ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಕುಮಾರಸ್ವಾಮಿಗೆ ಸುದೀರ್ಘ ಪತ್ರ ಬರೆದ ಎಚ್ಕೆ ಪಾಟೀಲ್

|
Google Oneindia Kannada News

ಗದಗ, ಜೂನ್ 16: ಮಾಜಿ ಸಚಿವ, ಗದಗ ಶಾಸಕ ಎಚ್ ಕೆ ಪಾಟೀಲ್ ಅವರು ಐಎಂಎ ಹಾಗೂ ಇತರೆ ಆರ್ಥಿಕ ವಂಚನೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.

ಜಿಂದಾಲ್ ವಿವಾದ : ಚರ್ಚೆಗೆ ಸಿದ್ಧ ಎಂದ ಕುಮಾರಸ್ವಾಮಿಜಿಂದಾಲ್ ವಿವಾದ : ಚರ್ಚೆಗೆ ಸಿದ್ಧ ಎಂದ ಕುಮಾರಸ್ವಾಮಿ

ಜಿಂದಾಲ್ ಭೂಮಿ ವಾಪಸ್ ಕುರಿತಾದ ನಂತರ ಸಿಎಂ ಗೆ ಎಚ್ ಕೆ ಪಾಟೀಲ ಅವರಿಂದ ಇದು ಎರಡನೇ ಪತ್ರವಾಗಿದೆ. ಇದಲ್ಲದೆ ಐಎಂಎ ಹಾಗೂ ಇತರೆ ಆರ್ಥಿಕ ವಂಚನೆ ಪ್ರಕರಣ ಸಂಬಂಧ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ತಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪಾತ್ರದ ಬಗ್ಗೆ ವಿವರಿಸಿದ್ದಾರೆ.

Jindal IMA Scam : MLA HK Patil letter to CM HD Kumaraswamy
ಸಹಾರಾ ಮುಖ್ಯಸ್ಥ ಸುಬ್ರತೋರಾವ್ ಪ್ರಕರಣ ಪ್ರಸ್ತಾಪ ಮಾಡಿದ್ದಾರೆ. ಆರ್ಥಿಕ ಅಪರಾಧಗಳ ನಿಯಂತ್ರಣಕ್ಕೆ ಕಠಿಣ ಕ್ರಮಕ್ಕೆ ಶಿಫಾರಸು ಮಾಡುವ ಬಗ್ಗೆ, ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಸುಗ್ರೀವಾಜ್ಞೆ 2019 ಜಾರಿಗೆ ಮನವಿ ಮಾಡುವುದರ ಬಗ್ಗೆ ಬರೆದಿದ್ದಾರೆ. ಈ ಕಾಯ್ದೆ ಜಾರಿಯಿಂದ ಪ್ರಕರಣಕ್ಕೆ ಇತ್ಯರ್ಥಕ್ಕೆ ಹೆಚ್ಚು ಬಲ ಎಂದಿದ್ದಾರೆ.

ಐಎಂಎ ಆರೋಪಿ ಆಸ್ತಿ ಮುಟ್ಟುಗೋಲಿಗೆ ಅಗ್ರಹಿಸಿರುವ ಎಚ್ ಕೆ ಪಾಟೀಲ್, 30 ದಿನಗಳಲ್ಲಿ ಆಸ್ತಿ ಜಪ್ತಿ ಮಾಡಿ ಸಕ್ರಮಗೊಳಿಸಿ, 180 ದಿನಗಳಲ್ಲಿ ಹಣ ಠೇವಣಿ ದಾರರಿಗೆ ಮರುಕಳಿಸಲು ಮನವಿ ಮಾಡಿದ್ದಾರೆ.

ಜಿಂದಾಲ್ ವಿವಾದ : ಕರ್ನಾಟಕ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆಗಳುಜಿಂದಾಲ್ ವಿವಾದ : ಕರ್ನಾಟಕ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆಗಳು

ಸಿಎಂ ಈ ಬಗ್ಗೆ ವಿಶೇಷ ಗಮನ ಹರಿಸಬೇಕು, ತನಿಖೆಗೆ ವಿಶೇಷ ಅಧಿಕಾರಿಯೊಬ್ಬರನ್ನು ಮೇಲುಸ್ತುವಾರಿಗೆ ನೇಮಿಸಿ, ಇಂಥ ಪ್ರಕರಣಗಳು ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಲು ಎಚ್ ಕೆ ಪಾಟೀಲ್ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

English summary
Jindal IMA Scam : Gadag MLA HK Patil writes letter to CM HD Kumaraswamy and explains in detail about the economic fraud in land sale. He also explained how to deal with the fraud case like IMA jewels scam and give justice to poor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X