ಹುಬ್ಬಳ್ಳಿ- ಧಾರವಾಡ ಪಾಲಿಕೆ ಚುನಾವಣೆ: ಬಿಜೆಪಿ, ಕಾಂಗ್ರೆಸ್ಗೆ ಸೆಡ್ಡು ಹೊಡೆದ ಟಿಕೆಟ್ ವಂಚಿತರು!
ಧಾರವಾಡ, ಆಗಸ್ಟ್ 24: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ದೊರೆಯದಿರುವುದು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ರಾಷ್ಟ್ರೀಯ ಪಕ್ಷಗಳು ಪಕ್ಷಗಳು ಬಂಡಾಯದ ಬಿಸಿ ಎದುರಿಸುವಂತಾಗಿದೆ. ಕೊನೆ ಕ್ಷಣದವರೆಗೂ ಟಿಕೆಟ್ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ಘೋಷಿತ ಪಟ್ಟಿಯಲ್ಲಿ ಹೆಸರು ಇಲ್ಲದ್ದನ್ನು ಕಂಡು ನಿರಾಸೆ ಅನುಭವಿಸಿದರು.
ಇದರಿಂದ ಅತೃಪ್ತಗೊಂಡ ಕಾರ್ಯಕರ್ತರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಮೂಲಕ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ. ಹೀಗಾಗಿ ಇನ್ನೆರಡು ದಿನ ಅಸಮಾಧಾನಿತರನ್ನು ಕರೆಸಿ ಸಮಾಧಾನಪಡಿಸುವ ಸವಾಲು ಪಕ್ಷದ ನಾಯಕರಿಗೆ ಎದುರಾಗಿದೆ. ಬಂಡಾಯಗಾರರು ಮಣಿಯದಿದ್ದಲ್ಲಿ ಎರಡೂ ಪಕ್ಷಗಳು ಗೆಲ್ಲಲು ನಿಟ್ಟುಸಿರು ಬಿಡಬೇಕಾಗುತ್ತದೆ.
ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ; 577 ನಾಮಪತ್ರ ಸಲ್ಲಿಕೆ
ಶನಿವಾರದವರೆಗೆ 68 ವಾರ್ಡ್ಗಳಲ್ಲಿ ಮೂರು ಹಂತದಲ್ಲಿ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ, 14 ವಾರ್ಡ್ಗಳಿಗೆ ಕುತೂಹಲ ಉಳಿಸಿಕೊಂಡಿತ್ತು. ನಾಮಪತ್ರ ಸಲ್ಲಿಕೆ ಕೊನೆ ದಿನ ಸೋಮವಾರ ನಾಲ್ಕನೇ ಪಟ್ಟಿಯಲ್ಲಿ 14 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡುವ ಮೂಲಕ ಹೆಚ್ಚಿನ ಬಂಡಾಯವನ್ನು ತಡೆಯಲೆತ್ನಿಸಿದೆ.
ರಾತ್ರಿ
ಬದಲಾದ
ಬಿ
ಫಾರ್ಮ್
ವಾರ್ಡ್
ನಂ.56ರಲ್ಲಿ
ಕಾಂಗ್ರೆಸ್
ಬಿ
ಫಾರ್ಮ್
ಪಡೆದಿದ್ದ
ಮಾಜಿ
ಮೇಯರ್
ವೆಂಕಟೇಶ
ಮೇಸ್ತ್ರಿ
ಪತ್ನಿ
ಚಂದ್ರಿಕಾಗೆ
ಸೋಮವಾರ
ಬೆಳಗ್ಗೆ
ನಿರಾಕರಿಸಿ,
ಎಸ್ಸಿ-
ಎಸ್ಟಿ
ಘಟಕ
ಅಧ್ಯಕ್ಷ
ಎಫ್.ಎಚ್.
ಜಕ್ಕಪ್ಪನವರ
ಸೊಸೆಗೆ
ಬಿ
ಫಾರ್ಮ್
ನೀಡಿದ್ದು
ಹೊಸ
ಬೆಳವಣಿಗೆಯಾಗಿದೆ.
ಅದೇ
ರೀತಿ
ವಾರ್ಡ್
ನಂ.54ರಲ್ಲಿ
ಶಿವಲೀಲಾ
ಹಿರೇಮಠಗೆ
ಟಿಕೆಟ್
ಘೋಷಿಸಲಾಗಿತ್ತು.
ಕೊನೆ
ಗಳಿಗೆಯಲ್ಲಿ
ದಾಬಡೆ
ಎಂಬುವವರಿಗೆ
ಬಿ
ಫಾರ್ಮ್
ನೀಡಲಾಗಿದೆ.
