ಧಾರವಾಡದಲ್ಲಿ ಐಐಟಿ : ಅಧಿಕೃತ ಆದೇಶ ಪತ್ರ
ಧಾರವಾಡ, ಸೆಪ್ಟೆಂಬರ್, 09 : ಧಾರವಾಡದಲ್ಲಿ ಐಐಟಿ ಸ್ಥಾಪನೆ ಕುರಿತು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಅಧಿಕೃತ ಆದೇಶ ಹೊರಡಿಸಿದೆ. ಧಾರವಾಡ ತಾಲೂಕಿನ 507 ಎಕರೆ ಜಾಗದಲ್ಲಿ ಐಐಟಿ ಸ್ಥಾಪನೆಯಾಗಲಿದೆ.
ಬುಧವಾರ
ಈ
ಕುರಿತು
ಅಧಿಕೃತ
ಆದೇಶ
ಹೊರಡಿಸಲಾಗಿದೆ.
ಸೈಟ್
ಸೆಲೆಕ್ಷನ್
ಕಮಿಟಿ
ಶಿಫಾರಸಿನ
ಅನ್ವಯ
ಧಾರವಾಡದಲ್ಲಿ
ಐಐಟಿ
ಸ್ಥಾಪಿಸಲು
ನಿರ್ಧರಿಸಲಾಗಿದೆ.
ಐಐಟಿಗೆ
ಗುರುತಿಸಿರುವ
ಸ್ಥಳ
ಎಲ್ಲಾ
ಕಾನೂನು
ವಾಜ್ಯಗಳಿಂದ
ಹೊರತಾಗಿದೆ
ಎಂದು
ಆದೇಶದಲ್ಲಿ
ತಿಳಿಸಲಾಗಿದೆ.
[ಐಐಟಿ
ಸ್ಥಾಪನೆ
ರೇಸ್
:
ಗೆದ್ದ
ಧಾರವಾಡ]
ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಮತ್ತು ಕೆಲಗೇರಿಯ ಬಳಿಯ 507 ಎಕರೆ ಪ್ರದೇಶದಲ್ಲಿ ಐಐಟಿ ಸ್ಥಾಪನೆಯಾಗಲಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಐಐಟಿಗಾಗಿ ಶಾಶ್ವತ ಕಟ್ಟಡ ನಿರ್ಮಾಣವಾಗುವ ತನಕ water and land management institute ನಲ್ಲಿ ತಾತ್ಕಾಲಿಕ ಕ್ಯಾಂಪಸ್ ನಿರ್ಮಾಣ ಮಾಡಲಾಗುತ್ತದೆ. [ಅಸಲಿಗೆ, ಕರ್ನಾಟಕಕ್ಕೆ ಐಐಟಿ ಅಗತ್ಯವಿದೆಯಾ?]
ಕೇಂದ್ರ ಸರ್ಕಾರ 2015-16ನೇ ಸಾಲಿನ ಬಜೆಟ್ನಲ್ಲಿ ಕರ್ನಾಟಕದಲ್ಲಿ ಐಐಟಿ ಸ್ಥಾಪಿಸಲಾಗುತ್ತದೆ ಎಂದು ಘೋಷಿಸಿತ್ತು. ಮೈಸೂರು, ಹುಬ್ಬಳ್ಳಿ-ಧಾರವಾಡ, ರಾಯಚೂರು ಜಿಲ್ಲೆಗಳ ಹೆಸರನ್ನು ಐಐಟಿಗಾಗಿ ಕರ್ನಾಟಕ ಸರ್ಕಾರ ಸೂಚಿಸಿತ್ತು. ಅಂತಿಮವಾಗಿ ಧಾರವಾಡ ಜಿಲ್ಲೆಯಲ್ಲಿ ಆಯ್ಕೆ ಮಾಡಲಾಗಿದೆ.
ಐಐಟಿಗಾಗಿ ಸ್ಥಾಪನೆಗಾಗಿ ಭಾರೀ ಲಾಬಿ ನಡೆದಿತ್ತು. ಐಐಟಿಯನ್ನು ನಮ್ಮ ಜಿಲ್ಲೆಯಲ್ಲಿ ಸ್ಥಾಪಿಸುವಂತೆ ವಿವಿಧ ಸಂಸದರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಬೆಳಗಾವಿ, ಚಿತ್ರದುರ್ಗ, ಮೈಸೂರು, ದಾವಣಗೆರೆಯಲ್ಲಿ ಐಐಟಿ ಸ್ಥಾಪನೆಯಾಗಬೇಕು ಎಂದು ಮನವಿ ಸಲ್ಲಿಸಲಾಗಿತ್ತು.