಾಡದಿಂದ ಗದಗಗಕ್ಕೆ ಬರುತ್ತಿತ್ತು, ಇದೇ ಸಮಯ ಮುಂಡರಗಿ ರಿಂಗ್ ರೋಡ್ ಬಳಿ ಎದುರಿನಿಂದ ಬಂದ ಐ-10 ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಹಾರಿ ಬಂದು ಧಾರವಾಡದಿಂದ ಬರುತ್ತಿದ್ದ ಐ-10 ಕಾರಿನ ಮೇಲೆ ಬಿದ್ದಿದೆ.
ಬಸ್ ಡಿಕ್ಕಿ ರಭಸಕ್ಕೆ ಬೈಕ್ಗೆ ಬೆಂಕಿ: ಸುಟ್ಟು ಕರಕಲಾದ ಬೈಕ್ ಸವಾರ
ಐ-10 ಕಾರಿನಲ್ಲಿದ್ದ ಆರೂ ಮಂದಿ ಸಾವನ್ನಪ್ಪಿದ್ದಾರೆ. ಐ-20 ಕಾರಿನಲ್ಲಿದ್ದ ನಾಲ್ಕು ಮಂದಿಗೆ ತೀವ್ರ ಗಾಯಗಳಾಗಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಇದೆ.
ಐ-10 ಕಾರಿನಲ್ಲಿದ್ದವರನ್ನು ಆನಂದ ಬೆಟಗೇರಿ, ಸಿದ್ದು ಕೋರಿಶೆಟ್ಟಿ, ಮನೋಜಕುಮಾರ ಕರಡಿಗುಡ್ಡ, ಅಮೃತ, ಚನ್ನು ವಾಡದ್, ಅರುಣ್ ಬೆಟಗೇರಿ ಎಂದು ಗುರುತಿಸಲಾಗಿದೆ, ಎಲ್ಲರೂ ಧಾರವಾಡದ ಹೆಬ್ಬಳ್ಳಿ ಅಗಸಿ ಗ್ರಾಮದ ನಿವಾಸಿಗಳಾಗಿದ್ದಾರೆ.
ಮಹಾರಾಷ್ಟ್ರ ಖಂಡಾಲಾ ಘಾಟ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಿಎಂ ಸಾಂತ್ವನ
ಅಪಘಾತದ ರಭಸದಲ್ಲಿ ಐ-10 ಕಾರು ತೀವ್ರವಾಗಿ ಜಖಂಗೊಂಡಿದೆ. ಕಾರಿನ ಪೂರ್ಣ ದೇಹ ಕಿತ್ತು ಹೋಗಿದೆ.