ಕಾಂಗ್ರೆಸ್ನಲ್ಲಿ
ಹೆಚ್ಚಾದ
ಬಂಡಾಯ
ಕೊನೆ
ಕ್ಷಣದವರಿಗೂ
ಬೆಂಬಲಿಗರಿಗೆ
ಟಿಕೆಟ್
ಕೊಡಿಸುವಲ್ಲಿ
ನಿರತರಾಗಿದ್ದ
ವೀರೇಶ
ಉಂಡಿ
ಸೇರಿ
ಹಲವು
ಹಾಲಿ
ಸದಸ್ಯರಿಗೆ
ಹಾಗೂ
ಆಕಾಂಕ್ಷಿಗಳಿಗೆ
ಟಿಕೆಟ್
ನಿರಾಕರಿಸಲಾಗಿದ್ದು,
ಸಹಜವಾಗಿ
ಪಕ್ಷದ
ಮುಖಂಡರ
ವಿರುದ್ಧ
ಆಕ್ರೋಶ
ವ್ಯಕ್ತವಾಗಿದೆ.
ವೀರೇಶ
ಉಂಡಿ
ಪಕ್ಷೇತರರಾಗಿ
ನಾಮಪತ್ರ
ಸಲ್ಲಿಸಿದ್ದಾರೆ.
ವಾರ್ಡ್
ನಂ.52ರಲ್ಲಿ
ಆಕಾಂಕ್ಷಿಯಾಗಿದ್ದ
ಚೇತನ
ಹಿರೇಕೆರೂರ
ಸಹ
ಸ್ವತಂತ್ರ
ಅಭ್ಯರ್ಥಿಯಾಗಿದ್ದಾರೆ.
ಟಿಕೆಟ್ ತಪ್ಪಿಸಿದ್ದಾರೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ವಿರುದ್ಧ ಅಸಮಾಧಾನಗೊಂಡಿರುವ ಗಣೇಶ ಟಗರಗುಂಟಿ ವಾರ್ಡ್ ನಂ.71ರಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಮೂಲಕ ಸವಾಲು ಒಡಿದ್ದಾರೆ. ವಾರ್ಡ್ ನಂ.50ರಲ್ಲಿ ಮಂಜುಳಾ ಯಾತಗೇರಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತ ಅಭ್ಯರ್ಥಿ ಮಂಗಳಾ ಹಿರೇಮಠಗೆ ಸ್ಪರ್ಧೆ ನೀಡಿದ್ದಾರೆ.
ಅದೇ ರೀತಿ ವಾರ್ಡ್ ನಂ.82ರಲ್ಲಿ ಕಾಂಗ್ರೆಸ್ನ ಕಟ್ಟಾಳು ಮೋಹನ ಅಸುಂಡಿ ಪತ್ನಿ ಅಕ್ಷತಾ ತೀವ್ರ ಅಸಮಾಧಾನಗೊಂಡು ಬಂಡಾಯ ಎದ್ದಿದ್ದು, ಶಾಸಕರಿಗೆ ಪ್ರತಿರೋಧ ತೋರಿದ್ದಾರೆ. ಮತ್ತೊಂದೆಡೆ ವಾರ್ಡ್ ನಂ.68ರಲ್ಲಿ ಮಹಮ್ಮದ್ ಮುಧೋಳ ಎಂಬುವರು ಕೂಡ ಬಂಡಾಯ ಸಾರಿದ್ದಾರೆ.
ಕೊನೆ
ಕ್ಷಣದಲ್ಲಿ
ಕಣಕ್ಕಿಳಿದ
ʼಕೈʼ
ಅಭ್ಯರ್ಥಿಗಳು
ವಾರ್ಡ್
ನಂಬರ್
36,
37
ಹಾಗೂ
38ನೇ
ವಾರ್ಡ್ನಲ್ಲಿ
ಮೊದಲು
ಕಾಂಗ್ರೆಸ್
ಟಿಕೆಟ್ಗೆ
ಅರ್ಜಿ
ಸಲ್ಲಿಸಿದ
ಅಭ್ಯರ್ಥಿಗಳು
ಕೊನೆಕ್ಷಣದಲ್ಲಿ
ಪಕ್ಷ
ಟಿಕೆಟ್
ನೀಡುವುದಾಗಿ
ಹೇಳಿದ್ದರೂ
ಸ್ಪರ್ಧೆಯಿಂದ
ಹಿಂದೆ
ಸರಿದು
ಆಶ್ಚರ್ಯ
ಮೂಡಿಸಿದ್ದರು.
ಪಕ್ಷವು
ಬೇರೆಯವರ
ಹೆಸರನ್ನು
ಪರಿಗಣಿಸಲು
ಮುಂದಾದಾಗ
ಅವರು
ಕೂಡಾ
ಸ್ಪರ್ಧಿಸಲು
ನಿರಾಕರಿಸಿದರು.
