ಸಿಎಂ ಕುಮಾರಸ್ವಾಮಿಗೆ ಸುದೀರ್ಘ ಪತ್ರ ಬರೆದ ಎಚ್ಕೆ ಪಾಟೀಲ್
ಗದಗ, ಜೂನ್ 16: ಮಾಜಿ ಸಚಿವ, ಗದಗ ಶಾಸಕ ಎಚ್ ಕೆ ಪಾಟೀಲ್ ಅವರು ಐಎಂಎ ಹಾಗೂ ಇತರೆ ಆರ್ಥಿಕ ವಂಚನೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.
ಜಿಂದಾಲ್ ವಿವಾದ : ಚರ್ಚೆಗೆ ಸಿದ್ಧ ಎಂದ ಕುಮಾರಸ್ವಾಮಿ
ಜಿಂದಾಲ್ ಭೂಮಿ ವಾಪಸ್ ಕುರಿತಾದ ನಂತರ ಸಿಎಂ ಗೆ ಎಚ್ ಕೆ ಪಾಟೀಲ ಅವರಿಂದ ಇದು ಎರಡನೇ ಪತ್ರವಾಗಿದೆ. ಇದಲ್ಲದೆ ಐಎಂಎ ಹಾಗೂ ಇತರೆ ಆರ್ಥಿಕ ವಂಚನೆ ಪ್ರಕರಣ ಸಂಬಂಧ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ತಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪಾತ್ರದ ಬಗ್ಗೆ ವಿವರಿಸಿದ್ದಾರೆ.
ಐಎಂಎ ಠೇವಣಿ ವಂಚನೆ ಪ್ರಕರಣದಲ್ಲಿ ತನಿಖೆ, ಶಿಕ್ಷೆಯಷ್ಠೇ ಅಲ್ಲ ನೊಂದವರ ಬದುಕನ್ನು ಪುನಃಕಟ್ಟಿಕೊಡುವ ಸಾಮಾಜಿಕ ಹೊಣೆಗಾರಿಕೆಯನ್ನು ನಮ್ಮ ಸಮ್ಮೀಶ್ರ ಸರ್ಕಾರ ಯಶಸ್ವಿಯಾಗಿ, ಸಮರ್ಪಕವಾಗಿ ನಿರ್ವಹಿಸಬೇಕಾಗಿದೆ. ಸರ್ಕಾರ ಈಗ ಕೈಗೊಳ್ಳುತ್ತಿರುವ ಕ್ರಮಗಳು ಸಾಲದು. 100 ದಿನಗಳಲ್ಲಿ ಠೇವಣಿದಾರರ ಹಣ ಮರಳಿಸಲು ಅಗತ್ಯ ಕ್ರಮವಿಡಬೇಕು. pic.twitter.com/Yvn64iJqCx
— HK Patil (@HKPatil1953) June 16, 2019
ಐಎಂಎ ಆರೋಪಿ ಆಸ್ತಿ ಮುಟ್ಟುಗೋಲಿಗೆ ಅಗ್ರಹಿಸಿರುವ ಎಚ್ ಕೆ ಪಾಟೀಲ್, 30 ದಿನಗಳಲ್ಲಿ ಆಸ್ತಿ ಜಪ್ತಿ ಮಾಡಿ ಸಕ್ರಮಗೊಳಿಸಿ, 180 ದಿನಗಳಲ್ಲಿ ಹಣ ಠೇವಣಿ ದಾರರಿಗೆ ಮರುಕಳಿಸಲು ಮನವಿ ಮಾಡಿದ್ದಾರೆ.
ಜಿಂದಾಲ್ ವಿವಾದ : ಕರ್ನಾಟಕ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆಗಳು
ಸಿಎಂ ಈ ಬಗ್ಗೆ ವಿಶೇಷ ಗಮನ ಹರಿಸಬೇಕು, ತನಿಖೆಗೆ ವಿಶೇಷ ಅಧಿಕಾರಿಯೊಬ್ಬರನ್ನು ಮೇಲುಸ್ತುವಾರಿಗೆ ನೇಮಿಸಿ, ಇಂಥ ಪ್ರಕರಣಗಳು ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಲು ಎಚ್ ಕೆ ಪಾಟೀಲ್ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.