ಧಾರವಾಡ: ವಿಕಲ ಚೇತನ ಯುವತಿಗೆ ಬಾಳ ಸಂಗಾತಿಯಾದ ವಿನಾಯಕ ಶಿಂಧೆ
ಧಾರವಾಡ, ಡಿಸೆಂಬರ್ 10: ಧಾರವಾಡದ ನಿವಾಸಿಗಳಾದ ವಿನಾಯಕ ಶಿಂಧೆ ಮತ್ತು ಮೀನಾಕ್ಷಿ ಕ್ಷೀರಸಾಗರ ಎಂಬ ಈ ಜೋಡಿ ಬುಧವಾರದಂದು ವಿಶೇಷ ವಿವಾಹವಾಗಿದ್ದಾರೆ.
ವಧು ಮೀನಾಕ್ಷಿ ಹುಟ್ಟಿದಾಗಿನಿಂದ ವಿಶೇಷ ಚೇತನಳಾಗಿದ್ದು, ಇನ್ನು ಈ ವಿಷಯ ಗೊತ್ತಿದ್ದರೂ ಸಹ ಇವಳನ್ನು ಮದುವೆಯಾಗಲು ಒಪ್ಪಿದ್ದು ಇದೇ ಧಾರವಾಡದ ವರ ವಿನಾಯಕ ಶಿಂಧೆ.
ಮೈಸೂರು-ಧಾರವಾಡ ಪ್ರತಿದಿನದ ರೈಲು ಸೇವೆ ವಿಸ್ತರಣೆ
ಧಾರವಾಡ ನಗರದ ಸೈದಾಪೂರದ ನಿವಾಸಿಯಾದ ವಧು ಮೀನಾಕ್ಷಿಯನ್ನು ಮದುವೆ ಮಾಡಿಕೊಂಡಿದ್ದು ವಿನಾಯಕ ಎಂಬ ಕಮಲಾಪುರ ನಿವಾಸಿಯಾಗಿದ್ದಾನೆ. ವಿನಾಯಕನಿಗೆ ಮೊದಲಿನಿಂದಲೂ ವಿಶೇಷ ಚೇತನಳೊಬ್ಬಳನ್ನು ಮದುವೆ ಮಾಡಿಕೊಳ್ಳಬೇಕು ಎಂದೇ ಆಸೆ ಇತ್ತು.
ಈ ವೇಳೆ ಮೀನಾಕ್ಷಿ ಎಂಬ ಯುವತಿ ವಿಶೇಷ ಚೇತನಳಾಗಿದ್ದಾಳೆ ಎಂದು ತಿಳಿದ ವಿನಾಯಕ, ತನ್ನ ಪೋಷಕರ ಸಮ್ಮುಖದಲ್ಲಿ ಮೀನಾಕ್ಷಿಯನ್ನು ನೋಡಿ ಬಂದಿದ್ದ. ಎಲ್ಲರೂ ಒಪ್ಪಿಗೆ ಸೂಚಿಸಿದ್ದರಿಂದ ಡಿ.9 ರಂದು ಧಾರವಾಡ ಅಕ್ಕನ ಬಳಗ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಿತು.
ಇನ್ನು ಈ ಮದುವೆಯಿಂದ ಮದುಮಗ ಎಷ್ಟು ಸಂತೋಷವಾಗಿದೆಯೋ ಅಷ್ಟೇ ಮದುಮಗಳು ಕೂಡಾ ಸಂತೋಷವಾಗಿದ್ದಾಳೆ. ತನಗೆ ಇರುವ ಈ ಸಮಸ್ಯೆಯಿಂದ ಯಾರಾದರೂ ಬಾಳ ಸಂಗಾತಿ ಸಿಗುತ್ತಾನೋ, ಇಲ್ಲವೋ ಅಂದುಕೊಂಡಿದ್ದ ವಿಶೇಷ ಚೇತನ ಯುವತಿ ಮೀನಾಕ್ಷಿಗೆ ಬುಧವಾರ ಅದ್ಧೂರಿ ಮದುವೆಯಾಗಿದ್ದು, ಜೀವನದ ಅತಿ ಸುಂದರ ಕ್ಷಣವಾಗಿತ್ತು. ಇನ್ನು ಈ ಶುಭ ಸಮಾರಂಭಕ್ಕೆ ಎರಡೂ ಕುಟುಂಬದ ಸದಸ್ಯರು ಸಾಕ್ಷಿಯಾದರು.
Recommended Video
ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್