ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆಶಿ ಮಾರಿಹಬ್ಬಕ್ಕೆ ಬಲಿಕೊಡುವ ಕೋಣ: ರೇಣುಕಾಚಾರ್ಯ

|
Google Oneindia Kannada News

ಕುಂದಗೋಳ, ಮೇ 11: ಸಚಿವ ಡಿಕೆ ಶಿವಕುಮಾರ್ ಅವರನ್ನು ಮಾರಿಹಬ್ಬಕ್ಕೆ ಬಲಿಕೊಡಲು ತಂದಿರುವ ಕೋಣದಂತೆ ಎಂದು ಹೋಲಿಕೆ ಮಾಡಿರುವ ಬಿಜೆಪಿ ಮುಖಂಡ ಎಂ.ಪಿ. ರೇಣುಕಾಚಾರ್ಯ, ಆ ಕೋಣವನ್ನು ಕಡಿದು ವಾಪಸ್ ಕಳಿಸಬೇಕು ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕುಂದಗೋಳ ಉಪ ಚುನಾವಣೆಗಾಗಿ ಕಳಸ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು, ಮಾರಿ ಹಬ್ಬದಲ್ಲಿ ಬಲಿ ಕೊಡುವ ಮುನ್ನ ಕೋಣಕ್ಕೆ ಎಣ್ಣೆ ಹಚ್ಚಿ ತಿಕ್ಕುತ್ತಾರೆ. ಹಾಗೆಯೇ ಇಲ್ಲಿ ಮಾರಿ ಕೋಣ ಬಲಿ ಕೊಡಬೇಕು ಎಂದು ಕಾಂಗ್ರೆಸ್‌ನವರು ಅವರನ್ನು ಕರೆತಂದಿದ್ದಾರೆ. ಮೊದಲು ಇಲ್ಲಿಗೆ ಬಂದಿರುವ ಕೋಣವನ್ನು ಕಡಿದು ವಾಪಸ್ ಕಳಿಸಬೇಕು ಎಂದು ರೇಣುಕಾಚಾರ್ಯ ಹೇಳಿದರು.

ಕುಂದಗೋಳ: ಕಾಂಗ್ರೆಸ್ ನಲ್ಲಿ ಗಂಡಸರಿಲ್ಲ, ಅದಕ್ಕೆ ಡಿಕೆಶಿಯನ್ನು ಕರೆತಂದಿರೋದುಕುಂದಗೋಳ: ಕಾಂಗ್ರೆಸ್ ನಲ್ಲಿ ಗಂಡಸರಿಲ್ಲ, ಅದಕ್ಕೆ ಡಿಕೆಶಿಯನ್ನು ಕರೆತಂದಿರೋದು

lok sabha elections 2019 Kundgol by elections bjp mp renukacharya congress dk shivakumar buffalo

ಡಿಕೆ ಶಿವಕುಮಾರ್ ಅವರು ಹರಕೆಯ ಕೋಣ. ಅವರು ಇಲ್ಲಿಗೆ ಬಂದು ಸಿ.ಎಸ್. ಶಿವಳ್ಳಿ ಅವರ ಹೆಸರು ಹೇಳಿ ಕಣ್ಣೀರಿಟ್ಟು ನಾಟಕ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

lok sabha elections 2019 Kundgol by elections bjp mp renukacharya congress dk shivakumar buffalo

ಡಿ.ಕೆ. ಶಿವಕುಮಾರ್ ಅವರು ಕನಕಪುರದ ಬಂಡೆ ಮಾತ್ರವಲ್ಲ, ಅವರು ಭ್ರಷ್ಟ ಬಂಡೆ ಎಂದು ಟೀಕಿಸಿದರು.

ರೇಣುಕಾಚಾರ್ಯ ಹೇಳಿಕೆಗೆ ತೀಕ್ಷ್ಣ ಉತ್ತರ ನೀಡಿರುವ ಡಿ.ಕೆ. ಶಿವಕುಮಾರ್, ಕೋಣವನ್ನು ಬಲಿಕೊಡೋದು ಊರಿಗೆ ಒಳ್ಳೆಯದಾಗಲಿ ಎಂದು. ಕುಂದಗೋಳ ಕ್ಷೇತ್ರಕ್ಕೆ ಒಳಿತಾಗುವುದಾದರೆ ಬಲಿಕೊಡಲಿ. ಬಿಜೆಪಿಯವರು ಮತ್ತು ಕಾಂಗ್ರೆಸ್ಸಿಗರು ಯಾರಾದರೂ ಬಲಿಕೊಡಲಿ ಎಂದರು.

ಕುಂದಗೋಳ ಉಪ ಚುನಾವಣೆ : ಬಿಜೆಪಿಗೆ ಶಾಕ್‌ ಕೊಟ್ಟ ಡಿಕೆಶಿಕುಂದಗೋಳ ಉಪ ಚುನಾವಣೆ : ಬಿಜೆಪಿಗೆ ಶಾಕ್‌ ಕೊಟ್ಟ ಡಿಕೆಶಿ

ಇದೇ ಸಂದರ್ಭದಲ್ಲಿ ಅವರು 'ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ' ಎಂಬ ಡಿವಿಜಿ ಅವರ ಕಗ್ಗವನ್ನು ನೆನಪಿಸಿಕೊಂಡರು. 'ಪಾಪ ರೇಣುಕಾಚಾರ್ಯ. ನನ್ನ ಜತೆ ಅವರು ಯುದ್ಧ ಮಾಡಬೇಕಾಗಿದೆ. ಇಂತಹವರ ಜತೆ ನಾನು ಯುದ್ಧ ಮಾಡುವುದಿಲ್ಲ' ಎಂದು ತಿರುಗೇಟು ನೀಡಿದರು.

ಐಟಿ ದಾಳಿಗೆ ಹೆದರಲಿಲ್ಲ ಇನ್ನು ಕಣ್ಣೀರು ಹಾಕಿ ಓಟು ಕೇಳ್ತೀನಾ?: ಡಿಕೆಶಿಐಟಿ ದಾಳಿಗೆ ಹೆದರಲಿಲ್ಲ ಇನ್ನು ಕಣ್ಣೀರು ಹಾಕಿ ಓಟು ಕೇಳ್ತೀನಾ?: ಡಿಕೆಶಿ

ಡಿಕೆ ಶಿವಕುಮಾರ್ ಅವರು ಹಣದ ಚೀಲ ಹಿಡಿದುಕೊಂಡು ಕುಂದಗೋಳಕ್ಕೆ ಬಂದಿದ್ದಾರೆ ಎಂಬ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಟಾಂಗ್ ನೀಡಿದ ಅವರು, 'ನಾನು ಹಣ ಇದ್ದರೆ ಅಕ್ಕನ ಚೀಲಕ್ಕೆ ಹಾಕುತ್ತೇನೆ' ಎಂದು ಚಟಾಕಿ ಹಾರಿಸಿದರು.

English summary
lok sabha elections 2019: BJP leader Renukacharya criticised Congress Minister DK Shivakumar as he is a buffalo for exvoto decimate in Kundgol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X