ಧಾರವಾಡ; ಅಪರಿಚಿತ ವಾಹನ ಡಿಕ್ಕಿ, ಬೈಕ್ ಸವಾರರ ಸಾವು
ಧಾರವಾಡ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ಸವದತ್ತಿ ಧಾರವಾಡ ರಸ್ತೆಯ ಹಾರೊಬೆಳವಡಿ ಗ್ರಾಮದ ಬಳಿ ಸೋಮವಾರ ಸಂಜೆ ನಡೆದಿದೆ.
ಮೃತರಿಬ್ಬರು ನವಲಗುಂದ ತಾಲೂಕಿನ ಆಯಟ್ಟಿ ಗ್ರಾಮದವರು ಎಂದು ತಿಳಿದು ಬಂದಿದ್ದು, ಇಬ್ಬರೂ ಬೈಕ್ ಮೇಲೆ ಧಾರವಾಡದಿಂದ ಆಯಟ್ಟಿ ಗ್ರಾಮಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಮೃತ ದುರ್ದೈವಿಗಳನ್ನು ಲಕ್ಷ್ಮಣ (28) ಹಾಗೂ ಮೈಲಾರಿ (48) ಮೃತ ಗುರುತಿಸಲಾಗಿದ್ದು, ಡಿಕ್ಕಿ ಹೊಡೆದ ಅಪರಿಚಿತ ವಾಹನ ಪರಾರಿಯಾಗಿದೆ.
ಕುಶಾಲನಗರ; ಅಪಘಾತದಲ್ಲಿ ರಸ್ತೆ ಮೇಲೇ ಜೀವ ಬಿಟ್ಟ ಮೂರರ ಕಂದಮ್ಮ
ಘಟನೆ ನಡೆದ ಸ್ಥಳದಲ್ಲಿ ಬೇರೆ ವಾಹನ ಸವಾರರು ಅಪಘಾತಕ್ಕೊಳಗಾದವರನ್ನು ಉಳಿಸಲು ನೀರು ಕುಡಿಸಿದ್ದಾರೆ. ಆದರೆ, ಅಷ್ಟೊತ್ತಿಗೆ ಇಬ್ಬರೂ ಬೈಕ್ ಸವಾರರು ಅಸುನನೀಗಿದ್ದರು ಎಂದು ತಿಳಿದು ಬಂದಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
Comments
English summary
Two Persons Dead On spot In Bike Accident Near Dharwad. unnamed vehicale and driver escaped.
Story first published: Monday, December 16, 2019, 21:13 [IST]