ಬಹ್ರೇನ್ನಲ್ಲಿ ಕನ್ನಡ ಭವನಕ್ಕೆ ದೇವೇಗೌಡರಿಂದ ಶಂಕುಸ್ಥಾಪನೆ
ಬಹರೇನ್, ನವೆಂಬರ್ 13 : ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬಹ್ರೇನ್ನಲ್ಲಿ ನಿರ್ಮಿಸಲಾಗುತ್ತಿರುವ ಕನ್ನಡ ಭವನಕ್ಕೆ ದೇವೇಗೌಡರು ಶಂಕುಸ್ಥಾಪನೆ ಮಾಡಿದರು.
ಬಹ್ರೇನ್ ಕನ್ನಡ ಸಂಘ ಕನ್ನಡ ಭವನವನ್ನು ನಿರ್ಮಾಣ ಮಾಡುತ್ತಿದೆ. ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಎಚ್.ಡಿ. ದೇವೇಗೌಡರನ್ನು ಆಹ್ವಾನಿಸಲಾಗಿತ್ತು. ನವೆಂಬರ್ 11 ರಂದು ಪತ್ನಿ ಚೆನ್ನಮ್ಮ ಜೊತೆಗೆ ದೇವೇಗೌಡರು ದುಬೈಗೆ ತೆರಳಿದ್ದಾರೆ.
ವೈರಲ್ ವಿಡಿಯೋ: ಬುರ್ಜ್ ಖಲಿಫಾ ಮೇಲೆ ಮಹಾತ್ಮಾ ಗಾಂಧಿ ಪ್ರತ್ಯಕ್ಷ!
ಬಹ್ರೇನ್ ರಾಜಧಾನಿ ಮನಾಮಾದಲ್ಲಿ ಕನ್ನಡ ಭವನದ ನಿರ್ಮಾಣಕ್ಕೆ ದೇವೇಗೌಡರು ಮಂಗಳವಾರ ಪತ್ನಿ ಚೆನ್ನಮ್ಮ ಜೊತೆಗೆ ಶಂಕುಸ್ಥಾಪನೆ ಮಾಡಿದರು. ಕಾರ್ಯಕ್ರಮದಲ್ಲಿ ದುಬೈನ ಭಾರತೀಯ ರಾಯಭಾರಿ ಅಲೋಕ್ ಸಿನ್ಹಾ, ಅನಿವಾಸಿ ಕನ್ನಡಿಗರ ಸಂಘದ ಉಪಾಧ್ಯಕ್ಷೆ ಅರತಿ ಕೃಷ್ಣ ಮುಂತಾದವರು ಭಾಗವಹಿಸಿದ್ದರು.
ಚನ್ನಪಟ್ಟಣದಲ್ಲಿ ದೇವೇಗೌಡರ 6.9 ಅಡಿ ಕಂಚಿನ ಪ್ರತಿಮೆ ಸ್ಥಾಪನೆ
ಎಚ್.ಡಿ. ದೇವೇಗೌಡರು ವಿದೇಶ ಪ್ರವಾಸದಲ್ಲಿರುವ ಕಾರಣ ಸೋಮವಾರ ಮೃತಪಟ್ಟ ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಗೆ ಅಂತಿಮ ನಮನ ಸಲ್ಲಿಸಲು ಸಾಧ್ಯವಾಗಿಲ್ಲ. ಆದ್ದರಿಂದ, ವಿಡಿಯೋವೊಂದನ್ನು ಬಿಡುಗಡೆ ಮಾಡಿ ಸಂತಾಪ ಸೂಚಿಸಿದ್ದರು.
84ನೇ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ಅಂತಿಮ
ಇಂದು ಬಹ್ರೇನ್ ರಾಜಧಾನಿ ಮನಾಮಾದಲ್ಲಿ ಕನ್ನಡ ಭವನದ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದೆ. pic.twitter.com/k3K19h5eOK
— H D Devegowda (@H_D_Devegowda) November 13, 2018