ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿರುಕಿದೆ ಎಂದು ಕಟ್ಟಡದೊಳಗೆ ಪಿಲ್ಲರ್ ನಿರ್ಮಿಸಿದ್ದೇ ದುರಂತಕ್ಕೆ ಕಾರಣವಾಯ್ತಾ?

|
Google Oneindia Kannada News

ಧಾರವಾಡ, ಮಾರ್ಚ್ 21: ಧಾರವಾಡದಲ್ಲಿ ನಿರ್ಮಾಣ ಹಂತದಲ್ಲಿದ್ದ ಐದು ಅಂತಸ್ತಿನ ಕಟ್ಟಡ ಕುಸಿದು ಈಗಾಗಲೇ 10 ಮಂದಿಯ ಬಲಿ ಪಡೆದಿದೆ. ಹಾಗಾದರೆ ಈ ದುರಂತಕ್ಕೆ ಕಾರಣವೇನು ಎಂಬುದನ್ನು ಗಮನಿಸಬೇಕಿದೆ.

ಏಕಾ ಏಕಿ 5 ಅಂತಸ್ತಿನ ಕಟ್ಟಡ ಹಾಗೆಯೇ ಕುಸಿಯುತ್ತದೆ ಎಂದರೆ ಆಶ್ಚರ್ಯವಾಗುವುದು ಹೌದು, ಈ ಮೊದಲೇ ತಿಳಿಸಿದಂತೆ ಒಂದು ಕಳಪೆ ಕಾಮಗಾರಿ ಮತ್ತೊಂದು ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಿಲ್ಲರ್ ನಿರ್ಮಾಣ ಮಾಡಿದ್ದೇ ಈ ಅವಘಡಕ್ಕೆ ಕಾರಣವಾಯಿತು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಧಾರವಾಡ ಕಟ್ಟಡ ದುರಂತ : ಅವಶೇಷದಡಿ 12 ಜನರ ಸಾವು-ಬದುಕಿನ ಹೋರಾಟ ಧಾರವಾಡ ಕಟ್ಟಡ ದುರಂತ : ಅವಶೇಷದಡಿ 12 ಜನರ ಸಾವು-ಬದುಕಿನ ಹೋರಾಟ

ಕಟ್ಟಡ ಬಿದ್ದ ಬಳಿಕ ಅಲ್ಲಿದ್ದ ಸ್ಥಳೀಯರು ಮೊದಲು ಹೇಳಿದ್ದೇ ಇದು ಯಾವತ್ತೋ ಬಿದ್ದು ಹೋಗುತ್ತೆ ಅಂತ ಅಂದುಕೊಂಡಿದ್ವಿ, ಅನುಮತಿ ತೆಗೆದುಕೊಂಡಿದ್ದೇ ಒಂದು ಇವರು ನಿರ್ಮಿಸಿದ್ದೇ ಇನ್ನೊಂದು, ಕಟ್ಟಡದೊಳಗೆ ಪಿಲ್ಲರ್ ನಿರ್ಮಾಣ ಮಾಡಿದ್ದೇ ಈ ಅನಾಹುತಗಳಿಗೆ ಕಾರಣವಾಗಿದೆ ಎಂದು ದೂರಿದ್ದಾರೆ.

Here is the reason behind Dharwad building collapse

ಈ ಕಟ್ಟಡವನ್ನು ನಿರ್ಮಿಸುವಾಗ ಪಿಲ್ಲರ್​ಗಳನ್ನು ಸದೃಢವಾಗಿ ಹಾಕಿರಲಿಲ್ಲ. ಪಿಲ್ಲರ್​ಗಳ ಸಾಮರ್ಥ್ಯ ಕಡಿಮೆ ಇದ್ದ ಕಾರಣ ಕಟ್ಟಡ ಕುಸಿಯುವ ಒಂದು ವಾರ ಹಿಂದಿನಿಂದ ಪಿಲ್ಲರ್​ ಸುತ್ತ ಗುಂಡಿ ತೆಗೆದು ಪಿಲ್ಲರ್​ಗೆ ಹೆಚ್ಚುವರಿ ಸ್ಟೀಲ್​ ಜೋಡಿಸಿ ಅದರ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ನಡೆಯುತ್ತಿತ್ತು. ಈ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲೆ ಕಟ್ಟಡ ಕುಸಿದು ಬಿದ್ದಿದೆ.

English summary
Here is the main reason behind Dharwad building collapse, Pillar construction in the complex is the main reason.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X