ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ: 25 ಗಣೇಶ ಕರಗಿಸಲು ತೆಗೆದುಕೊಂಡಿದ್ದು ಕೇವಲ 2 ಗಂಟೆ

|
Google Oneindia Kannada News

ಧಾರವಾಡ, ಆಗಸ್ಟ್ 27: ಧಾರವಾಡ ಜಿಲ್ಲೆ ಕೆಲಗೇರಿಯ ಗಾಯತ್ರಿಪುರಂನಲ್ಲಿ ಪರಿಸರ ಸ್ನೇಹಿ ಕಲಾವಿದ ಮಂಜುನಾಥ್ ಹಿರೇಮಠ ಎಂಬುವವರು ಕೇವಲ ಎರಡು ಗಂಟೆಗಳಲ್ಲಿ 25 ಸಾರ್ವಜನಿಕ ಗಣೇಶಗಳನ್ನು ಕರಗಿಸಿದ್ದಾರೆ.

Recommended Video

ಮೈಸೂರಿನ ರಾಜಮನೆತನದ Yaduveer Krishnadatta ರಾಜಕೀಯದ ಬಗ್ಗೆ ಮಹತ್ವದ ನಿರ್ಧಾರ | Oneindia Kannada

ಮೂರು ಟ್ರ್ಯಾಕ್ಟರ್ ಟ್ರೈಲರ್ ಗಳನ್ನು ಬಳಸಿಕೊಂಡು, ಗಣೇಶ ಮೂರ್ತಿ ಕರಗಿಸಲು ಕೇವಲ 1 ಸಾವಿರ ಲೀಟರ್ ನೀರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಪೈಪ್ ಮೂಲಕ ತುಂತುರು ನೀರು ಬಿಡುವ ಮೂಲಕ ಮಣ್ಣಿನ ಗಣೇಶನನ್ನು ಕರಗಿಸಲಾಯಿತು.

 ಗರಗಕ್ಕೆ ಭೇಟಿ ನೀಡಿ ಖಾದಿ ಬಳಕೆಗೆ ಕರೆ ನೀಡಿದ ನಟಿ ಅಮೂಲ್ಯ ಪತಿ ಗರಗಕ್ಕೆ ಭೇಟಿ ನೀಡಿ ಖಾದಿ ಬಳಕೆಗೆ ಕರೆ ನೀಡಿದ ನಟಿ ಅಮೂಲ್ಯ ಪತಿ

ಗಣೇಶ ಮೂರ್ತಿ ಕರಗಿಸಿದ ನಂತರ ಆ ಮಣ್ಣಿನಲ್ಲಿ ತುಳಸಿ ಗಿಡ ನೆಟ್ಟು, ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸುವ ಮೂಲಕ ಕಲಾವಿದ ಮಂಜುನಾಥ್ ಹಿರೇಮಠ ಜನರ ಗಮನ ಸೆಳೆದಿದ್ದಾರೆ. ಜಲ ಮೂಲಗಳು ಮಲೀನವಾಗುವುದನ್ನು ತಡೆಯಲು ಕಲಾವಿದ ಮಂಜುನಾಥ್ ಹಿರೇಮಠ ಅವರು ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

Ganesha Idol Dissolution To Eco-Friendly In Dharwad

ಪ್ರಾತಿನಿಧಿಕ ಚಿತ್ರ

ಇದೇ ವೇಳೆ ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯ ಜನಜಾಗೃತಿ ಅಧ್ಯಕ್ಷ ಬಸವರಾಜ ಕೊರವರ ಅವರು ನಿರ್ಮಿಸಿದ ಮಣ್ಣಿನ ಹೊಂಡದಲ್ಲಿ ಬುಧವಾರ ಸಂಜೆ 60 ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.

ಧಾರವಾಡದ ವನವಾಸಿ ರಾಮಮಂದಿರದಲ್ಲಿ ವೀರ ಸಾವರ್ಕರ್ ಗೆಳೆಯರ ಬಳಗ, ರೋಟರಿ ಕ್ಲಬ್, ಮಾಲಿನ್ಯ ನಿಯಂತ್ರಣ ಮಂಡಳಿ ಹೀಗೆ ಇನ್ನೂ ಹಲವು ಕಡೆಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಂತಹ ಪರಿಸರ ಸ್ನೇಹಿ ಕೆಲಸಗಳು ಸಮಾಜದಲ್ಲಿ ಇನ್ನು ಹೆಚ್ಚು ಹೆಚ್ಚು ನಡೆಯಲಿ ಎನ್ನು ಪರಿಸರ ಪ್ರೇಮಿಗಳ ಆಶಯವಾಗಿದೆ.

English summary
Eco-friendly artist Manjunath Hiremath has dissolved 25 public Ganesha Idols in just two hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X