842
ಮತಗಟ್ಟೆಗಳಲ್ಲಿ
ಮತದಾನಕ್ಕೆ
ವ್ಯವಸ್ಥೆ
"ಹುಬ್ಬಳ್ಳಿ-
ಧಾರವಾಡ
ಮಹಾನಗರ
ಪಾಲಿಕೆ
ಚುನಾವಣೆ
ಸಿದ್ಧತೆ
ನಡೆದಿದ್ದು,
842
ಮತಗಟ್ಟೆಗಳಲ್ಲಿ
ಮತದಾನಕ್ಕೆ
ವ್ಯವಸ್ಥೆ
ಮಾಡಲಾಗುವುದು,"
ಎಂದು
ಮಹಾನಗರ
ಪಾಲಿಕೆ
ಆಯುಕ್ತ
ಡಾ.
ಸುರೇಶ
ಇಟ್ನಾಳ
ಹೇಳಿದ್ದಾರೆ.
ಮಾಧ್ಯಮರೊಂದಿಗೆ ಮಾತನಾಡಿದ ಅವರು, "ಒಟ್ಟು 4041 ಸಿಬ್ಬಂದಿ ಮತದಾನ ಕಾರ್ಯದಲ್ಲಿ ಪಾಲ್ಗೊಳ್ಳುವರು. ಪ್ರತಿ ಮತಗಟ್ಟೆಗೆ 4 ಸಿಬ್ಬಂದಿ ನಿಯೋಜನೆ ಮಾಡಲಾಗುವುದು. 63 ಸೆಕ್ಟರ್ ಅಧಿಕಾರಿಗಳು ಮತದಾನ ಪ್ರಕ್ರಿಯೆ ಜವಾಬ್ದಾರಿ ನಿಭಾಯಿಸುವರು," ಎಂದು ತಿಳಿಸಿದರು.
"ಧಾರವಾಡದಲ್ಲಿ ಬಾಸೆಲ್ಮಿಷನ್ ಸ್ಕೂಲ್, ಹುಬ್ಬಳ್ಳಿಯಲ್ಲಿ ಲ್ಯಾಮಿಂಗ್ಟನ್ ಶಾಲೆ ಹಾಗೂ ಸರಕಾರಿ ಪಾಲಿಟೆಕ್ನಿಕ್ನಲ್ಲಿ ತರಬೇತಿ ಕೇಂದ್ರಗಳನ್ನು ಮಾಡಲಾಗಿದ್ದು, ಧಾರವಾಡದಲ್ಲಿ ಆಗಸ್ಟ್ 27 ರಂದು ಹಾಗೂ ಹುಬ್ಬಳ್ಳಿಯಲ್ಲಿ ಆ.29 ರಂದು ಸಿಬ್ಬಂದಿಗೆ ತರಬೇತಿ ನೀಡಲಾಗುವುದು," ಎಂದು ತಿಳಿಸಿದರು.
Recommended Video
"ಮತಯಂತ್ರಗಳ ಪರಿಶೀಲನೆ ಮಾಡಲಾಗಿದ್ದು, ಸದ್ಯಕ್ಕೆ 1035 ಮತಯಂತ್ರಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಯಾವ ವಾರ್ಡ್ನಲ್ಲಿ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಉಳಿಯುತ್ತಾರೋ ಅಲ್ಲಿನ ಬೂತ್ಗಳಲ್ಲಿ ಎರಡು ಮತಯಂತ್ರಗಳ ಅವಶ್ಯಕತೆಯಿರುತ್ತದೆ. ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮತಯಂತ್ರಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ," ಎಂದು ಹೇಳಿದರು.
"ಈ ಚುನಾವಣೆಯಲ್ಲಿ ಪಿಂಕ್ ಬೂತ್ ಸೇರಿದಂತೆ ಯಾವುದೇ ವಿಶೇಷ ಬೂತ್ ಇರುವುದಿಲ್ಲ. ಕೋವಿಡ್ ನಿಯಮಾವಳಿಗಳ ಪಾಲನೆ ಮಾಡಲಾಗುವುದು. ಮಾಸ್ಕ್ ಕಡ್ಡಾಯವಾಗಿದೆ. ಮತದಾನ ನಡೆಯುವ ಮುನ್ನ ಮತದಾನ ನಡೆಯುವ ಮತಗಟ್ಟೆ ಸ್ಯಾನಿಟೈಸ್ ಮಾಡಲಾಗುವುದು," ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಮಾಹಿತಿ ನೀಡಿದರು.