ಚುನಾವಣೆ: ಕೋಡಿಮಠಶ್ರೀ ಭವಿಷ್ಯದಲ್ಲಿ ಬದಲಾವಣೆ
ಧಾರವಾಡ, ಏ.5: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೋಡಿಮಠ ಶ್ರೀ ಮತ್ತೊಂದು ಭವಿಷ್ಯ ಹೇಳಿದ್ದಾರೆ. ಈ ಹಿಂದೆ ಯಾವುದೇ ಪಕ್ಷದ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದಿಲ್ಲವಾದರೂ ಮೋದಿ ನೇತೃತ್ವದ ಬಿಜೆಪಿ ಪಕ್ಷವು ಇತರೆ ಪಕ್ಷಗಳ ನೆರವಿನೊಂದಿಗೆ ಕೇಂದ್ರದಲ್ಲಿ ನೂತನ ಸರಕಾರ ಸ್ಥಾಪಿಸಲಿದೆ ಎಂದು ಹೇಳಿದ್ದಕ್ಕೆ ಈ ಬಾರಿ ತುಸು ಮಾರ್ಪಾಡು ತಂದಿದ್ದಾರೆ.
ಮಾಧ್ಯಮ ಸಂಸ್ಥೆಗಳು ಆಗಾಗ ಚುನಾವಣಾ ಸಮೀಕ್ಷೆಗಳನ್ನು ಪ್ರಕಟಿಸುವಂತೆ ಹಾಸನದ ಅರಸೀಕೆರೆಯ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರೂ ಸಹ ಕಾಲಕಾಲಕ್ಕೆ ಚುನಾವಣಾ ಭವಿಷ್ಯ ನುಡಿಯುತ್ತಿದ್ದಾರೆ. (ಕೋಡಿಮಠ ಶ್ರೀ ಈ ಹಿಂದೆ ನುಡಿದಿರುವ ಭವಿಷ್ಯಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ)
ಈ
ಬಾರಿ
ಅವರು
'ನಡೆಯುವ
ಹಾದಿ
ಮೂರು
ಕವಲಾಯಿತು.
ಮುತ್ತಿನ
ಗಿಣಿ
ಮುಪ್ಪಾಗಿ
ಮುತ್ತಾಯಿತೋ,
ಮುದುಕನ
ಕಾಲ
ಮೇಲೆ
ಕಾಗಿ
ಕುಳಿತಿತೋ'
ಎಂದು
ನಿಗೂಢವಾಗಿ/ಮಾರ್ಮಿಕವಾಗಿ
ಭವಿಷ್ಯ
ಹೇಳಿದ್ದಾರೆ.
ಇದರರ್ಥ
ಲೋಕಸಭಾ
ಚುನಾವಣೆಯಲ್ಲಿ
ಯಾವುದೇ
ಪಕ್ಷಕ್ಕೂ
ಸ್ಪಷ್ಟ
ಬಹುಮತ
ಸಿಗುವುದಿಲ್ಲವಂತೆ.
ದೇಶದಲ್ಲಿ ದೊಡ್ಡ ಘಟನೆಯೊಂದು ಸಂಭವಿಸಲಿದ್ದು ಶ್ರೀಮಂತರು ಮತ್ತು ಮಧ್ಯ ವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಲಿದ್ದಾರೆ. ಅಲ್ಲದೇ ಬೆಂಕಿಯ ಅವಘಡಗಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಲಿವೆ. ಈ ವರ್ಷ ಮಳೆ ಬೆಳೆ ಚೆನ್ನಾಗಿ ಆಗಲಿದ್ದು, ರೈತರಿಗೆ ಸುಖ ಸಮೃದ್ಧಿ ಪ್ರಾಪ್ತಿಯಾಗಲಿದೆ ಎಂದು ಕೋಡಿಮಠ ಸ್ವಾಮೀಜಿ ಭವಿಷ್ಯ ಹೇಳಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]