ಮುಂಬೈನಿಂದ ಗದಗ ತಲುಪಿದ ರೈಲು: 124 ಪ್ರಯಾಣಿಕರ ಮೇಲೆ ಡಿಸಿ, ಎಸ್ಪಿ ನಿಗಾ
ಗದಗ, ಜೂನ್, 2: ಮುಂಬೈನಿಂದ ಗದಗ ನಗರಕ್ಕೆ ರೈಲು ಆಗಮಿಸಿದೆ. 124 ಪ್ರಯಾಣಿಕರನ್ನು ಹೊತ್ತು ತಂದ ಈ ರೈಲಿನಲ್ಲಿ ಒಂದು ತಿಂಗಳ ಹಸುಗೂಸು ಹೊಂದಿರುವ ಬಾಣಂತಿಯೊಬ್ಬರೂ ಇದ್ದಾರೆ.
ಈ ಹಿಂದೆ ಮಹಾರಾಷ್ಟ್ರದ ಮುಂಬೈನಿಂದ ವಲಸೆ ಬಂದವರಲ್ಲಿ ಹೆಚ್ಚಾಗಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿತ್ತು. ಈ ಕಾರಣಕ್ಕೆ ಈಗ ಸರ್ಕಾರ ಮಹಾರಾಷ್ಟ್ರದಿಂದ ಬರುವವರ ಮೇಲೆ ಹೆಚ್ಚು ನಿಗಾ ವಹಿಸಿದೆ.
ಜೂನ್ 1ರಿಂದ ಹೊರರಾಜ್ಯಕ್ಕೆ 16 ರೈಲುಗಳ ಸಂಚಾರ
ಅದರ ಪರಿಣಾಮವಾಗಿ ಮಂಗಳವಾರ ರೈಲು ಬರುವ ಹೊತ್ತಿಗೆಲ್ಲ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮತ್ತು ಎಸ್.ಪಿ.ಯತೀಶ್ ನಗರದ ರೈಲು ನಿಲ್ದಾಣದಲ್ಲಿ ಹಾಜರಿದ್ದು, ಎಲ್ಲಾ ಮುಂಜಾಗ್ರತೆ ಕ್ರಮಗಳು ಜಾರಿ ಆಗುವಂತೆ ನೋಡಿಕೊಂಡರು.
ಆರೋಗ್ಯ ಇಲಾಖೆಯ ವೈದ್ಯರು ಥರ್ಮಲ್ ಸ್ಕ್ಯಾನಿಂಗ್ ಮಾಡುವ ಮೂಲಕ ಪ್ರಾಥಮಿಕ ತಪಾಸಣೆ ನಡೆಸಿದರು.
ಜಿಲ್ಲಾಡಳಿತ ಆರೋಗ್ಯ ಇಲಾಖೆಯ ನೆರವಿನಿಂದ ವ್ಯವಸ್ಥೆ ಮಾಡಿರುವ ವಾಹನಗಳಲ್ಲಿ ಪ್ರಯಾಣಿಕರನ್ನು ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸುತ್ತಿದ್ದು, ಅಲ್ಲಿ ಅವರ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ.
50 ಲಕ್ಷ ವಲಸೆ ಕಾರ್ಮಿಕರನ್ನು 'ಗೂಡು' ಮುಟ್ಟಿಸಿದ ಶ್ರಮಿಕ್ ರೈಲು!
ದಾವಣಗೆರೆ ಮೂಲದ ಬಾಣಂತಿಯನ್ನು ತಪಾಸಣೆ ನಂತರ ಕಳುಹಿಸಿ ಕೊಡುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಸೋಂಕು ಲಕ್ಷಣವಿಲ್ಲದವರನ್ನು ಅವರ ಊರಿಗೆ ತಲುಪಿಸುವ ಜವಾಬ್ದಾರಿಯನ್ನು ಜಿಲ್ಲಾಡಳಿತ ಹೊತ್ತುಕೊಂಡಿದೆ.