ಬಿರುಕಿದೆ ಎಂದು ಕಟ್ಟಡದೊಳಗೆ ಪಿಲ್ಲರ್ ನಿರ್ಮಿಸಿದ್ದೇ ದುರಂತಕ್ಕೆ ಕಾರಣವಾಯ್ತಾ?
ಧಾರವಾಡ, ಮಾರ್ಚ್ 21: ಧಾರವಾಡದಲ್ಲಿ ನಿರ್ಮಾಣ ಹಂತದಲ್ಲಿದ್ದ ಐದು ಅಂತಸ್ತಿನ ಕಟ್ಟಡ ಕುಸಿದು ಈಗಾಗಲೇ 10 ಮಂದಿಯ ಬಲಿ ಪಡೆದಿದೆ. ಹಾಗಾದರೆ ಈ ದುರಂತಕ್ಕೆ ಕಾರಣವೇನು ಎಂಬುದನ್ನು ಗಮನಿಸಬೇಕಿದೆ.
ಏಕಾ ಏಕಿ 5 ಅಂತಸ್ತಿನ ಕಟ್ಟಡ ಹಾಗೆಯೇ ಕುಸಿಯುತ್ತದೆ ಎಂದರೆ ಆಶ್ಚರ್ಯವಾಗುವುದು ಹೌದು, ಈ ಮೊದಲೇ ತಿಳಿಸಿದಂತೆ ಒಂದು ಕಳಪೆ ಕಾಮಗಾರಿ ಮತ್ತೊಂದು ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಿಲ್ಲರ್ ನಿರ್ಮಾಣ ಮಾಡಿದ್ದೇ ಈ ಅವಘಡಕ್ಕೆ ಕಾರಣವಾಯಿತು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಧಾರವಾಡ ಕಟ್ಟಡ ದುರಂತ : ಅವಶೇಷದಡಿ 12 ಜನರ ಸಾವು-ಬದುಕಿನ ಹೋರಾಟ
ಕಟ್ಟಡ ಬಿದ್ದ ಬಳಿಕ ಅಲ್ಲಿದ್ದ ಸ್ಥಳೀಯರು ಮೊದಲು ಹೇಳಿದ್ದೇ ಇದು ಯಾವತ್ತೋ ಬಿದ್ದು ಹೋಗುತ್ತೆ ಅಂತ ಅಂದುಕೊಂಡಿದ್ವಿ, ಅನುಮತಿ ತೆಗೆದುಕೊಂಡಿದ್ದೇ ಒಂದು ಇವರು ನಿರ್ಮಿಸಿದ್ದೇ ಇನ್ನೊಂದು, ಕಟ್ಟಡದೊಳಗೆ ಪಿಲ್ಲರ್ ನಿರ್ಮಾಣ ಮಾಡಿದ್ದೇ ಈ ಅನಾಹುತಗಳಿಗೆ ಕಾರಣವಾಗಿದೆ ಎಂದು ದೂರಿದ್ದಾರೆ.
ಈ ಕಟ್ಟಡವನ್ನು ನಿರ್ಮಿಸುವಾಗ ಪಿಲ್ಲರ್ಗಳನ್ನು ಸದೃಢವಾಗಿ ಹಾಕಿರಲಿಲ್ಲ. ಪಿಲ್ಲರ್ಗಳ ಸಾಮರ್ಥ್ಯ ಕಡಿಮೆ ಇದ್ದ ಕಾರಣ ಕಟ್ಟಡ ಕುಸಿಯುವ ಒಂದು ವಾರ ಹಿಂದಿನಿಂದ ಪಿಲ್ಲರ್ ಸುತ್ತ ಗುಂಡಿ ತೆಗೆದು ಪಿಲ್ಲರ್ಗೆ ಹೆಚ್ಚುವರಿ ಸ್ಟೀಲ್ ಜೋಡಿಸಿ ಅದರ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ನಡೆಯುತ್ತಿತ್ತು. ಈ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲೆ ಕಟ್ಟಡ ಕುಸಿದು ಬಿದ್ದಿದೆ.