ಗಣೇಶ ಹಬ್ಬ ಆಚರಿಸಿ, ಶಾಂತಿ ಕದಡಬೇಡಿ: ಗದಗ ಜಿಲ್ಲಾಧಿಕಾರಿ ಎಚ್ಚರಿಕೆ
ಗದಗ, ಆಗಸ್ಟ್, 26: ಸಾರ್ವಜನಿಕ ಗಣೇಶ ಹಬ್ಬದ ಆಚರಣೆಗೆ ಏಕಗವಾಕ್ಷಿ ಪದ್ಧತಿಯಲ್ಲಿ ಪರವಾನಿಗೆ ನೀಡಲಾಗುವುದು. ಆದರೆ, ಸರ್ಕಾರದ ಮಾರ್ಗಸೂಚಿ ಪಾಲಿಸಿ ಶಾಂತಿ ಕದಡದಂತೆ ಗಣೇಶ ಹಬ್ಬ ಆಚರಿಸಬೇಕು ಎಂದು ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ತಿಳಿಸಿದ್ದಾರೆ.
ಗಣೇಶ ಪ್ರತಿಷ್ಠಾಪನೆ, ವಿಸರ್ಜನೆಗೆ ಸರಕಾರದಿಂದ ಮಾರ್ಗಸೂಚಿ ಬಿಡುಗಡೆ
ನಗರದ ಶ್ರೀ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಗೌರಿ ಗಣೇಶ ಚತುರ್ಥಿ ಪ್ರಯುಕ್ತ 'ಶಾಂತಿ ಸಭೆ ಆಯೋಜಿಸಲಾಗಿತ್ತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಗಣೇಶೋತ್ಸವ ಆಚರಿಸುವ ಸಂಘ, ಮಂಡಳಿಗಳು ಸರ್ಕಾರದ ಸುತ್ತೋಲೆಯ ಅಂಶಗಳನ್ನು ಪಾಲಿಸಬೇಕು. ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಹಬ್ಬವನ್ನು ಆಚರಿಸಬೇಕು. ಪರವಾನಿಗೆ ಸರಳೀಕರಣಕ್ಕೆ ಜಿಲ್ಲಾಡಳಿತ ಬದ್ಧವಾಗಿದೆ. ಪರವಾನಗಿಗೆ ಆದಷ್ಟು ಬೇಗ ಅರ್ಜಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಗಣೇಶ
ಹಬ್ಬ
ಆಚರಣೆಗೆ
ನಿಯಮಗಳು
ಜೊತೆಗೆ
ಸಾರ್ವಜನಿಕ
ಸುರಕ್ಷತೆ
ಹಾಗೂ
ಪರಿಸರ
ಮಾಲಿನ್ಯ
ಉಂಟಾಗದ
ರೀತಿಯಲ್ಲಿ
ಕಾರ್ಯಕ್ರಮಗಳನ್ನು
ಏರ್ಪಡಿಸಬೇಕು.
ಈ
ಹಿಂದೆ
ನಡೆದಂತೆ
ಪ್ರಸಕ್ತ
ವರ್ಷದಲ್ಲಿ
ಕೂಡ
ಶಾಂತಿಯುತವಾಗಿ
ಮತ್ತು
ಸೌಹಾರ್ದತೆಯಿಂದ
ಗಣೇಶ
ಹಬ್ಬ
ಆಚರಿಸಬೇಕು
ಎಂದು
ಮಂಡಳಿಗಳ
ಸದಸ್ಯರಿಗೆ
ಸೂಚನೆ
ನೀಡಿದರು.
ಮುಂದುವರೆದು
ಮಾತನಾಡಿದ
ಅವರು
ಗಣೇಶ
ಹಬ್ಬ
ಆಚರಣೆ
ಸಂದರ್ಭದಲ್ಲಿ
ಒಗ್ಗಟ್ಟು
ಮತ್ತು
ಸಾಮರಸ್ಯದ
ಜೊತೆಗೆ
ಪರಿಸರ
ಕಾಳಜಿಯೂ
ಮುಖ್ಯವಾಗಿರುತ್ತದೆ.
