ಭಾನುವಾರ ಧಾರವಾಡದಲ್ಲಿ ಚಿತ್ರ ತಾರೆಯರ ಕಲರವ
ಧಾರವಾಡ, ಫೆ. 9 : ಸಿನಿಮಾ ತಾರೆಯರ ಸಂಗಮಕ್ಕೆ ಧಾರವಾಡದ ಕರ್ನಾಟಕ ಕಾಲೇಜು ಮೈದಾನ ಸಿದ್ಧವಾಗಿ ನಿಂತಿದೆ. ಫೆ.9ರ ಭಾನುವಾರ ಸಂಜೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 2010-11, 2011-12ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ರಾಜ್ಯ
ಚಲನಚಿತ್ರ
ಪ್ರಶಸ್ತಿ
ಪ್ರದಾನ
ಸಮಾರಂಭಕ್ಕೆ
ಎಲ್ಲ
ಸಿದ್ಧತೆಗಳು
ಪೂರ್ಣಗೊಂಡಿದ್ದು,
ಕ್ಷಣಗಣನೆ
ಆರಂಭವಾಗಿದೆ
ಎಂದು
ವಾರ್ತಾ
ಇಲಾಖೆ
ನಿರ್ದೇಶಕ
ಎನ್.ಆರ್.
ವಿಶುಕುಮಾರ್
ಹೇಳಿದ್ದಾರೆ.
ಫೆ.9ರ
ಸಂಜೆ
6
ಗಂಟೆಗೆ
ಸಮಾರಂಭ
ಆರಂಭವಾಗಲಿದ್ದು,
ಮುಖ್ಯಮಂತ್ರಿ
ಸಿದ್ದರಾಮಯ್ಯ
ಕಾರ್ಯಕ್ರಮ
ಉದ್ಘಾಟಿಸಲಿದ್ದಾರೆ
ಎಂದು
ಅವರು
ತಿಳಿಸಿದರು.
ಕೆಸಿಡಿ ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ 2010-11, 2011-12ನೇ ಸಾಲಿನ 80 ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ವಿಶುಕುಮಾರ್ ಹೇಳಿದರು. ಕಾರ್ಯಕ್ರಮದಲ್ಲಿ ಸಚಿವರಾದ ಎಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್, ಉಮಾಶ್ರೀ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್.ಡಿ. ಗಂಗರಾಜು ಮುಂತಾದವರು ಪಾಲ್ಗೊಳ್ಳಲಿದ್ದಾರೆ. [ಪ್ರಶಸ್ತಿ ಪಟ್ಟಿ]
ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಕರ್ನಾಟಕ ಕಾಲೇಜಿನ ಪ್ರಧಾನ ಕಟ್ಟಡ ಮಾದರಿಯ 120x60 ಅಡಿ ವಿಸ್ತೀರ್ಣದ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. ಪ್ರಶಸ್ತಿ ಪ್ರದಾನ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಉತ್ತರ ಕರ್ನಾಟಕದ ಭಾಗದ ಸಂಸ್ಕೃತಿ ಬಿಂಬಿಸುವ ಹಾಡುಗಳು, ವರಕವಿ ದ.ರಾ.ಬೇಂದ್ರೆ ಹಾಡುಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ. 20 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದ್ದು, ಎಲ್ಸಿಡಿ ಪರದೆಗಳನ್ನು ಅಳವಡಿಸಲಾಗಿದೆ.