ದುಬೈ ಪತ್ರಿಕೆಯಲ್ಲಿ ಭಾರತೀಯ ಮಾಧ್ಯಮದ ಮಾನ ಹರಾಜು!?
ದುಬೈ, ಫೆಬ್ರವರಿ 27: ನಟಿ ಶ್ರೀದೇವಿ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಭಾರತೀಯ ಮಾಧ್ಯಮಗಳು ತೋರುತ್ತಿರುವ ಅತ್ಯಾತುರ ನಡೆಯ ಕುರಿತು ದುಬೈ ಮಾಧ್ಯಮಗಳೂ ತಮ್ಮ ಅಸಹನೆ ಹೊರಹಾಕಿವೆಯಾ?
ಹೌದು, ಪ್ರಸಿದ್ಧ ದುಬೈ ಪತ್ರಿಕೆ ಖಾಲೀಜ್ ಟೈಮ್ಸ್, ತನ್ನ ಮುಖಪುಟದಲ್ಲಿ ಒಂದು ನ್ಯಾನೋ ಸಂಪಾದಕೀಯವನ್ನು ಪ್ರಕಟಿಸಿದ್ದು, ಅದರಲ್ಲಿ ಪರೋಕ್ಷವಾಗಿ ಭಾರತೀಯ ಮಾಧ್ಯಮದ ಮಾನಹರಾಜು ಹಾಕಿದೆ!
The Dubai newspaper @khaleejtimes has a "nano edit" on its front page today with these stellar words directed at detectives in Indian TV newsrooms trying to crack open the #SrideviDeathMystery: "To the media in India, we advise patience---a virtue in these trying times." pic.twitter.com/xNvdhwRPNL
— churumuri (@churumuri) February 27, 2018
ಅಗಲಿದ ಶ್ರೀದೇವಿಯನ್ನು ಮತ್ತೆ ಸಾಯಿಸಿದ ಮಾಧ್ಯಮಕ್ಕೆ ಛೀಮಾರಿ!
ಭಾರತೀಯ ನಟಿ ಶ್ರೀದೇವಿ ಅವರ ಸಾವಿ ನಿಜಕ್ಕೂ ದಿಗ್ಭ್ರಮೆ ಮೂಡಿಸಿದೆ. ಆದರೆ ಭಾರತೀಯ ಮಾಧ್ಯಮಗಳು ಅವರ ಸಾವಿನ ಕುರಿತು ಪುಂಖಾನುಪುಂಖವಾಗಿ ಕಥೆ ಬರೆಯುತ್ತಿರುವುದು ಸರಿಯಲ್ಲ. ತನಿಖೆ ಮುಕ್ತಾಯವಾಗುವವರೆಗೂ ಕಾಯಿರಿ.ಇಂಥ ಗಂಭೀರ ಸಮಯದಲ್ಲಿ ತಾಳ್ಮೆಯಿಂದಿರಲು ನಾವು ಭಾರತೀಯ ಮಾಧ್ಯಮಗಳಿಗೆ ಸಲಹೆ ನೀಡುತ್ತೇವೆ ಎಂಬರ್ಥದಲ್ಲಿ ಸಂಪಾದಕೀಯ ಪ್ರಕಟಿಸಲಾಗಿದೆ.