ಗದಗದ ಈ ಊರಿನ ಪ್ರತಿ ರಸ್ತೆಯಲ್ಲೂ ಓರ್ವ ಕೆಚ್ಚೆದೆಯ ಯೋಧನಿದ್ದಾನೆ!
ಗದಗ, ಫೆಬ್ರವರಿ 21: ಪುಲ್ವಾಮಾದ ಭೀಕರ ಘಟನೆಯ ಘಟನೆಗೆ ದೇಶ ಪರಿತಪಿಸಿದೆ. ನಮ್ಮೆಲ್ಲರ ಹೃದಯದಲ್ಲೂ ರೋಷಾಗ್ನಿ ಹೊತ್ತಿದ್ದರೆ, ಗದಗದ ಹಟಲಗೇರಿ ಎಂಬ ಹಳ್ಳಿಯಲ್ಲಿ ಆ ಕಿಚ್ಚಿನ ಬೆಂಕಿ ತುಸು ಹೆಚ್ಚೇ ವ್ಯಾಪಿಸಿದೆ. ಅದಕ್ಕೆ ಕಾರಣ ಈ ಹಳ್ಳಿಯ ಪ್ರತಿ ರಸ್ತೆಯಲ್ಲೂ ದೇಶಭಕ್ತಿಯ ಉಸಿರಿದೆ, ಪ್ರತಿ ಮನೆಯ ದೇವರ ಕೋಣೆಯಲ್ಲೂ ಭಾರತಾಂಬೆ ಇದ್ದಾಳೆ.
ಹೌದು, ಸುಮಾರು 4000 ಜನಸಂಖ್ಯೆಯನ್ನು ಹೊಂದಿರುವ ಗದಗದ ಹಟಲಗೇರಿ ಎಂಬ ಗ್ರಾಮದ ಒಟ್ಟು 150 ಕ್ಕೂ ಹೆಚ್ಚು ಸೈನಿಕರು ದೇಶದ ಗಡಿ ಕಾಯುತ್ತಿದ್ದಾರೆ! ಈ ಊರಿನ ವೈಶಿಷ್ಟ್ಯ ಎಂದರೆ ಇಲ್ಲಿ ನ ಪ್ರತಿ ರಸ್ತೆಯ ಕನಿಷ್ಠ ಎರಡು ಮನೆಯ ಸದಸ್ಯರು ಸೇನೆಗೆ ಸೇರುತ್ತಾರೆ. ಇದೊಂದು ಸಂಪ್ರದಾಯ ಎಂಬಂತೇ ನಡೆದುಕೊಂಡು ಬಂದಿದೆ.
ಇನ್ನೂ ಭೀಕರ ದಾಳಿಗೆ ಜೈಶ್ ಉಗ್ರರ ಸಿದ್ಧತೆ: ಗುಪ್ತಚರ ಆಘಾತಕಾರಿ ವರದಿ
ಪುಲ್ವಾಮಾದಲ್ಲಿ ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕ ಆದಿಲ್ ದಾರ್ ಎಂಬಾತ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ ಭಾರತೀಯ ಸೇನೆಯ 40 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಈ ಘಟನೆಗೆ ಹಟಲಗೇರಿ ಪ್ರತಿ ವ್ಯಕ್ತಿಯೂ ಕಣ್ಣಲ್ಲೂ ದುಃಖಕ್ಕಿಂತ ಹೆಚ್ಚಾಗಿ ಆಕ್ರೋಶ, ಪ್ರತೀಕಾರ ತೀರಿಸಿಕೊಳ್ಳುವ ಕೆಚ್ಚೆದೆ ಇದೆ.