ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ: ಕುಡಿಯಲು ಹಣ ಕೊಡಲಿಲ್ಲವೆಂದು ತಾಯಿಯನ್ನೇ ಕೊಂದ ಮಗ

|
Google Oneindia Kannada News

ಧಾರವಾಡ, ಜುಲೈ 05: ಸಾರಾಯಿ ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮಗನೇ ಸ್ವಂತ ತಾಯಿಯನ್ನು ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ನಡೆದಿದೆ.

ಹೈದರಾಬಾದ್: ಪತ್ನಿಯನ್ನು ಕೊಂದು ದುಬೈಗೆ ಹಾರಿದ್ದ ಪತಿ ಬಂಧನ ಹೈದರಾಬಾದ್: ಪತ್ನಿಯನ್ನು ಕೊಂದು ದುಬೈಗೆ ಹಾರಿದ್ದ ಪತಿ ಬಂಧನ

ಶಂಕರವ್ವ ನಿಗದಿ (70) ಕೊಲೆಯಾದ ದುರ್ದೈವಿಯಾದರೆ, ವೀರಭಧ್ರಪ್ಪ ನಿಗದಿ (35) ಅಮ್ಮನ ಸಾರಾಯಿಗಾಗಿ ಬಲಿ ತೆಗೆದ ಪಾಪಿ. ಕಲಘಟಗಿ ತಾಲೂಕಿನ ಯಲವದಾಳ ಗ್ರಾಮದ ನಿವಾಸಿ ವೀರಭದ್ರಪ್ಪ ಕುಡಿತದ ಚಟಕ್ಕೆ ಬಿದ್ದು ನಿತ್ಯ ಕುಡಿಯಲು ಹಣ ನೀಡುವಂತೆ ತಾಯಿಗೆ ಪೀಡಿಸುತ್ತಿದ್ದ. ಅಂತೆಯೇ ಜೂ. 30ರಂದು ವೀರಭದ್ರಪ್ಪ ಸಾರಾಯಿ‌ ಕುಡಿಯಲು ಹಣ ಕೇಳಿದ್ದಾನೆ.

Son killed mother for not giving money for drinking alcohol

ಆಗ ತಾಯಿ ಶಂಕರವ್ವ ಹಣವಿಲ್ಲ ಎಂದಿದ್ದಾರೆ. ಇದರಿಂದ ಕೋಪಗೊಂಡ ಮಗ ಹೆತ್ತ ತಾಯಿಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡ ಶಂಕರವ್ವ ಅವರನ್ನು ಕಿಮ್ಸ್​ಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಶಂಕರವ್ವ ಮೃತಪಟ್ಟಿದ್ದಾರೆ. ಈ ಕುರಿತು ಕಲಘಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವೀರಭದ್ರಪ್ಪನನ್ನು ಪೋಲಿಸರು ಬಂಧಿಸಿದ್ದಾರೆ.

English summary
In Dharwad a son killed his own mother for refusing go give money to drink alcohol. accused son Veerabadrappa now been arrested by Dharwad police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X