ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದು ವಿರುದ್ಧ ಅಧಿಕಾರ ದುರ್ಬಳಕೆ ಆರೋಪ ಮಾಡಿದ ಹಿರೇಮಠ

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ಜನವರಿ 29: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಬೆಂಗಳೂರು ಉತ್ತರ ವಲಯದ ಮಾಚೋಹಳ್ಳಿ ಸರ್ವೇ ನಂಬರ್ 81ರಲ್ಲಿ ಅರಣ್ಯ ಭೂಮಿಯನ್ನು ಸಂಘ-ಸಂಸ್ಥೆಗಳಿಗೆ 30 ವರ್ಷ ಗುತ್ತಿಗೆ ಕೊಟ್ಟಿದ್ದಾರೆ. ಇದು ಅಕ್ಷಮ್ಯ ಅಪರಾಧ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆರೋಪ ಮಾಡಿದರು.

'ಭೂ ಹಗರಣದಲ್ಲಿ ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ್''ಭೂ ಹಗರಣದಲ್ಲಿ ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ್'

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸಪೇಟೆ ಶಾಸಕ ಆನಂದ ಸಿಂಗ್ ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳುತ್ತಿರುವುದು ಸರಿಯಲ್ಲ. ಶ್ರೀರಾಮುಲು 100 ಕೋಟಿ ರುಪಾಯಿ ಮನೆ ಕಟ್ಟಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿಲ್ಲ ಎಂದು ಅವರು ಹೇಳಿದರು.

CM Siddaramaiah misuse his power, SR Hiremath alleges

ಫೆಬ್ರವರಿ 24ರಿಂದ ಕೂಡಲಸಂಗಮದಲ್ಲಿ ಮಹಾಮೈತ್ರಿ ಮೊದಲ ಸಭೆ ನಡೆಯಲಿದೆ. ಚುನಾವಣೆ ಸಂಬಂಧ ಹೊಸದಾಗಿ ಹುಟ್ಟಿಕೊಂಡಿರುವ ಪಕ್ಷಗಳನ್ನು ಮೂಲೆಗೆ ಸೇರಿಸುವುದು ನಮ್ಮ ಉದ್ದೇಶ. ಫೆಬ್ರವರಿಯಲ್ಲಿ ಕೇಂದ್ರ ಸರಕಾರದಿಂದ ಮಂಡನೆಯಾಗಲಿರುವ ಬಜೆಟ್ ಉಪಯೋಗವಿಲ್ಲ. ಬಜೆಟ್ ಬಗ್ಗೆ ಮೋದಿಗೂ ಗೊತ್ತಿಲ್ಲ. ಅರುಣ್ ಜೇಟ್ಲಿಗೂ ಗೊತ್ತಿಲ್ಲ ಎಂದು ಹೇಳಿದರು.

English summary
Karnataka CM Siddaramaiah misuse his power and allotted 30 acres of forest land to some organisations on 30 years contract in Bengaluru north Machohalli, alleged by Samaja parivartana samudaya chief SR Hiremath in Dharwad on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X