ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಟ್ಟುಹಬ್ಬ ಆಚರಿಸದಂತೆ ಅಭಿಮಾನಿಗಳಿಗೆ ಡಿ.ಕೆ.ಶಿವಕುಮಾರ್ ಮನವಿ

|
Google Oneindia Kannada News

Recommended Video

ಮೇ 15 ಡಿ ಕೆ ಶಿವಕುಮಾರ್ ಹುಟ್ಟುಹಬ್ಬ | ಆದರೆ ಆಚರಣೆ ಇಲ್ಲ

ಧಾರವಾಡ, ಮೇ 14: ನಾಳೆ (ಮೇ 15) ರಂದು ಸಚಿವ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬವಿದೆ, ಆದರೆ ತಮ್ಮ ಹುಟ್ಟುಹಬ್ಬವನ್ನು ಆಚರಿಸದಂತೆ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ರಾಜ್ಯದಾದ್ಯಂತ ಬರ ಇರುವ ಕಾರಣ ತಮ್ಮ ಅಭಿಮಾನಿಗಳು ಯಾರೂ ತಮ್ಮ ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ಮಾಡಬಾರದು ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಡಿಕೆಶಿ ವಿರುದ್ಧ ಹಣ ಹಂಚಿದ ಆರೋಪ: ಆಯೋಗಕ್ಕೆ ಬಿಜೆಪಿ ದೂರು ಡಿಕೆಶಿ ವಿರುದ್ಧ ಹಣ ಹಂಚಿದ ಆರೋಪ: ಆಯೋಗಕ್ಕೆ ಬಿಜೆಪಿ ದೂರು

ಡಿ.ಕೆ.ಶಿವಕುಮಾರ್ ಅವರು ಪ್ರಸ್ತುತ ಉಪಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದು, ಯಾರೂ ಸಹ ಹಾರ, ಸಿಹಿ ಹಿಡಿದು ಹುಬ್ಬಳ್ಳಿಗೆ ಬಾರದಂತೆ ಅಭಿಮಾನಿಗಳಿಗೆ ಹೇಳಿದ್ದಾರೆ. ತಮ್ಮ ಕಟೌಟ್ ಸಹ ಯಾರೂ ಹಾಕಬೇಡಿರೆಂದು ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.

Karnataka facing drought, do not celebrate my birthday : DK Shivakumar

ನಾಳೆ ಬೆಳಿಗ್ಗೆ ತಮ್ಮ ಹುಟ್ಟುಹಬ್ಬದ ನಿಮಿತ್ತ ಲಕ್ಷ್ಮೇಸ್ವರ ಸಮೀಪದ ಮುಕ್ತಿ ದೇವಾಲಯಕ್ಕೆ ಭೇಟಿ ನೀಡಿ ನಂತರ ಎಂದಿನಂತೆ ಚುನಾವಣಾ ಪ್ರಚಾರದಲ್ಲಿ ಡಿ.ಕೆ.ಶಿವಕುಮಾರ್ ಅವರು ತೊಡಗಿಕೊಳ್ಳಲಿದ್ದಾರೆ. ಆ ಮೂಲಕ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

ಹುಬ್ಬಳ್ಳಿಯಲ್ಲಿ ಮುಖಾಮುಖಿಯಾದ ಡಿಕೆಶಿ, ಶ್ರೀರಾಮುಲು! ಹುಬ್ಬಳ್ಳಿಯಲ್ಲಿ ಮುಖಾಮುಖಿಯಾದ ಡಿಕೆಶಿ, ಶ್ರೀರಾಮುಲು!

ರಾಜಕೀಯ ನಿಪುಣ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯದಾದ್ಯಂತ ಅಭಿಮಾನಿಗಳಿದ್ದು, ಪ್ರತಿ ವರ್ಷ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದರು, ಆದರೆ ಈ ಬಾರಿ ಬರ ಇರುವ ಕಾರಣ ಹುಟ್ಟುಹಬ್ಬ ಆಚರಣೆ ಬೇಡವೆಂದು ಡಿ.ಕೆ.ಶಿ ಹೇಳಿದ್ದಾರೆ.

English summary
DK Shivakumar request his fans and followers to not celebrate his birthday. He says Karnataka facing drought so do not celebrate birth day. DK Shivakumar birthday is tomorrow (May 15).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X