ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ವಿಚಾರ: ಓವರ್ ಟು ಗೋವಿಂದ ಕಾರಜೋಳ

|
Google Oneindia Kannada News

ಧಾರವಾಡ, ಡಿ 23: ಜೆಡಿಎಸ್ ಪಕ್ಷ ಬಿಜೆಪಿ ಜೊತೆ ವಿಲೀನಗೊಳ್ಳಲಿದೆ ಎನ್ನುವ ಸುದ್ದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆಯನ್ನು ನೀಡಿದ್ದರೂ, ಅದರ ಸುತ್ತಮುತ್ತ ಇನ್ನೂ ಸುದ್ದಿಗಳು ಹೊಗೆಯಾಡುತ್ತಲೇ ಇದೆ.

ಈ ಬಗ್ಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪಷ್ಟನೆಯನ್ನು ನೀಡಿದ್ದಾರೆ. "ಕಾಂಗ್ರೆಸ್ ನಂಬಿಕೆಗೆ ಯೋಗ್ಯವಾದ ಪಕ್ಷವಲ್ಲ ಎನ್ನುವುದು ಜೆಡಿಎಸ್ ಮುಖಂಡರಿಗೆ ಗೊತ್ತಾಗಿದೆ. ಹಾಗಾಗಿ, ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ"ಎಂದು ಕಾರಜೋಳ ಹೇಳಿದ್ದಾರೆ.

ಆ ಲಿಂಬಾವಳಿ ಇದ್ದಾನಲ್ಲಾ ಅವನು ಥರ್ಡ್ ಕ್ಲಾಸ್, ಉಪಾಧ್ಯಕ್ಷ ಆಗಲಿಕ್ಕೆ ಅನ್ ಫಿಟ್ಆ ಲಿಂಬಾವಳಿ ಇದ್ದಾನಲ್ಲಾ ಅವನು ಥರ್ಡ್ ಕ್ಲಾಸ್, ಉಪಾಧ್ಯಕ್ಷ ಆಗಲಿಕ್ಕೆ ಅನ್ ಫಿಟ್

"ಕೆಲವೊಂದು ವಿಚಾರಗಳಲ್ಲಿ ನಾವು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದು ಹೌದು"ಎಂದು ಒಪ್ಪಿಕೊಂಡಿರುವ ಕಾರಜೋಳ, ವಿಲೀನ ವಿಚಾರ ಮಾತ್ರ ಶುದ್ದ ಸುಳ್ಳು ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

News On Alliance With JDS, DCM Govind Karjol Clarification

"ವಿಷಯಾಧಾರಿತವಾಗಿ ಜೆಡಿಎಸ್ ನಮ್ಮ ಜೊತೆ ಇದ್ದದ್ದು ಹೌದು. ವಿಧಾನಪರಿಷತ್ತಿನ ಸಭಾಪತಿಗಳು ಪಕ್ಷಪಾತಿ ನಿಲುವನ್ನು ತಾಳಿದ್ದರು. ಹೀಗಾಗಿ, ಈ ವಿಚಾರದಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ತಂದಿದ್ದೆವು. ಈ ವಿಷಯದಲ್ಲಿ ಮಾತ್ರ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು"ಎಂದು ಕಾರಜೋಳ ಹೇಳಿದ್ದಾರೆ.

"ಈ ವಿಚಾರ ಒಂದು ಬಿಟ್ಟರೆ, ಬೇರೆ ಏನೂ ನಮ್ಮ ನಡುವೆ ಚರ್ಚೆ ನಡೆದಿಲ್ಲ. ಈ ಹಿಂದೆಯೂ ಜೆಡಿಎಸ್ ಜೊತೆ ಸರಕಾರ ರಚಿಸಿದ್ದೆವು. ಕಾಂಗ್ರೆಸ್ ವಿಶ್ವಾಸಕ್ಕೆ ಯೋಗ್ಯವಾಗಿರುವ ಪಕ್ಷ ಅಲ್ಲ ಎನ್ನುವುದು ಜೆಡಿಎಸ್ ನವರಿಗೆ ಈಗ ತಿಳಿದಿದೆ"ಎಂದು ಕಾರಜೋಳ ವ್ಯಂಗ್ಯವಾಡಿದ್ದಾರೆ.

Recommended Video

9 ತಿಂಗಳ ಬಳಿಕ ದರ್ಶನ ನೀಡಿದ ಪುರಿ ಜಗನ್ನಾಥ ! | Oneindia Kannada

"ಯಡಿಯೂರಪ್ಪನವರು ನಮ್ಮ ಪ್ರಶ್ನಾತೀತ ನಾಯಕ. ಮುಖ್ಯಮಂತ್ರಿ ಬದಲಾವಣೆ ವಿಚಾರ ವರಿಷ್ಠರ ಮುಂದೆ ಇಲ್ಲವೇ ಇಲ್ಲ, ಪೂರ್ಣಾವಧಿಗೆ ಅವರೇ ನಮ್ಮ ಸಿಎಂ"ಕಾರಜೋಳ, ನಾಯಕತ್ವ ಬದಲಾವಣೆಯ ವಿಚಾರದಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ.

English summary
News On Alliance With JDS, DCM Govind Karjol Clarification,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X