ಬಿಜೆಪಿ ಟಿಕೆಟ್ ವಂಚಿತ ನಿಂಬಣ್ಣವರ್ ಗೆ ಜನರಿಂದ ಧನಬಲ
ಧಾರವಾಡ, ಏಪ್ರಿಲ್ 22: 2018ರ ಚುನಾವಣೆ ನಾಮಪತ್ರ ಸಲ್ಲಿಸಲು ಕೆಲ ದಿನ ಮಾತ್ರ ಬಾಕಿ ಇದೆ. ಆದ್ರೆ ಧಾರವಾಡ ಜಿಲ್ಲೆಯ ಕಲಘಟಿಗೆ ವಿಧಾನಸಭಾ ಕ್ಷೇತ್ರದ ಬಿ ಜೆ ಪಿ ಟಿಕೇಟ್ ವಂಚಿತ ನಿಂಬಣ್ಣವರಗೆ ಇದುವರೆಗೂ ಬಿ ಜೆ ಪಿ ವರಿಷ್ಠರಿಂದ ಯಾವುದೇ ಸಂದೇಶ ಬಂದಿಲ್ಲ.
ಕಲಘಟಗಿ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಿಂಬಣ್ಣವರ್ ಕಣಕ್ಕೆ
ಹೀಗಿದ್ರೂ ಬಿ ಜೆ ಪಿ ಗೆ ಸಡ್ಡು ಹೊಡೆದಿಲ್ಲಾ ಬಂಡಾಯ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡಿಲ್ಲ. ಆದ್ರೆ ಕಲಘಟಗಿಯಲ್ಲಿ ಬಿಜೆಪಿ ಟಿಕೆಟ್ ವಂಚಿತ ನಿಂಬಣ್ಣವರಗೆ ಸ್ಥಳೀಯರು ಹಣ ನೀಡಿ ಪಕ್ಷೇತರಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಕಲಘಟಗಿ ಕ್ಷೇತ್ರದ ಟಿಕೆಟ್ ಮಹೇಶ ಟೆಂಗಿನಕಾಯಿಯವರಿಗೆ ನೀಡುತ್ತಿದ್ದಂತೆ ಕಲಘಟಗಿ ಬಿಜೆಪಿ ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ.
ಟಿಕೆಟ್
ವಂಚಿತ
ಸಿ
ಎಂ
ನಿಂಬಣ್ಣವರ್
ಅವರ
ಪರವಾಗಿ
ಈಗ
ಅವರ
ಬೆಂಬಲಿಗರು
ಒಂದು
ವೋಟು
ಒಂದು
ನೋಟು
ಅಭಿಯಾನ
ಆರಂಭಿಸಿದ್ದಾರೆ.
ಈ
ಮೂಲಕ
ಬಿಜೆಪಿ
ಬಂಡಾಯ
ಅಭ್ಯರ್ಥಿಯಾಗಿ
ಸ್ಪರ್ಧಿಸುವಂತೆ
ಅಭಿಮಾನಿಗಳು
ಪ್ರೇರೆಪಿಸುತ್ತಿದ್ದಾರೆ.
ಸಾರ್ವಜನಿಕರೆ ಹಣ ಸಂಗ್ರಹಿಸಿ ನಿಂಬಣ್ಣವರ್ ಅವರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಕಲಘಟಗಿ ಪಟ್ಟಣದ ಯುವಕ ಗಂಗಾಧರ ರಾಜಾಪುರ ಎಂಬಾತ ಹತ್ತು ಸಾವಿರ ಹಣ ನೀಡಿದ್ದಾನೆ. ಯುವಕ ಹಣ ನೀಡುತ್ತಿದಂತೆ ನಿಂಬಣ್ಣವರ್ ಕಣ್ಣೀರು ಸುರಿಸಿದರು. ಹೀಗೆ ಸಾರ್ವಜನಿಕರು ಸುಮಾರು ಐದು ಲಕ್ಷ. ರೂ ಗೂ ಹೆಚ್ಚು ಹಣ ಸಂಗ್ರಹಿಡಿ ಸ್ಪರ್ಧೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.