25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ : ಎಚ್ಕೆಪಿ
ಗದಗ, ಮೇ 03: ಕುಂದಗೋಳ ಮೈತ್ರಿ ಅಭ್ಯರ್ಥಿ ಶ್ರೀಮತಿ ಕುಸುಮಾ ಶಿವಳ್ಳಿ ಅವರನ್ನು 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಸಂಕಲ್ಪ ಮಾಡಬೇಕಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಹೆಚ್ ಕೆ ಪಾಟೀಲ್ ಕರೆ ನೀಡಿದ್ದಾರೆ.
ಕುಂದಗೋಳ
ವಿಧಾನಸಭಾ
ಕ್ಷೇತ್ರದ
ಉಪ
ಚುನಾವಣೆ
ಹಿನ್ನಲೆಯಲ್ಲಿ
ಸಂಶಿ
ಗ್ರಾಮದಲ್ಲಿ
ಇಂದು
ಆಯೋಜಿಸಲಾಗಿದ್ದ
ಕಾಂಗ್ರೆಸ್
ಬೃಹತ್
ಸಮಾವೇಶದಲ್ಲಿ
ಭಾಗವಹಿಸಿ
ಮಾತನಾಡಿದ
ಅವರು,
ಇದು
ಸಂಕಲ್ಪ
ಮಾಡುವ
ಕಾರ್ಯಕ್ರಮ.
ನಾವೆಲ್ಲರೂ
ಕುಸುಮಾ
ಶಿವಳ್ಳಿ
ಅವರನ್ನು
25
ಸಾವಿರಕ್ಕೂ
ಹೆಚ್ಚು
ಮತಗಳ
ಅಂತರದಿಂದ
ಗೆಲ್ಲಿಸುವ
ಸಂಕಲ್ಪ
ಮಾಡಬೇಕಾಗಿದೆ.
ಕ್ಷೇತ್ರದಲ್ಲಿ ಶಿವಳ್ಳಿಯವರು ಅನೇಕ ಅಭಿವೃದ್ದಿಗಳನ್ನು ಕೆಲಸಗಳನ್ನು ಮಾಡಿದ್ದಾರೆ. ಬಡವರ ಜೊತೆಯಲ್ಲಿ ಬದುಕಿದ್ದ ವ್ಯಕ್ತಿ ಶಿವಳ್ಳಿ ಅವರು. ಶಿವಳ್ಳಿಯವರನ್ನು ನಾವು ನೆನಪಿಟ್ಟುಕೊಂಡು ಕುಸುಮಾ ಶಿವಳ್ಳಿ ಅವರಿಗೆ ಮತ ಹಾಕಬೇಕು ಎಂದರು.
ಧಾರವಾಡ : ಕುಂದಗೋಳ ವಿಧಾನಸಭಾ ಕ್ಷೇತ್ರದ ಪರಿಚಯ
ರಾಜ್ಯದಲ್ಲಿ
ಹಾಗೂ
ದೇಶದಲ್ಲಿ
ಕಾಂಗ್ರೆಸ್
ನೇತೃತ್ವದ
ಸರಕಾರ
ಅನೇಕ
ಸಾಧನೆಗಳನ್ನು
ಮಾಡಿದೆ.
ಆ
ಸಾಧನೆಗಳನ್ನು
ನೋಡಿ
ಮತ
ನೀಡಿ
ಎಂದು
ಮನವಿ
ಮಾಡಿದರು.
ದಿವಂಗತ
ಶಿವಳ್ಳಿ
ಅವರನ್ನು
ದೊಡ್ಡದಾದ
ಮಟ್ಟದಲ್ಲಿ
ಬೆಳಿಸಿದವರು
ಡಿ.ಕೆ
ಶಿವಕುಮಾರ್
ಅವರು.
ಅವರಿಗೆ
ದೊಡ್ಡ
ಶಕ್ತಿ
ಕೊಟ್ಟಿದ್ದು
ಸಿದ್ದರಾಮಯ್ಯ
ಅವರು
ಎಂದು
ಇದೇ
ಸಂದರ್ಭದಲ್ಲಿ
ಹೇಳಿದರು.
ಇದೇ ವೇಳೆ ಬೇರೆ ಬೇರೆ ಪಕ್ಷದ ಮುಖಂಡರುಗಳನ್ನು ಹೆಚ್ ಕೆ ಪಾಟೀಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು.
ಕುಸುಮಾವತಿ ಶಿವಳ್ಳಿ ಗೆಲವು ನಿಶ್ಚಿತ: ಎಚ್.ಕೆ.ಪಾಟೀಲ್
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.