10 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ: ಸಚಿವ ಕಾಗೋಡು ತಿಮ್ಮಪ್ಪ
ಧಾರವಾಡ, ಆಗಸ್ಟ್, 12: ಡಿಸೆಂಬರ್ ಅಂತ್ಯದೊಳಗೆ ರಾಜ್ಯದ 10 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಗುರಿ ಹೊಂದಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ತಿಳಿಸಿದ್ದಾರೆ.
ಹಿಂಗಾರು ಬರ ಪರಿಸ್ಥಿತಿ ನಿರ್ವಹಣೆ, ಪ್ರಸಕ್ತ ಮುಂಗಾರು ಮಳೆ ವಿವರ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಕುರಿತು ನಡೆದ ಧಾರವಾಡದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.[ಕಾಗೋಡು ಜಾಗಕ್ಕೆ ಕೋಳಿವಾಡ]
ಪ್ರತಿಯೊಂದು ಕುಟುಂಬವೂ ತನ್ನ ಹಕ್ಕಿನ ಜಾಗದಲ್ಲಿಯೇ ವಾಸಿಸಬೇಕು. ಪಂಚಾಯಿತಿ ಗೆ ಸೇರಿದ ಜಾಗದಲ್ಲಿ ವಾಸಿಸುತ್ತಿರುವವರಿಗೆ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಪಿಡಿಓ ಅಧಿಕಾರಿಗಳು ತಕ್ಷಣ ಹಕ್ಕುಪತ್ರ ನೀಡಬೇಕು ಎಂದು ಅವರು ಸೂಚಿಸಿದರು.[ಕಂದಾಯ ಸಚಿವರಾಗಿ ಕಾಗೊಡು ಪ್ರಮಾಣ: ಬದಲಾವಣೆ ತರುವರೆ?]
ಗ್ರಾಮೀಣ ಭಾಗಗಳ ಹೊಲಗಳಿಗೆ, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ರಸ್ತೆ ನಿರ್ಮಿಸಲು, ವಹಿವಾಟು ರಸ್ತೆಗಳನ್ನು ಗ್ರಾಮದ ನಕಾಶೆಯಲ್ಲಿ ಸೇರಿಸಲು ಹೊಸ ಕಾಯ್ದೆ ರೂಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.