ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1000 ದಿನ ದಾಟಿದ ರೈತರ ಹೋರಾಟ, ಸಗಣಿ ಸುರಿದುಕೊಂಡು ಪ್ರತಿಭಟನೆ

By ಗದಗ ಪ್ರತಿನಿಧಿ
|
Google Oneindia Kannada News

ನರಗುಂದ, ಏಪ್ರಿಲ್ 10: ರೈತ ಸೇನಾ ಕರ್ನಾಟಕದ ನೇತೃತ್ವದಲ್ಲಿ ಮಹದಾಯಿ, ಕಳಸ ಬಂಡೂರಿ ಹೋರಾಟ ಇಂದಿಗೆ 1000 ದಿನಗಳನ್ನು ಪೂರೈಸಿತು. ಇಷ್ಟು ಸುದೀರ್ಘವಾಗಿ ಹೋರಾಟ ನೆಡೆದರು ಹೋರಾಟಕ್ಕೆ ಪರಿಹಾರ ಕಾಣದೆ ಇರುವದು ದುರದೃಷ್ಟಕರ ಎಂದು ರೈತ ಸೇನಾ ಕರ್ನಾಟಕ ದ ರಾಜ್ಯ ಅಧ್ಯಕ್ಷರಾದ ಶ್ರೀ ವೀರೇಶ ಸೊಬರದಮಠ ಸ್ವಾಮೀಜಿ ಅವರು ಹೇಳಿದರು.

ಮಹದಾಯಿ ಹೋರಾಟಗಾರರ ಮೇಲೆ ಕೇಸು, ಮಾತು ತಪ್ಪಿದ ಸರ್ಕಾರ ಮಹದಾಯಿ ಹೋರಾಟಗಾರರ ಮೇಲೆ ಕೇಸು, ಮಾತು ತಪ್ಪಿದ ಸರ್ಕಾರ

ನರಗುಂದದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತೀಕ್ಷಣವಾಗಿ ತರಾಟೆಗೆ ತೆಗೆದುಕೊಂಡರು.

1000 days to Kalasa-Banduri protest

ತಮ್ಮ ಮೈಮೇಲೆ ಸಗಣಿಯನ್ನು ಸುರಿದುಕೊಂಡು ನರಗುಂದ ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು. ಸ್ವಾಮಿಗಳ ಜೊತೆಗೆ ನೂರಾರು ಸಂಖ್ಯೆಯಲ್ಲಿ ರೈತರು ಪ್ರತಿಟನೆಯಲ್ಲಿ ಭಾಗವಹಿಸಿದ್ದರು.

ಮಹದಾಯಿ ನ್ಯಾಯಾಧಿಕರಣದ ಅವಧಿ ವಿಸ್ತರಣೆ ಮನವಿ ತಿರಸ್ಕರಿಸಿದ ಕರ್ನಾಟಕಮಹದಾಯಿ ನ್ಯಾಯಾಧಿಕರಣದ ಅವಧಿ ವಿಸ್ತರಣೆ ಮನವಿ ತಿರಸ್ಕರಿಸಿದ ಕರ್ನಾಟಕ

1000 days to Kalasa-Banduri protest

ಕಳಸ-ಬಂಡೂರಿ ನಿರಂತರ ಧರಣಿ ಹೋರಾಟ ಇಂದಿಗೆ 1000 ನೆ ದಿನಕ್ಕೆ ಕಾಲಿಟ್ಟಿದ್ದು ನಿಜಕ್ಕೂ ದುರದೃಷ್ಟಕರ. ಇಲ್ಲಿಯವರೆಗೂ ಧನಾತ್ಮಕವಾಗಿ ಸ್ಪಂದಿಸದ ಸರ್ಕಾರಗಳನ್ನು ರೈತ ವಿರೋಧಿ ಸರ್ಕಾರ ಎಂದು ಜರಿದರು.

English summary
Naragunda farmers Mahadayi, Kalasa-Banduri protest complets 1000 days. Not yet any government respones to their protest. farmers continue to protest for the kalasa-banduri water project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X