ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ: ವಿಕಲ ಚೇತನ ಯುವತಿಗೆ ಬಾಳ ಸಂಗಾತಿಯಾದ ವಿನಾಯಕ ಶಿಂಧೆ

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ಡಿಸೆಂಬರ್ 10: ಧಾರವಾಡದ ನಿವಾಸಿಗಳಾದ ವಿನಾಯಕ ಶಿಂಧೆ ಮತ್ತು ಮೀನಾಕ್ಷಿ ಕ್ಷೀರಸಾಗರ ಎಂಬ ಈ ಜೋಡಿ ಬುಧವಾರದಂದು ವಿಶೇಷ ವಿವಾಹವಾಗಿದ್ದಾರೆ.

ವಧು ಮೀನಾಕ್ಷಿ ಹುಟ್ಟಿದಾಗಿನಿಂದ ವಿಶೇಷ ಚೇತನಳಾಗಿದ್ದು, ಇನ್ನು ಈ ವಿಷಯ ಗೊತ್ತಿದ್ದರೂ ಸಹ ಇವಳನ್ನು ಮದುವೆಯಾಗಲು ಒಪ್ಪಿದ್ದು ಇದೇ ಧಾರವಾಡದ ವರ ವಿನಾಯಕ ಶಿಂಧೆ.

ಮೈಸೂರು-ಧಾರವಾಡ ಪ್ರತಿದಿನದ ರೈಲು ಸೇವೆ ವಿಸ್ತರಣೆಮೈಸೂರು-ಧಾರವಾಡ ಪ್ರತಿದಿನದ ರೈಲು ಸೇವೆ ವಿಸ್ತರಣೆ

ಧಾರವಾಡ ನಗರದ ಸೈದಾಪೂರದ ನಿವಾಸಿಯಾದ ವಧು ಮೀನಾಕ್ಷಿಯನ್ನು ಮದುವೆ ಮಾಡಿಕೊಂಡಿದ್ದು ವಿನಾಯಕ ಎಂಬ ಕಮಲಾಪುರ ನಿವಾಸಿಯಾಗಿದ್ದಾನೆ. ವಿನಾಯಕನಿಗೆ ಮೊದಲಿನಿಂದಲೂ ವಿಶೇಷ ಚೇತನಳೊಬ್ಬಳನ್ನು ಮದುವೆ ಮಾಡಿಕೊಳ್ಳಬೇಕು ಎಂದೇ ಆಸೆ ಇತ್ತು.

Dharwad: Young Man Married Physically Challenged Woman

ಈ ವೇಳೆ ಮೀನಾಕ್ಷಿ ಎಂಬ ಯುವತಿ ವಿಶೇಷ ಚೇತನಳಾಗಿದ್ದಾಳೆ ಎಂದು ತಿಳಿದ ವಿನಾಯಕ, ತನ್ನ ಪೋಷಕರ ಸಮ್ಮುಖದಲ್ಲಿ ಮೀನಾಕ್ಷಿಯನ್ನು ನೋಡಿ ಬಂದಿದ್ದ. ಎಲ್ಲರೂ ಒಪ್ಪಿಗೆ ಸೂಚಿಸಿದ್ದರಿಂದ ಡಿ.9 ರಂದು ಧಾರವಾಡ ಅಕ್ಕನ ಬಳಗ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಿತು.

Dharwad: Young Man Married Physically Challenged Woman

ಇನ್ನು ಈ ಮದುವೆಯಿಂದ ಮದುಮಗ ಎಷ್ಟು ಸಂತೋಷವಾಗಿದೆಯೋ ಅಷ್ಟೇ ಮದುಮಗಳು ಕೂಡಾ ಸಂತೋಷವಾಗಿದ್ದಾಳೆ. ತನಗೆ ಇರುವ ಈ ಸಮಸ್ಯೆಯಿಂದ ಯಾರಾದರೂ ಬಾಳ ಸಂಗಾತಿ ಸಿಗುತ್ತಾನೋ, ಇಲ್ಲವೋ ಅಂದುಕೊಂಡಿದ್ದ ವಿಶೇಷ ಚೇತನ ಯುವತಿ ಮೀನಾಕ್ಷಿಗೆ ಬುಧವಾರ ಅದ್ಧೂರಿ ಮದುವೆಯಾಗಿದ್ದು, ಜೀವನದ ಅತಿ ಸುಂದರ ಕ್ಷಣವಾಗಿತ್ತು. ಇನ್ನು ಈ ಶುಭ ಸಮಾರಂಭಕ್ಕೆ ಎರಡೂ ಕುಟುಂಬದ ಸದಸ್ಯರು ಸಾಕ್ಷಿಯಾದರು.

Recommended Video

Shimoga: ಗ್ರಾಮದಲ್ಲಿ ಪತ್ತೆಯಾಯ್ತು 8 ಅಡಿ ಉದ್ದದ ಕಾಳಿಂಗ ಸರ್ಪ! | Oneindia Kannada

ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

English summary
Vinayaka Shinde is married to Meenakshi, a young woman with Physically Challenged in Dharwad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X