ಸಾಧ್ಯವಾದಷ್ಟು
ಪರಿಸರ
ಸ್ನೇಹಿ
ಮಣ್ಣಿನ
ಗಣಪತಿಯನ್ನು
ಪ್ರತಿಷ್ಠಾಪಿಸಬೇಕು.
ಪಿಒಪಿ
ಗಣೇಶಗಳನ್ನು
ಪ್ರತಿಷ್ಠಾಪಿಸಬೇಡಿ,
ಇದು
ಪರಿಸರಕ್ಕೆ
ಮಾರಕವಾಗುತ್ತದೆ.
ಸುಪ್ರೀಂಕೋರ್ಟ್
ಆದೇಶದ
ಅನ್ವಯ
ಧ್ವನಿವರ್ಧಕಗಳನ್ನು
ಬಳಸಲು
ಅವಕಾಶವಿದೆ.
ಪ್ಲಾಸ್ಟಿಕ್
ಹಾಗೂ
ಥರ್ಮಾಕೋಲ್
ಬಳಸದೆ
ಪರಿಸರ
ಕಾಳಜಿ
ಮೆರೆಯುವ
ಮೂಲಕ
ಗಣೇಶ
ಹಬ್ಬವನ್ನು
ಆಚರಣೆ
ಮಾಡೋಣ
ಎಂದರು.
ಪೊಲೀಸ್
ಇಲಾಖೆಯಿಂದ
ಮುಂಜಾಗ್ರತಾ
ಕ್ರಮಗಳು
ಜಿಲ್ಲಾ
ಪೊಲೀಸ್
ವರಿಷ್ಠಾಧಿಕಾರಿ
ಶಿವಪ್ರಕಾಶ್
ದೇವರಾಜ್
ಮಾತನಾಡಿ,
"ಆಯೋಜಕರು
ಕಡ್ಡಾಯವಾಗಿ
ಪರವಾನಿಗೆ
ಪಡೆಯಬೇಕು.
ಉತ್ಸವ
ಸಮಿತಿಗಳು
ಸುರಕ್ಷತೆಯ
ಜವಾಬ್ದಾರಿಯನ್ನು
ಹೊರಬೇಕು.
ಜೊತೆಗೆ
ಸಾಮಾಜದ
ಶಾಂತಿ
ಕದಡದಂತೆ
ಉತ್ಸವ
ನಡೆಯಬೇಕು.
ಮೂರ್ತಿ
ಪ್ರತಿಷ್ಠಾಪನೆ,
ಯಾಗ
ಪ್ರತಿ
ಪೆಂಡಾಲ್ಗೆ
ಪೊಲೀಸ್
ಸಿಬ್ಬಂದಿ
ನಿಯೋಜನೆ
ಮಾಡಲಾಗುತ್ತದೆ.
ಪೆಂಡಾಲ್ನಲ್ಲಿ
ಸಿಸಿ
ಟಿವಿ
ಅಳವಡಿಸಲಾಗುತ್ತದೆ.
ಡ್ರೋನ್
ಮೂಲಕವೂ
ಸೂಕ್ಷ್ಮ
ಪ್ರದೇಶದ
ಮೇಲೆ
ಕಣ್ಣಿಡಲಾಗುತ್ತದೆ.
ವಾಟ್ಸಾಪ್
ಫೇಸ್
ಬುಕ್ನಲ್ಲಿ
ಶಾಂತಿ
ವಾತಾವರಣವನ್ನು
ಕೆಡಿಸುವ
ಕಿಡಿಗೇಡಿಗಳ
ಮೇಲೆ
ಕಣ್ಣಿರಿಸಲಾಗಿದೆ.
ಶಾಂತಿಯಿಂದ
ಉತ್ಸವ
ನಡೆಸಲು
ಸಾರ್ವಜನಿಕರು
ಸಹಕಾರ
ನೀಡಬೇಕು
ಎಂದು
ಮನವಿ
ಮಾಡಿದರು.